Wednesday, September 28, 2022

The way corruption has come about

ಭ್ರಷ್ಟಾಚಾರ ನಡೆದು ಬಂದ ದಾರಿ


ಭ್ರಷ್ಟಾಚಾರವನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಸ್ವರೂಪದ ಬಗ್ಗೆ ಖಚಿತ ಅಭಿಪ್ರಾಯ ವಿರುವುದು ಅಗತ್ಯ. ಭ್ರಷ್ಟಾಚಾರವನ್ನು ಸರಿಯಾಗಿ ಅರ್ಥಮಾಡಿ ಕೊಂಡಾಗ ಮಾತ್ರ ಅದಕ್ಕೊಂದು ಪರಿಹಾರ ಮಾರ್ಗ ಸೂಚಿಸಲು ಸಾಧ್ಯ. ಆದರೆ ಭ್ರಷ್ಟಾಚಾರವನ್ನು ಸುಲಭವಾಗಿ ಕೆಲವೊಂದು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅದರ ಆಳ, ವಿಸ್ತಾರ ಮತ್ತು ವೈವಿಧ್ಯತೆಯಿಂದ ಭ್ರಷ್ಟಾಚಾರ ತರ್ಕಕ್ಕೆ ಸಿಲುಕಿ ದಷ್ಟು ಸಂಕೀರ್ಣವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್‌ನೆಟ್‌ನಲ್ಲಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ `ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್‌ನೆಟ್ ನಲ್ಲಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ `ಭ್ರಷ್ಟಾಚಾರ’ ಎಂಬ ಪದ ನಮೂದಿಸಿದೊಡನೆ ಕೋಟಿಗೂ ಹೆಚ್ಚು ಲೇಖನ,  ಪುಸ್ತಕ, ವರದಿ, ಸಮೀಕ್ಷೆ ಇತ್ಯಾದಿ ಗೋಚರಿಸುತ್ತದೆ. ಅದೇ ಜಾಗದಲ್ಲಿ `ಭಾರತದಲ್ಲಿ ಭ್ರಷ್ಟಾಚಾರ’ ಎಂದು ನಮೂದಿಸಿದರೆ ಇದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಾಹಿತಿ ಸಾಮಾಗ್ರಿ ದೊರೆಯುತ್ತದೆ. ಇಷ್ಟಾದರೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಭ್ರಷ್ಟಾಚಾರವನ್ನು ವಿವರಿಸಲು ಆಗಿಲ್ಲ. ವಿಶ್ವ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ತನ್ನ ಸಮರ ಆರಂಭಿಸುವ ಸಂದರ್ಭದಲ್ಲಿ [೨೦೦೨] ಭ್ರಷ್ಟಾಚಾರವನ್ನು ಅರ್ಥೈಸುವುದು ಬೇಡವೆಂದು ಅದರ ಬದಲಾಗಿ ಭ್ರಷ್ಟಾಚಾರದ ವಿವಿಧ ಮಾದರಿಗಳನ್ನು ಗುರುತಿಸುವುದು ಸೂಕ್ತ ಎಂಬ ನಿರ್ಧಾರ ಕೈಗೊಂಡಿತು.

ಮೂಲಭೂತವಾಗಿ ಭ್ರಷ್ಟಾಚಾರ ಲ್ಯಾಟಿನ್ ಪದ `ಕರಪ್ಟಸ್’ ನಿಂದ ಬಂದಿದೆ. ಕರಪ್ಟಸ್ ಎಂದರೆ ಒಡೆಯುವುದು ಅಥವಾ ಮುರಿಯುವುದು ಎಂದರ್ಥ. ನೈತಿಕ, ಸಾಮಾಜಿಕ ಅಥÀವಾ ಆಡಳಿತಾತ್ಮಕ ನಿಯಮಗಳನ್ನು ಮುರಿಯು ವುದು ಭ್ರಷ್ಟಾಚಾರವಾದೀತು. ಜರ್ಮನಿಯ ಟ್ರಾನ್ಸ್ಫರೆನ್ಸಿ ಇಂಟರ್‌ನ್ಯಾಷನಲ್ [ಟಿಐ] ಸಂಸ್ಥೆಯು ಸಾರ್ವಜನಿಕ ಅಧಿಕಾರವನ್ನು ಸ್ವಂತ ಲಾಭಕ್ಕೆ ದುರುಪಯೋಗ ಮಾಡಿಕೊಳ್ಳುವುದೇ ಭ್ರಷ್ಟಾಚಾರ ಎಂದು ಹೇಳಿತ್ತು. ಆದರೆ ಸರ್ಕಾರದ ಅನೇಕ ಯೋಜನೆಗಳು ಮತ್ತು ಕರ್ತವ್ಯಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭವಾದಾಗ ಈ ಅರ್ಥವನ್ನು ವಿಸ್ತಾರಗೊಳಿಸಿ `ಅಧಿಕಾರವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವುದು ಭ್ರಷ್ಟಾಚಾರ’ ಎಂಬ ನಿಲುವನ್ನು ತೆಗೆದುಕೊಂಡಿತು. ಸ್ಥೂಲವಾಗಿ ಹೇಳುವುದಾದರೆ ಸಾರ್ವಜನಿಕ ಸೇವಕರು ತಮ್ಮ ಸ್ಥಾನಮಾನವನ್ನು ತಮ್ಮ ಅಥವಾ ಅವರಿಗೆ ಬೇಕಾದವರ ವೈಯಕ್ತಿಕ ಲಾಭಕ್ಕೆ ದುರುಪಯೋಗ ಮಾಡಿ ಕೊಂಡರೆ ಅದು ಭ್ರಷ್ಟಾಚಾರವಾಗುತ್ತದೆ. ಭ್ರಷ್ಟಾಚಾರ ನಾಲ್ಕು ಅಂಶಗಳಿಂದ ಕೂಡಿದೆ. ಅವುಗಳೆಂದರೆ (೧) ಹುದ್ದೆಯ ಅಥವಾ ಅಧಿಕಾರದ ದುರುಪಯೋಗ (೨) ದುರಪಯೋಗದ ಲಾಭ ಪಡೆಯುವ ಫಲಾನುಭವಿಗಳು (೩) ಗೌಪ್ಯತೆ ಹಾಗೂ (೪) ಭ್ರಷ್ಟಾಚಾರದಲ್ಲಿ ಭಾಗಿಯಾಗದ ಅಮಾಯಕರ ಮೇಲೆ ಉಂಟಾಗುವ ದುಷ್ಪರಿಣಾಮ.

ಅರವತ್ತರ ದಶಕದವರೆಗೂ ಭ್ರಷ್ಟಾಚಾರವನ್ನು ನೈತಿಕ ನೆಲೆಗಟ್ಟಿನ ಮೇಲೆ ಚರ್ಚಿಸಲಾಗುತ್ತಿತ್ತು. ಅನಂತರ ಸಾರ್ವಜನಿಕ ಅಧಿಕಾರದ ದುರುಪಯೋಗದ ಹಿನ್ನೆಲೆಯಲ್ಲಿ ಭ್ರಷ್ಟಾಚಾರವನ್ನು ನೋಡುವ ಕ್ರಮ ಆರಂಭವಾಯಿತು. ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಆರಂಭವಾದಾಗಿನಿಂದ ಭ್ರಷ್ಟಾಚಾರವನ್ನು ಮತ್ತೊಂದು ರೀತಿಯಲ್ಲಿ ಪರಿಗಣಿಸಲಾಗುತ್ತಿದೆ.

ಸರ್ಕಾರವನ್ನು ತನ್ನ ಬಿಗಿ ಮುಷ್ಠಿಯಲ್ಲಿ ಇರಿಸಿಕೊಳ್ಳಲು ಮಾರುಕಟ್ಟೆ (ಉದ್ಯಮ) ಕೈಗೊಳುವ ಎಲ್ಲ ಕ್ರಮವನ್ನು ಭ್ರಷ್ಟಾಚಾರದ ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಏಸಿಯಾ ಪೆಸಿಫಿಕ್ ಮಾನವ ಅಭಿವೃದ್ಧಿ ವರದಿ (೧೯೯೭)ಯು ಭ್ರಷ್ಟಾಚಾರವನ್ನು ಪ್ರಿನ್ಸಿಪಾಲ್, ಏಜೆಂಟ್ ಮತ್ತು ಕ್ಲಯೆಂಟ್ ಎಂಬ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತದೆ. ಪ್ರಿನ್ಸಿಪಾಲರೇ ಆ ಕೆಲಸವನ್ನು ಮಾಡಲಾಗದ ಕಾರಣ ಏಜೆಂಟ್‌ಗಳನ್ನು ನೇಮಕ ಮಾಡುತ್ತಾರೆ. ಸರ್ಕಾರದ ದೃಷ್ಠಿಯಿಂದ ನೋಡುವುದಾದರೆ ಚುನಾಯಿತ ಪ್ರತಿನಿಧಿಗಳನ್ನು ಪ್ರಿನ್ಸಿಪಾಲ್ ಎಂದು ಅಧಿಕಾರಿಗಳನ್ನು ಏಜೆಂಟ್ ಎಂದು ಪರಿಗಣಿಸಬಹುದು. ನಾಗರಿಕರು ಕ್ಲಯೆಂಟ್ ಆಗುತ್ತಾರೆ. ಖಾಸಗಿ ವಲಯದಲ್ಲಿಯೂ ಇದನ್ನು ಕಾಣಬಹುದು. ಕಂಪನಿಗಳ ಮಾಲೀಕರನ್ನು ಪ್ರಿನ್ಸಿಪಾಲ್ ಎಂದು ಮತ್ತು ಅವರು ನೇಮಕ ಮಾಡುವ ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಯನ್ನು ಏಜೆಂಟ್ ಎಂದು ಪರಿಗಣಿಸಬಹುದು. ಸಾರ್ವಜನಿಕ ಆಡಳಿತದಲ್ಲಾಗಲೀ ಅಥವಾ ಕಂಪನಿಯ ಆಡಳಿತಕ್ಕಾಗಲಿ ಇದೊಂದು ಉತ್ತಮ ವ್ಯವಸ್ಥೆ. ಆದರೆ ಸಮಸ್ಯೆ ಉದ್ಭವಿಸುವುದು ಏಜೆಂಟ್‌ಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತಮಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸಿದಾಗ. ಸಾಮಾನ್ಯವಾಗಿ ಈ ಏಜೆಂಟ್‌ಗಳು ವ್ಯವಹಾರ ಚತುರರು. ಅವರು ಪ್ರಿನ್ಸಿಪಾಲ್‌ಗಿಂತ ಹೆಚ್ಚಿನ ಮಾಹಿತಿ ಹೊಂದಿರುತ್ತಾರೆ. ಈ ಅವಕಾಶವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. 

ಭ್ರಷ್ಟಾಚಾರವೆಂದರೆ ಅದೊಂದು ಮೋಹಜಾಲ, ಪ್ರಲೋಭನೆ. ಸ್ವಾರ್ಥಕ್ಕಾಗಿ ಆಮಿಷ ನೀಡಿ ಅಧಿಕಾರಿಗಳನ್ನು ಪುಸಲಾಯಿಸುವುದು ಅಥವಾ ಗ್ರಾಹಕರ, ಸಾರ್ವಜನಿಕರ ಅಗತ್ಯಗಳನ್ನು ಪೂರೈಸಿ ಪಡೆಯುವ ಯಾವುದೇ ಸ್ವರೂಪದ ಪ್ರತಿಫಲವೂ ಭ್ರಷ್ಟಾಚಾರವೇ. ಭ್ರಷ್ಟಾಚಾರಕ್ಕೆ ಅದೆಷ್ಟು ಮುಖಗಳಿವೆ-ಎಂಬುದೇ ಒಂದು ನಿಗೂಢ ಪ್ರಶ್ನೆ.

ಸೇವೆ, ಪಕ್ಷಪಾತ (ನೆರವು) ಅಥವಾ ಯಾವುದೇ ಸ್ವಹಿತಕ್ಕಾಗಿ ಲಾಭ, ಪ್ರಯೋಜನ, ಉಡುಗೊರೆ, ಹಣ, ಸಾಲ, ಶುಲ್ಕ, ಲಂಚ, ರುಷುವತ್ತು ಅಥವಾ ಸಂತೋಷ ಪಡಿಸುವುದು ಎಂದರೇನು? ಯಾವುದೇ ಕೆಲಸವನ್ನು ಕೈಗೊಳ್ಳಲು ಒಪ್ಪಿ ಕೊಳ್ಳುವುದು ಅಥವಾ ನಿರ್ದಿಷ್ಟ ಸ್ಥಾನಮಾನವನ್ನೋ ನೌಕರಿಯನ್ನೋ ಕೊಡಿಸಲು ಭರವಸೆ ನೀಡುವುದು. ಆಸ್ತಿಪಾಸ್ತಿ ಪ್ರತಿಫಲ ೫೦೦ ಡಾಲರ್ ಅಷ್ಟೇ! ನಿಮಗೆ ಪರವಾನಗಿ ನೀಡಲು ಅನುಮತಿ ನೀಡುತ್ತೇನೆ

೫೦೦ ಡಾಲರ್ ಸಾಕು! ನೀನು ಅತಿವೇಗದಿಂದ ಕಾರು ಓಡಿಸಿದೆಯಲ್ಲಾ? ಆ ಆಪಾದನೆಯನ್ನು ಕೈಬಿಟ್ಟೆ ಎಂದಿಟ್ಟುಕೊ....

ಕೇಂದ್ರ ಸರ್ಕಾರವು ೧೯೪೭ರಲ್ಲಿ ಸಂತಾನಮ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಲಹೆ ನೀಡುವುದು ಈ ಸಮಿತಿಯ ಉದ್ದೇಶವಾಗಿತ್ತು. ಸಮಿತಿಯು ಭ್ರಷ್ಟಾಚಾರವನ್ನು ತಡೆಗಟ್ಟಲು ಅನೇಕ ಉಪಯುಕ್ತ ಸೂಚನೆಗಳನ್ನು ನೀಡಿತಾದರೂ, ಭ್ರಷ್ಟಾಚಾರದ ಮೂಲ ಸ್ವರೂಪದ ಬಗ್ಗೆ ಖಚಿತವಾಗಿ ತನ್ನ ಅಭಿಪ್ರಾಯ ತಿಳಿಸಲಿಲ್ಲ. ಸಾರ್ವಜನಿಕ ಸ್ಥಾನ ಅಥವಾ ಹುದ್ದೆಯೊಂದಿಗೆ ಇರುವ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರ ಎಂಬುದು ಸಮಿತಿಯ ಅಭಿಪ್ರಾಯವಾಗಿತ್ತು. ಲಂಚ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಕಾಯ್ದೆ ೧೯೪೭ ಹಾಗೂ ಇಂಡಿಯನ್ ಫೀನಲ್ ಕೋಡ್ (ಸೆಕ್ಷನ್ ೧೬೧) ಸಹ ಭ್ರಷ್ಟಾಚಾರಕ್ಕೆ ತನ್ನದೆ ಆದ ಅರ್ಥವನ್ನು ನೀಡಿದೆ. ಇವೆಲ್ಲವೂ ಭ್ರಷ್ಟಾಚಾರದ ಒಂದೆರಡು ಮಗ್ಗಲುಗಳನ್ನು ಮಾತ್ರ ಪರಿಗಣಿಸುತ್ತದೆ. ಆದರೆ ಗ್ರೀಕ್ ಚರಿತ್ರೆಯಲ್ಲಿ ಬರುವ ಅನೇಕ ಮುಖಗಳುಳ್ಳ ರಕ್ಷ `ಹೈಡ್ರಾ’ನಂತೆ ಭ್ರಷ್ಟಾಚಾರಕ್ಕೆ ಅನೇಕ ಪಾರ್ಶ್ವಗಳಿವೆ. ಈ ವಿಷಯದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಹೆಚ್ಚು ಉಪಯುಕ್ತ ಎಂದು ತೋರುತ್ತದೆ. ಕೌಟಿಲ್ಯ ತನ್ನ `ಅರ್ಥಶಾಸ್ತ್ರ’ದಲ್ಲಿ ಭ್ರಷ್ಟಾಚಾರದ ಅನೇಕ ಮುಖಗಳ ಪರಿಚಯ ಮಾಡಿಕೊಟ್ಟಿದ್ದಾನೆ. ಭ್ರಷ್ಟರಿಗೆ ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ಸಹ ವಿವರಿಸಿದ್ದಾನೆ.

ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳಲು ಕ್ಲಿಟ್ ಗಾರ್ಡ್ ಎಂಬ ಶಾಸ್ತ್ರಜ್ಞ ಸರಳ ಸಿದ್ದಾಂತವನ್ನು ರೂಪಿಸಿದ್ದಾನೆ. ಆತನ ಪ್ರಕಾರ ಉತ್ತರದಾಯಿತ್ವ ಇಲ್ಲದೆ ಏಕಾಧಿಕಾರದ ಜೊತೆಗೆ ವಿವೇಚನಾಧಿಕಾರ ಸೇರಿದರೆ ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದನ್ನು ಸಾಂಕೇತಿಕವಾಗಿ ಹೀಗೆ ಹೇಳಿದ್ದಾನೆ.

ಅ=ಒ+ಆ-ಂ ಇಲ್ಲಿ ಅ ಎಂದರೆ ಕರಪ್‌ಷನ್ [ಭ್ರಷ್ಟಾಚಾರ], ಒ ಎಂದರೆ ಮೊನಾಪಲಿ [ಏಕಾಧಿಕಾರ] ಆ ಎಂದರೆ ಡಿಸ್‌ಕ್ರೀಷನ್ [ವಿವೇಚನಾಧಿಕಾರ] ಮತ್ತು ಂ ಎಂದರೆ ಅಕೌಂಟಬಲಿಟಿ [ಉತ್ತರದಾಯಿತ್ವ]. ಈ ಸಿದ್ದಾಂತದ ಪ್ರಕಾರ ಸಾರ್ವಜನಿಕ ಅಧಿಕಾರಿಗೆ ನೀಡಿರುವ ಅಧಿಕಾರ ಮತ್ತು ವಿವೇಚನಾಧಿಕಾರ ಭ್ರಷ್ಟಾಚಾರವನ್ನು ನಿರ್ಧರಿಸುತ್ತದೆ. ಅತ್ಯಂತ ಹೆಚ್ಚು ನಿಯಂತ್ರಣಕ್ಕೆ ಒಳಪಟ್ಟ ದೇಶಗಳಲ್ಲಿ ಏಕಾಧಿಕಾರ ಹೆಚ್ಚಾಗಿರುತ್ತದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿವೇಚನಾ ಅಧಿಕಾರ ಹೆಚ್ಚಾಗಿರುತ್ತದೆ. ದುರ್ಬಲ ಆಡಳಿತ ವ್ಯವಸ್ಥೆ ಹಾಗೂ ಅದಕ್ಷತೆಯಿಂದ ಕೂಡಿದ ನಿಯಂತ್ರಣ ಪ್ರಾಧಿಕಾರಗಳು ಇದ್ದಲ್ಲಿ ಉತ್ತರದಾಯಿತ್ವ ದುರ್ಬಲ ವಾಗಿರುತ್ತದೆ. ಇದೆಲ್ಲವೂ ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಡುತ್ತದೆ. ಆದ್ದರಿಂದ ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದರೆ ಅಧಿಕಾರಿಗಳ ಎಕಾಧಿಕಾರಕ್ಕೆ ತಡೆಹಾಕಬೇಕು. ಜೊತೆಗೆ ಅಧಿಕಾರಿಗಳ ವಿವೇಚನಾ ಅಧಿಕಾರವನ್ನು ಆದಷ್ಟು ಕಡಿಮೆ ಮಾಡಿ ಉತ್ತರದಾಯಿತ್ವ ಹೆಚ್ಚಿಸಬೇಕು. ಆರೋರಾ ಡಾಲಿ ಪ್ರಕಾರ ಭ್ರಷ್ಟಾಚಾರವನ್ನು ಮೂರು ರೀತಿ ವಿಂಗಡಿಸಬಹುದು. ಮೊದಲನೆಯ ದರಲ್ಲಿ ವ್ಯಕ್ತಿ ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಸೌಲಭ್ಯವನ್ನು ಪಡೆಯುತ್ತಾನೆ. ಇದಕ್ಕೆ ಕಾರಣ ಇತರರು ಈ ರೀತಿ ನಡೆದುಕೊಳ್ಳಲು ಹಿಂಜರಿಯಬಹುದು ಅಥವಾ ಆ ರೀತಿ ನಡೆದುಕೊಂಡರೆ ಅದರಿಂದ ಉಂಟಾಗುವ ಫಲಿತಾಂಶಕ್ಕೆ ಹೆದರಿಕೆ ಇರಬಹುದು. ಇಲ್ಲಿ ಸೌಲಭ್ಯ ನೀಡುವ ಅಧಿಕಾರಿ ಮತ್ತು ಫಲಾನುಭವಿ ಇಬ್ಬರೂ ಒಗ್ಗಟ್ಟಾಗಿ ಭ್ರಷ್ಟಾರದಲ್ಲಿ ತೊಡಗುತ್ತಾರೆ.  ಈ ದೇಶ ಕಂಡ ಅತ್ಯಂತ ಬೃಹತ್ ಮೊತ್ತದ ಷೇರು ಹಗರಣದಲ್ಲಿ ಹರ್ಷದ್ ಮೆಹ್ತಾ ಮತ್ತು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರು. ಹಗರಣದ ಬಗ್ಗೆ ತನಿಖೆ ಮಾಡಿದ ಜಾನಕಿರಾಮನ್ ಸಮಿತಿ ಯ ಪ್ರಕಾರ ಕೆಲ ಬ್ಯಾಂಕ್‌ಗಳ ನಿರ್ದೇಶಕರೂ ಇದರಲ್ಲಿ ಭಾಗಿಯಾಗಿದ್ದರು. ಎರಡನೆಯ ಮಾದರಿ ಭ್ರಷ್ಟಾಚಾರ ಏಕಮುಖವಾದದ್ದು. ಇಲ್ಲಿ ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದರ್ಪದಿಂದ ಬಳಸುವ ಮೂಲಕ ಅಥವಾ ಬಳಸುತ್ತೇನೆಂದು ಹೆದರಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗುತ್ತಾನೆ. ಉದಾಹರಣೆಗೆ ಪೊಲೀಸ್ ಸಿಬ್ಬಂದಿ ನಾಗರಿಕರನ್ನು ಹೆದರಿಸಿ, ಬೆದರಿಸಿ ಹಣ ಸುಲಿಗೆ ಮಾಡುವುದು ಅಪರೂಪವಲ್ಲ. ಇಲ್ಲಿ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರಕ್ಕೆ ಕಾರಣ. ಈ ಎರಡೂ ಮಾದರಿ ಭ್ರಷ್ಟಾಚಾರದಲ್ಲಿ ಒಂದಕ್ಕಿಂತ ಹೆಚ್ಚಿನವರು ಭಾಗಿಯಾಗಿರುತ್ತಾರೆ. ಕೇವಲ ಒಬ್ಬನೇ ಭಾಗಿಯಾಗುವ ಭ್ರಷ್ಟಾಚಾರವು ಇದೆ. ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಾಭ ಗಳಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಉದಾಹರಣೆಗೆ ಸುಳ್ಳು ದಾಖಲೆ ನೀಡಿ ಪ್ರಯಾಣ ಭತ್ಯೆ ಪಡೆಯುವುದು, ಯಾವುದೇ ಕಾಯಿಲೆ ಇಲ್ಲದಿದ್ದರೂ ವೈದ್ಯರಿಂದ ಸರ್ಟಿಫಿಕೇಟ್ ಪಡೆದು ಕಚೇರಿಯಿಂದ ಹಣ ಪಡೆಯವುದು ಇತ್ಯಾದಿ. ವಿಚಕ್ಷಣ ಆಯೋಗ ಪತ್ತೆ ಹಚ್ಚುವ ಅನೇಕ ಪ್ರಕರಣಗಳು ಈ ಗುಂಪಿಗೆ ಸೇರಿವೆ.

ಭ್ರಷ್ಟಾಚಾರ ಬಹುರೂಪಿ. ಅದು ಅನೇಕ ರೀತಿಯಲ್ಲಿ ನಡೆಯುತ್ತದೆ. ಕೆಳಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಬ್ರೆöÊಬರಿ ಎಂದು ಕರೆಯುತ್ತಾರೆ. ಇದನ್ನು ಲಂಚ ಎನ್ನಬಹುದು. ಅಧಿಕಾರದಲ್ಲಿರುವ ವ್ಯಕ್ತಿ ಯಾವುದಾದರೂ ಕ್ರಮ ಕೈಗೊಳ್ಳಲು ಅಥವಾ ಕೈಗೊಳ್ಳದಿರಲು ನೀಡುವ ಹಣವನ್ನು ಈ ಗುಂಪಿಗೆ ಸೇರಿಸಬಹುದು. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಾಗ ಅದನ್ನು ಪತ್ತೆ ಹಚ್ಚುವ ಪೊಲೀಸ್‌ಗೆ ಹಣ ನೀಡಿ ಕೇಸ್ ದಾಖಲು ಮಾಡದಂತೆ ನೋಡಿಕೊಳ್ಳುವುದು ದಿನ ನಿತ್ಯ ನಡೆಯುವ ಭ್ರಷ್ಟಾಚಾರದ ಮಾದರಿ. ಇದಕ್ಕೆ ಕಿಕ್‌ಬ್ಯಾಕ್, ಬಕ್ಷೀಸ್ ಎಂದು ಕರೆಯಲಾಗಿದೆ.  ರಸ್ತೆ ಬದಿಯ ವ್ಯಾಪಾರಿಗಳು ಪೊಲೀಸ್, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ರೌಡಿಗಳು ಮುಂತಾದವರಿಗೆ ನೀಡುವ ಹಣ ಅಥವಾ ರೋಲ್‌ಕಾಲ್ ಒಂದು ಮಾದರಿ ಲಂಚ. ತಪ್ಪು ಮಾಹಿತಿ ನೀಡಿ ಅದರಿಂದ ಯಾವುದಾದರೂ ಸೌಲಭ್ಯ ಪಡೆಯುವುದು ಸಹ ಒಂದು ರೀತಿಯ ಭ್ರಷ್ಟಾಚಾರ,  ಕಪ್ಪು ಹಣವನ್ನು ಹೊರದೇಶದ ಬ್ಯಾಂಕ್‌ಗಳಿಗೆ ಗೌಪ್ಯವಾಗಿ ವರ್ಗಾಯಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮನಿ ಲಾಂಡರಿಂಗ್ ಎಂದು ಕರೆಯಲ್ಪಡುವ ಈ ವ್ಯವಹಾರವೂ ಭ್ರಷ್ಟಾಚಾರದ ಮತ್ತೊಂದು ಮಾದರಿ. ಅಧಿಕಾರ ಹೊಂದಿರುವ ರಾಜಕಾರಣಿ, ಮಂತ್ರಿ ಅಥವಾ ಸಾರ್ವಜನಿಕ ಅಧಿಕಾರಿ ತನ್ನ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ನ್ಯಾಯಬಾಹಿರವಾಗಿ ಸೌಲಭ್ಯ ಒದಗಿಸಿಕೊಡುವುದು ಸಹ ಭ್ರಷ್ಟಾಚಾರವಾಗುತ್ತದೆ. ಲಾಭ ಪಡೆಯುವವರಿಗೆ ಅರ್ಹತೆ ಇಲ್ಲದಿದ್ದರು ಅದನ್ನು ನೀಡಲಾಗುತ್ತದೆ. ಉದಾಹರಣೆಗೆ ಮುಖ್ಯಮಂತ್ರಿಗಳು ಹಾಗು ಮಂತ್ರಿಗಳು ತಮ್ಮ ಪುತ್ರ, ಪುತ್ರಿ, ಅಳಿಯ, ತಮ್ಮ ಮನೆಯಲ್ಲಿ ಅಡಿಗೆ ಮಾಡುವವರು ಮುಂತಾದವರಿಗೆ ನಿವೇಶನ ಹಂಚಿರುವುದನ್ನು ಮಹಾಲೇಖಪಾಲಕರು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಭ್ರಷ್ಟಾಚಾರದ ಮಾದರಿಯನ್ನು ಸ್ಪೀಡ್ ಮನಿ ಎಂದು ಕರೆಯಲಾಗಿದೆ. ಇದನ್ನು ಬಹುತೇಕ ಎಲ್ಲ ಸರ್ಕಾರಿ  ಕಚೇರಿಗಳಲ್ಲೂ ಕಾಣಬಹುದು. ವಿಶೇಷವಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳಲ್ಲಿ ಸ್ಪೀಡ್ ಮನಿ ಸಾಮಾನ್ಯ. ಇದನ್ನು ನೀಡದೆ ಯಾವುದೇ ಕೆಲಸ ಮಾಡಿಸಿಕೊಳ್ಳಲು ಆಗದ ಪರಿಸ್ಥಿತಿ ಉಂಟಾಗಿದೆ. ಸೌಲಭ್ಯವನ್ನು ಪಡೆಯಲು ಅನುಸರಿಸಬೇಕಾದ ಕ್ರಮ, ಅದಕ್ಕೆ ಸಂಬಂಧಪಟ್ಟ ಕಾನೂನುಗಳು, ಸಲ್ಲಿಸಬೇಕಾದ ದಾಖಲೆಗಳು ಎಲ್ಲವನ್ನೂ ಶೀಘ್ರವಾಗಿ ಪೂರೈಸಬೇಕಾದರೆ ಸ್ಪೀಡ್ ಮನಿ ಅಗತ್ಯ ನಾಗರಿಕರು ಪದೇ ಪದೇ ಈ ರೀತಿಯ ಭ್ರಷ್ಟಾಚಾರಕ್ಕೆ ಬಲಿಯಾಗುತ್ತಾರೆ. ಮೊತ್ತದ ದೃಷ್ಠಿಯಿಂದ ನೋಡಿದಾಗ ಇದನ್ನು ಸಣ್ಣ ಪ್ರಮಾಣದ ಭ್ರಷ್ಟಾಚಾರ ಎಂದು, ಮಂತ್ರಿಗಳು, ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ನಡುವೆ ನಡೆಯುವ ಬೃಹತ್ ಮೊತ್ತದ ಭ್ರಷ್ಟಾಚಾರವನ್ನು ಗ್ರಾಂಡ್ ಎಂದೂ ಕರೆಯಲಾಗಿದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾಲ ಎಂಬುದಿಲ್ಲ. ಅದು ವರ್ಷದ ಮುನ್ನೂರ ಅರವತ್ತೆöÊದು ದಿನಗಳು ಚಾಲ್ತಿಯಲ್ಲಿರುತ್ತದೆ. ಆದರೆ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮಾನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇದೆ. ಕಾರಣ ಆ ಸನ್ನಿವೇಶದಲ್ಲಿ ಅಗತ್ಯ ವಸ್ತುಗಳ ಅಭಾವವಿರುತ್ತದೆ. ಜೊತೆಗೆ ಕೃತಕ ಅಭಾವ ಸೃಷ್ಠಿಸುವ ಪ್ರಯತ್ನವು ನಡೆಯುತ್ತದೆ. ಆದ್ದರಿಂದಲೇ ಸಣ್ಣ ಪ್ರಮಾಣದ ಭ್ರಷ್ಟಾಚಾರ ಬಡವರ ಮೇಲೆ ಹೆಚ್ಚು ದುಷ್ಪರಿಣಾಮ ಉಂಟು ಮಾಡುತ್ತದೆ. ದೇಶವು ತ್ವರಿತ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಕಾಮಗಾರಿ, ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಮಂತ್ರಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ವಿಲಿಯಮ್ ನಂದ ಬಿಸೆಲ್ [ಮೇಕಿಂಗ್ ಇಂಡಿಯಾ ವರ್ಕ್] ಅವರ ಪ್ರಕಾರ ಭ್ರಷ್ಟಾಚಾರವನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆ ಯದನ್ನು ಅವರು ಃoಣಣಟeಟಿeಛಿಞ  ಅoಡಿಡಿuಠಿಣioಟಿ ಎಂದು ಕರೆಯುತ್ತಾರೆ. ಈಗಾಗಲೆ ಹೇಳಿರುವಂತೆ ಇದು ಕೃತಕ ಅಭಾವ ಸೃಷ್ಠಿಸಿ ಅದರ ಮೂಲಕ ಹಣ ಮಾಡುವುದು. ಕೆಲವೊಮ್ಮೆ ಸರ್ಕಾರವೇ ಇದಕ್ಕೆ ಕಾರಣವಾಗುತ್ತದೆ. ಎರಡನೆ ಯದು, ಅರ್ಥವಾಗದ ಕಾನೂನುಗಳನ್ನು ಮತ್ತು ಕ್ಲಿಷ್ಟಕರ ನಿಯಮಗಳನ್ನು ರಚಿಸುವುದರ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿ ಕೊಡುವುದು. ಬಹುತೇಕ ಅನಕ್ಷರಸ್ಥರು ಇರುವ ಈ ದೇಶದಲ್ಲಿ ಸಾಮಾನ್ಯರು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಕಾನೂನು ರಚಿಸಿದರೆ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಅಪಾರ ಪ್ರಮಾಣದ ಸಾಮಗ್ರಿ ಖರೀದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬೃಹತ್ ಮೊತ್ತದ ಭ್ರಷ್ಟಾಚಾರ ನಡೆಯುವುದನ್ನು ನೋಡಿದ್ದೇವೆ. ಲಂಚ ನೀಡುವ ಕಂಪನಿ ಅಗತ್ಯಕ್ಕೆ ತಕ್ಕಂತೆ ಗುತ್ತಿಗೆಯನ್ನು ರಚಿಸಲಾಗುತ್ತದೆ, ಇಲ್ಲವೆ ಅದರ ನಿಯಮಗಳನ್ನು ಮಾರ್ಪಾಟು ಮಾಡಲಾಗುತ್ತದೆ. ಉನ್ನತ ಮಟ್ಟದಲ್ಲಿ ನಡೆಯುವ ಈ ಟೆಂಡರ್ ಬೆಂಡಿಂಗ್  ಮೂರನೇ ಮಾದರಿ ಭ್ರಷ್ಟಾಚಾರ. ಇತ್ತೀಚೆಗೆ ೨ಜಿ  ತರಂಗಾಂತರದ ಹಂಚಿಕೆಯಲ್ಲಿ ಮಂತ್ರಿ ಒಬ್ಬರು ಅನುಸರಿಸಿದ ಮಾದರಿ ಇದಕ್ಕೆ ಸೂಕ್ತ ಉದಾಹರಣೆ. ಈ ಮಾದರಿ ಭ್ರಷ್ಟಾಚಾರಕ್ಕೆ ಬಲಿಯಾಗುವವರು ದುರ್ಬಲ ವರ್ಗದವರು. ದೈಹಿಕ ಹಿಂಸೆ, ಜೀವ ಬೆದರಿಕೆ, ಸ್ಥಳ ಮುಂತಾದ ಅಸ್ತ್ರಗಳನ್ನು ಉಪಯೋಗಿಸುವ ಮೂಲಕ ಲಂಚ ಪಡೆಯಲಾಗುತ್ತದೆ.

ಲಂಚ ಪಡೆಯುವವರನ್ನು ಎರಡು ರೀತಿ ವಿಂಗಡಿಸಿ ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಸಣ್ಣ ಪುಟ್ಟ ಮೊತ್ತದ ಲಂಚ ಪಡೆಯುವವರನ್ನು ಹುಲ್ಲು ತಿನ್ನುವವ ರೆಂದು, ಬೃಹತ್ ಮೊತ್ತದ ಹಣ ಪಡೆಯುವವರನ್ನು ಮಾಂಸ ತಿನ್ನುವವ  ರೆಂದು ವರ್ಗೀಕರಿಸಲಾಗಿದೆ. ಉದಾಹರಣೆಗೆ ಅಂಚೆ ಪೇದೆ, ಗ್ಯಾಸ್ ಸಿಲಿಂಡರ್ ವಿತರಕ ಅಥವಾ ಮನೆ ಮುಂದಿನ ಕಸವನ್ನು ಸ್ವಚ್ಛಗೊಳಿಸುವವರು ಹಣ ಕೇಳುವವರನ್ನು ಮೊದಲನೆ ವರ್ಗಕ್ಕೆ ಸೇರಿಸಬಹುದು. ಬೃಹತ್ ಮೊತ್ತದ ಭ್ರಷ್ಟಾಚಾರದಲ್ಲಿ ತೊಡುಗುವವರು ಎರಡನೇ ಗುಂಪಿಗೆ ಸೇರುವವರು. ಸರ್ಕಾರಿ ಅಧಿಕಾರಿಗಳು ಕಾನೂನಿನ ಪ್ರಕಾರ ಸೇವೆ ನೀಡಲು ಲಂಚ ಪಡೆಯುತ್ತಾರೆ. ಅದೇ ರೀತಿ ಕಾನೂನು ಉಲ್ಲಂಘಿಸಿಯೂ ಸೇವೆ ನೀಡಿ ಲಂಚ ಪಡೆಯುವ ಅವಕಾಶ ಹೊಂದಿರುತ್ತಾರೆ. ಒಟ್ಟಾರೆ ಅಧಿಕಾರಿಗಳು ನಿಯಮದ ಪ್ರಕಾರ ಮತ್ತು ನಿಯಮಕ್ಕೆ ವಿರುದ್ಧ ನಡೆದುಕೊಂಡರೂ ಲಂಚ ಪಡೆಯಬಹುದು.

ಭ್ರಷ್ಟಾಚಾರದ ಸ್ವರೂಪವನ್ನು ಭೌಗೋಳಿಕವಾಗಿಯೂ ವಿಶ್ಲೇಷಿಸಬಹುದು. ಇದರ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದು, ಭಾರತದಲ್ಲಿರುವ ಭ್ರಷ್ಟಾಚಾರ ಕ್ಕೂ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿರುವ ಭ್ರಷ್ಟಾಚಾರಕ್ಕೂ ಕೆಲವೊಂದು ವ್ಯತ್ಯಾಸಗಳಿವೆ. ದಿವಂಗತ ಮೆಹಬೂಬ್ ಉಲ್ ಹಕ್ ಅವರ ಪ್ರಕಾರ ದಕ್ಷಿಣ ಏಷ್ಯಾದ ದೇಶಗಳಲ್ಲಿರುವ ಭ್ರಷ್ಟಾಚಾರ ನಾಲ್ಕು ಅಪಾಯಕಾರಿ ಗುಣಗಳನ್ನು ಹೊಂದಿದೆ. ಪ್ರಥಮವಾಗಿ ದಕ್ಷಿಣ ಏಷ್ಯಾದ ಭ್ರಷ್ಟಾಚಾರ ಹೆಚ್ಚಾಗಿ ಸಂಭವಿಸು ವುದು ಮೇಲ್ಮಟ್ಟದಲ್ಲಿ. ಆದ ಕಾರಣ ಭ್ರಷ್ಟಾಚಾರ ಅಭಿವೃದ್ಧಿಗೆ ಕಂಟಕವಾಗುತ್ತದೆ. ಮೇಲ್ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರ ರಾಷ್ಟ್ರದ ನೀತಿ ನಿಯಮಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಎರಡನೆಯದಾಗಿ, ದಕ್ಷಿಣ ಏಷ್ಯಾದಲ್ಲಿನ ಭ್ರಷ್ಟಾಚಾರದ ಹಣಕ್ಕೆ ಚಕ್ರಗಳಿಲ್ಲ. ರೆಕ್ಕೆಗಳಿವೆ. ಭ್ರಷ್ಟಾಚಾರದಿಂದ ಬಂದ ಹಣವನ್ನು ಕೂಡಲೇ ವಿದೇಶಗಳಿಗೆ ರವಾನಿಸಲಾಗುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭ್ರಷ್ಟಾಚಾರದ ಹಣದ ಸ್ವಲ್ಪ ಅಂಶವಾದರೂ ಅಲ್ಲಿನ ಉದ್ಯಮಕ್ಕೆ ಮರು ವಿನಿಯೋಗವಾಗುತ್ತದೆ. ಮೂರನೆಯ ಗುಣ ಭಾರತಕ್ಕೆ ಸೂಕ್ತವಾಗಿ ಅನ್ವಯ ವಾಗುತ್ತದೆ. ಅದೇನೆಂದರೆ, ದಕ್ಷಿಣ ಏಷ್ಯಾದಲ್ಲಿ ಭ್ರಷ್ಟಾಚಾರ ಬಡ್ತಿಗೆ ಕಾರಣ ವಾಗುತ್ತದೆ, ಸೆರೆಮನೆಗಲ್ಲ. ಭ್ರಷ್ಟರೆಂದು ತಿಳಿದು ಬಂದರೂ ಅವರಿಗೆ ಉತ್ತಮ ಸ್ಥಾನಮಾನ, ಬಡ್ತಿ, ತಾವು ಕೇಳಿದ ಜಾಗಕ್ಕೆ/ಹುದ್ದೆಗೆ ವರ್ಗಾವಣೆ ಇತ್ಯಾದಿ ಸೌಲಭ್ಯ ದೊರೆಯುತ್ತದೆ. ಆದರೆ ಮುಂದುವರೆದ ಬಹುತೇಕ ದೇಶಗಳಲ್ಲಿ ತನಿಖೆ ಚುರುಕಾಗಿದ್ದು, ಭ್ರಷ್ಟರನ್ನು ಅತಿಶೀಘ್ರವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕಡೆಯದಾಗಿ ದಕ್ಷಿಣ ಏಷ್ಯಾದಲ್ಲಿ ಬಡತನದ ಮಧ್ಯೆ ಭ್ರಷ್ಟಾಚಾರ ನಡೆಯುತ್ತದೆ. ಆ ಸಂಖ್ಯೆಯ ಬಹುತೇಕ ವರ್ಗ ಬಡತನ, ಅನಾರೋಗ್ಯ, ಅನಕ್ಷರತೆ ಇತ್ಯಾದಿ ಸಮಸ್ಯೆಯಲ್ಲಿ ಮುಳುಗಿರುವಾಗ ಕೆಲವೇ ಮಂದಿ ಲಂಚದ ಲಾಭ ಪಡೆಯುತ್ತಾರೆ.

ನಿವೃತ್ತ ಸೇನಾಧಿಕಾರಿ ರಮೇಶ್ ವಾಸುಡಿಯೋ ಭ್ರಷ್ಟಾಚಾರದ ಮುಖ್ಯ ಗುಣಗಳನ್ನು ಪಟ್ಟಿ ಮಾಡಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಕಾರಣಗಳು ಆಗಬಹುದು. ಆ ಪಟ್ಟಿ ಹೀಗಿದೆ:

* ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಒಂದು ಸೌಲಭ್ಯ ಅಗತ್ಯವಿರುವ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಇರಬೇಕು.

* ಆ ವ್ಯಕ್ತಿ ಅಥವಾ ಸಂಸ್ಥೆಗೆ ಲಂಚ ನೀಡುವ ಯೋಗ್ಯತೆ ಮತ್ತು ಮನಸ್ಸು ಇರಬೇಕು.

* ಸೇವೆ ನೀಡುವ ವ್ಯಕ್ತಿಗೆ ಆ ಸೇವೆ ನೀಡುವ ಅಧಿಕಾರ ಇರಬೇಕು. ಆ ಸೇವೆಯನ್ನು ನೀಡುವ ಮನಸ್ಸು ಹೊಂದಿರ ಬೇಕು ಮತ್ತು ಲಂಚ ಪಡೆಯುವು ದರಲ್ಲಿ ಆಸಕ್ತಿ ಇರಬೇಕು.

* ವ್ಯವಹಾರವೆಲ್ಲವೂ ಗೌಪ್ಯವಾಗಿ ನಡೆಯಬೇಕು.

* ವ್ಯವಹಾರ ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು ಒಬ್ಬ ಮಧ್ಯವರ್ತಿ ಇರುತ್ತಾನೆ. 

* ಈ ವ್ಯವಹಾರವು ಫಲಾನುಭವಿಗೆ ಅಥವಾ ಸಂಸ್ಥೆಗೆ ನಷ್ಟ ಆಗುತ್ತದೆ.

* ಲಂಚ ಪಡೆಯುವವರಲ್ಲಿ ಸ್ವಾಭಾವಿಕವಾದ ಅಳುಕು ಮತ್ತು ಭಯ ಇರುತ್ತದೆ.

* ಲಂಚ ಕೊಡುವವನಿಗೆ ತಾನು ಪಡೆದ ಸೇವೆಯ ಬಗ್ಗೆ ಸಮಾಧಾನ ಇರುತ್ತದೆ. ಸಾಮಾನ್ಯವಾಗಿ ಲಂಚ ನೀಡುವವರಲ್ಲಿ ಯಾವುದೇ ಅಳುಕು ಇರುವುದಿಲ್ಲ.

* ದೇಶ, ಭಾಷೆ, ಜಾತಿ, ಕುಲ, ಲಿಂಗಭೇದ ಇತ್ಯಾದಿ ಯಾವುದೂ ಲಂಚಕ್ಕೆ ಅನ್ವಯಿಸುವುದಿಲ್ಲ. 

* ಭ್ರಷ್ಟಾಚಾರದ ವ್ಯವಹಾರ ಅತ್ಯಂತ ವಿಶ್ವಾಸದಿಂದ ಕೂಡಿದ್ದು.

* ಸಾಮಾನ್ಯವಾಗಿ ಲಂಚದ ವ್ಯವಹಾರದಲ್ಲಿ ಕಪ್ಪುಹಣ, ಬೇನಾಮಿ ಆಸ್ತಿ ಒಳಗೊಂಡಿರುತ್ತದೆ.

* ಭ್ರಷ್ಟರು ಸಾಮಾನ್ಯವಾಗಿ ಒಂಟಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅದನ್ನು ಒಂದು ಗುಂಪು ನಿರ್ವಹಿಸುತ್ತದೆ.

* ಭ್ರಷ್ಟಾಚಾರಕ್ಕೆ ಬಹು ದೊಡ್ಡ ಕಾರಣ ವಸ್ತು/ಸೇವೆಗಳ ಅಭಾವ.  

No comments:

Post a Comment