Namma Vishwa Bharathi, Kannada monthly magazine printed and published by Vijaya Lakshmi Prakashana, the publishing house from Karnataka, India.
Monday, December 19, 2022
Tuesday, October 18, 2022
Wednesday, October 5, 2022
ಬಾಲ್ಯ - ಕನಸು ಮನಸುಗಳ ಚಿತ್ತಾರ
ಕನಸು ಮನಸುಗಳ ಚಿತ್ತಾರವೇ ಬಾಲ್ಯ. ವೃದ್ಧಾಪ್ಯದಲ್ಲಿ ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕುವುದೊಂತು ಅತಿ ಮಧುರ. ಸುಂದರ ಹಾಳೆಗಳಿಂದ ತುಂಬಿರುವ ಬಾಲ್ಯ ಸ್ವಪ್ನಕ್ಕಿಂತಲೂ ಸೊಗಸು.
Romantic Love
Romantic love may also be classified according to two categories, "popular romance" and "divine or spiritual" romance.
A dream of love
ಪ್ರೀತಿಯ ಕನಸು...
Memories are sweet...!
ನೆನಪುಗಳ ಮಾತು ಮಧುರ...
ನೆನಪುಗಳ ಮಾತೆ ಮಧುರ... ಮನಸ್ಸಿನಲ್ಲಿ ಪಿಸುಗುದುತ್ತಿರುವ ನನ್ನಿಯನ ನೆನಪಲ್ಲದೆ ಮತ್ತೇನು ಇಲ್ಲ ಈ ಹೃದಯದಲ್ಲಿ. ಆ ನೆನಪುಗಳ ಮಳಿಗೆಯಲ್ಲಿ ಇರುವುದು ಅವನೆ. ಅವನನ್ನು ಬಿಟ್ಟು ಮತ್ತೇನೂ ಇಲ್ಲ.
-ಜಿ.ಕೆ.
Sunday, October 2, 2022
Colours of Love
Love is the precious gift one
can give, and to be loved is the precious gift one can receive. Love is the
most powerful and most positive of all energies. Love is multidimensional. Most
people think of love as the romantic relationship between two people who are in
love, or else of the relationship between family members. These things, of
course are certainly powerful evidence of love, but love embraces much more
than this. This tape enables you to embrace the various aspects of love and
make them a part of your life. It does much for your self-enrichment and can
change your life for the better in every respect.
Everyone wants to be loved and to be love. Everyone has
the right to love. This is one-on-one romantic love and helps you to your true
love into reality. Love essentially have many colours in life which resembles
our relationship.
Sweet Memories of life
I still remember the sweet memories of my life when I was studying MSE. It was the most beautiful days in my life when she entered into my life. And I Knew that I never find a girl like her for my life time. She was the perfect match for me in every way. But I couldn't tell my love to her though I loved her so much. It was hidden in my heart as a secret. I never wanted to express my love to her. I always tried to pretend I'm just a friend of her. And the three years which I spent my life with her was unforgettable in my life. Though I loved her a lot I never exposed my love to her. I knew that I never find a girl like her again in my life time.
I was all alone in my life. I spent my leisure time in my hostel. I had no much friends or family to share my feelings. I felt that I'm lonely but suddenly she entered into my life like an angel. At that time she was everything to me in my life. I don't know why I was so friendly with her, I talk so much with, I shared my feelings with her but I don't know why I was so close to her.At the time I realized that I was in love with her I was unable to expose my love with her as she was already in love with another person. As a good friend of her I wished her love to be successful and never wanted to expose my love to her.
Making Life Beautiful
Life can be beautiful with
love. Making life beautiful is possible only by love because love is the only
force capable of transforming an enemy into friend. With love life can be
meaningful and beautiful by following the few tips.
1. Keep smiling: " The world is the camera of god. If you keep smiling,
you will get a good photograph." A hearty smile has a divine charm which
enables you to love every one.
2. Be helpful: The golden rule of your life should be " Do for others what
you wish them to do for you." A helpful attitude will bring help when you
are in need. It enables to have a meaning in your life.
3. Be thankful: A "Thank You" from the heart has magical power.
Express your gratitude through words and deeds. Thank God every morning for
giving you one more day on this beautiful earth.
4. Be kind: Being kind in nature leads to a meaningful and joyful life to love
every one.
5. Believe in equality: Treat others as equal to you. Never let superiority or
inferiority complexes take over you.
6. Spend time fruitfully: Time management is very important in one's life. Also
see that your time schedule doesn't make you 'Too busy'. Leave room for
leisure.
7. Be sincere: Be sincere with yourself and with others. No one likes
hypocrites, so be sincere.
8. Live for today: Learn from the past and plan for the future, but live tor
today. The past is dead and the future is uncertain, where as the present is
just before you with all the wonderful possibilities which has been gifted by
god that's why it is called present.
Can you love someone without any expectation?
Can you love someone without any expectation just like a mother love her child? Yes, this is possible people can love anyone without any expectation. A true love resemble always in the true minds. A pure soul, a kind hearted man can love anyone or everyone without any expectation. Love is an wonderful thing created by god in every hearts of the living creature. Falling in real love, feeling it, is an extraordinary experience one can have. It doesn't matter whom you love with, but it matter how you love it and how you experience it.
Love is an wonderful thing happening in the internal soul
of two hearts, it is making of two people with one heart. If you know how to
love someone without any expectation, then definitely you will enjoy every
moment of it. You will be able to feel it and experience it better than many
people who think love is just an excuse of for sex.
Never lose the faith in true love. It exists only in the
pure hearts. Love is pure, don't spoil it for your selfishness. A true love
must exist equally shared in both the hearts because love cannot exist in
single heart.
Love anyone without any expectation and feel the joy of it,
experience it and you will never be able to give it back. Expecting something
in a love is not at all a love. Love without expectation, help everyone, don't
hurt anyone.
Friday, September 30, 2022
Sneha
ಸ್ನೇಹ- ಗೆಳೆತನದ ಹಾದಿಯಲ್ಲಿ ಸಂಬಂಧಗಳ ಅನುಬಂಧ
ನಮ್ಮ ನಿತ್ಯದ ಜೀವನದಲ್ಲಿ ನಮಗೆ ಪರಿಚಯ ಆಗುವವರೆಲ್ಲರೂ ಫ್ರೆಂಡ್ಸ್ ಆಗಲಾರರು. ಸ್ನೇಹ ಎನ್ನುವುದು ಒಂದು ಪವಿತ್ರವಾದ ಸಂಬಂಧ. ಗೆಳೆಯರನ್ನು ಸಂಪಾದಿಸುವುದು ಗೆಳೆತನವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ತುಂಬಿದ ಬದುಕನ್ನು ನಡೆಸುವ ಪರಿಯಲ್ಲಿ ಜೀವನಕ್ಕೆ ಅವಶ್ಯ ಎನ್ನಿಸುವುದನ್ನೆಲ್ಲ ಸಂಪಾದಿಸುತ್ತಾ ಹೋಗುತ್ತೇವೆ, ಆದರೆ ಅದೆಲ್ಲಕ್ಕಿಂತಲೂ ಮಿಗಿಲಾಗಿ ನಾವು ಸಂಪಾದಿಸ ಬೇಕಾಗಿರುವುದು ಸ್ನೇಹ, ಪ್ರೀತಿ, ವಿಶ್ವಾಸ, ಹಾಗು ಉತ್ತಮ ನಡತೆಯನ್ನು.
ಸ್ನೇಹಿತರನ್ನು
ಸಂಪಾದಿಸುವುದು ಕಷ್ಟವಾದರು ಬಹು ಸಹಜವಾದದ್ದು, ವಿಶ್ವಾಸದ ನಿಟ್ಟಿನಲ್ಲಿ ಎಲ್ಲರೊಂದಿಗೂ ಆತ್ಮೀಯವಾಗಿದ್ದರೆ ಎಲ್ಲರ ಸ್ನೇಹವನ್ನು
ಸಂಪಾದಿಸಬಹುದು. ಗೆಳೆಯರಿದ್ದಾರೆ ಜೀವನಕ್ಕೆ ಒಂದು ಹೊಸ ರೂಪು ಬರಲು ಸಾಧ್ಯ. ಆ ಗೆಳೆತನದ
ಹಾದಿಯಲ್ಲಿ ಸಂಬಂಧಗಳ ಅನುಬಂಧಗಳನ್ನು ಕಾಣಬಹುದು.
ಇಂಗ್ಲೀಷ್ ನಲ್ಲಿ ಹೇಳುತ್ತಾರಲ್ಲ a friend in need
is a friend in deed ಎಂಬ ಮಾತನ್ನು ನೆನೆಪುಮಾಡಿಕೊಳ್ಳಿ.
ಕಷ್ಟದಲ್ಲಿರುವಾಗಲೂ ಸಹಾಯಕ್ಕೆ ಬರುವವನೇ ಸ್ನೇಹಿತ. ಅವನು ಜೀವನ ಪರ್ಯಂತವೂ ಸ್ನೇಹಿತನಾಗಿಯೇ
ಉಳಿಯುತ್ತಾನೆ. ಒಬ್ಬ ಉತ್ತಮ ಗೆಳೆಯ ತನ್ನ ಗೆಳೆಯನ ಹಿತಾಸಕ್ತಿಯನ್ನು ಬಯಸುತ್ತಾನೆ. ಆತನ ಬಗ್ಗೆ
ಚೆನ್ನಾಗಿ ಅರಿತಿರುತ್ತಾನೆ. ಅವರ ಮಧ್ಯೆ ಒಂದೂ ಮುಚ್ಚೂ ಮರೆ ಇರುವುದಿಲ್ಲ. ಅವರಲ್ಲಿರುವ
ಬಾಂಧವ್ಯವನ್ನು ಯಾರಿಂದಲೂ ಬಿಡಿಸಲಾಗುವುದಿಲ್ಲ.
ನೀವೇ ಯೋಚನೆ ಮಾಡಿ, ಜೀವನದಲ್ಲಿ ಫ್ರೆಂಡ್ಸ್ ಇದ್ದರೆ ಎಷ್ಟು ಚೆನ್ನಾಗಿರುತ್ತದೆ. ನಮ್ಮ
ನೋವು ನಲಿವುಗಳನ್ನು ಅಂಚಿಕೊಳ್ಳಲು ಒಂದು ಹೃದಯದ ಅನಿವಾರ್ಯ ಪ್ರತಿಯೊಬ್ಬ ಮನುಷ್ಯನಿಗೂ
ಇರುತ್ತದೆ. ಆ ಹೃದಯ ತಾಯಿಯದ್ದಾಗಿರಬಹುದು, ತಂದೆಯದ್ದಾಗಿರಬಹುದು, ಅಥವ ಅಣ್ಣ, ತಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳತಿಯಾಗಿರಬಹುದು. ಆದರೆ ಅವರೆಲ್ಲರೂ ನಂಟಸ್ತರಾಗುತ್ತಾರೆ. ಯಾವ ನಂಟು ಇಲ್ಲದೆ ಒಂದು
ಸಂಬಂಧವನ್ನು ಕಲ್ಪಿಸಿಕೊಡುವುದೇ ಸ್ನೇಹ.
ಹೀಗೆ ಯೋಚಿಸುತ್ತಾ
ಹೋದರೆ ನಮ್ಮ ಸ್ನೇಹಿತರೆಲ್ಲಾ ನೆನಪಿಗೆ ಬರುತ್ತಾರೆ. ಅವರೊಂದಿಗೆ ಆಡಿದ ಮಾತುಗಳು, ಸ್ಕೂಲು, ಕಾಲೇಜುಗಳ ಆವರಣದಲ್ಲಿ ಕಳೆದ ಕ್ಷಣಗಳು, ಕ್ಯಾಂಪಸ್ ಗಳಲ್ಲಿ ಅಡ್ಡಾಡಿದ ನೆನಪುಗಳು, ಅವರಿವರನ್ನು ಗೇಲಿಮಾಡುತ್ತ ನಗಾಡಿಕೊಂಡು ತಿರುಗಾಡಿದ ಆ ದಿನಗಳು ಕಣ್ಣಿನ ಮುಂದೆ
ಫಿಲಂ ನೋಡುವಾಗ ಕಾಣುವ ದೃಶ್ಯಗಳಂತೆ ಗೋಚರಿಸುತ್ತದೆ. ಕ್ಲಾಸ್ ಗಳನ್ನು ಬಂಕ್ ಮಾಡಿ ಸಿನಿಮಾಗಳಿಗೆ
ಹೋದ ನೆನಪುಗಳು, ರಿಸಲ್ಟ್ ಡೌನ್
ಆಗಿದ್ದಕ್ಕೆ ಬೈಗುಳಗಳು ಸದ್ದು ಎಲ್ಲವು ಫ್ಲಾಶ್ ಆಗುತ್ತದೆ.
ಅಂತಹ ಸುಮಧುರವಾದ
ಘಟನೆಗಳು ನಮ್ಮ ಜೀವನದಲ್ಲಿ ನಡೆಯುವುದು ಕೇವಲ ಫ್ರೆಂಡ್ಸ್ ಜೋತೆಯಲ್ಲಿದ್ದಾಗ ಮಾತ್ರ. ಎಲ್ಲರೂ
ಕೂಡಿದ್ದಾಗ ಜಗವೇ ನಮ್ಮ ಅಂಗೈನಲ್ಲಿದೆಯೋ ಏನೋ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಹಜ.
ಎಲ್ಲರೊಂದಿಗೆ ಕೂಡಿ ಮಾಡುವ ಮೋಜು ಮಸ್ತಿಗಳನ್ನೆಲ್ಲಾ ಒಂಟಿಯಾಗಿ ಮಾಡಲು ಸಾದ್ಯವೇ? ಅದಕ್ಕೆ ಜೀವನದಲ್ಲಿ ಏನನ್ನೂ ಸಂಪದಿಸದಿದ್ದರೂ ಗೆಳೆತನವನ್ನು
ಸಂಪದಿಸೋಣ, ಎಲ್ಲರ ಪ್ರೀತಿಗೆ
ಪಾತ್ರರಾಗೋಣ. ಉತ್ತಮ ನಡತೆಯನ್ನು, ಉತ್ತಮ ಸ್ನೇಹವನ್ನು ಸಂಪಾದಿಸೋಣ. ಬಾಳನ್ನು ಸುಂದರವಾಗಿಸಿ ಅತ್ಯಂತ ಸುಗಮವಾಗಿ ಕಳೆಯೋಣ.
- ಜಿ.ಕೆ.
ವಾತ್ಸಲ್ಯದ ದಡದಲ್ಲಿ ಕನವರಿಕೆಯ ಕವಲು
ಕ್ಲಾಸಿನಲ್ಲಿ ಬೇರೆಯವರ ಪರಿಚಯ ಅಷ್ಟಾಗಿ ಇಲ್ಲದ ಕಾರಣ ಅವಳನ್ನೇ ಮಾತನಾಡಿಸಲು
ಆರಂಬಿಸಿದೆ. ಅವಳಿಗೂ ಯಾರ ಪರಿಚಯ ಇಲ್ಲದ ಕಾರಣ ನನ್ನೊಂದಿಗೆ ಬಹಳ ಆತ್ಮಿಯವಾಗಿದ್ದಳು.
ಹೀಗೆ ಕಾಲ ಕಳೆಯ ತೊಡಗಿತು.
ಅವಳೊಂದಿಗೆ ಆಡಿದ ಮಾತುಗಳು, ಕಳೆದ ಕ್ಷಣಗಳು, ಭೇಟಿಯಾದ ಸ್ಥಳಗಳು ಎಲ್ಲವೂ ನನ್ನೆದೆಯ
ಅಂತರಾಳದಲ್ಲಿ ಅಡಗಿ ಕುಂತಿದೆ. ಅವಳೊಂದಿಗಿನ ಆತ್ಮೀಯತೆ ಕಾಲೇಜಿನಲ್ಲಿ ಯಾರೊಂದಿಗೂ
ನನಗಿರಲಿಲ್ಲ. ಎಲ್ಲದಕ್ಕೂ ಅವಳ ಮೇಲೆ
ಅವಲಂಬಿತನಗುತ್ತಿದ್ದೆ. ಅವಳೂ ಸಹ ನನೊಂದಿಗೆ ತುಂಬಾ
ಸಲಿಗೆ ಇಂದ ಇದ್ದಳು. ನಮಿಬ್ಬರ ನಡುವಿನ ಸ್ನೇಹವನ್ನು ನಾನೇ ಪ್ರೀತಿ
ಎಂದು ಭವಿಸಿದ್ದೆನೋ ಅಥವಾ ನಿಜವಾಗಿಯೂ ಪ್ರೀತಿಯಾ? ಎಂದು ಈಗಲು ನನಗೆ ತಿಳಿಯದು. "ಅವಳಲ್ಲಿದ್ದ ವಾತ್ಸಲ್ಯದ ಮುಂದೆ ನನ್ನ ಪ್ರೀತಿ ನಿಲ್ಲಲೇ ಇಲ್ಲ." ಅವಳೂ ಸಹ ನನ್ನನ್ನು
ಪ್ರೀತಿಸುತ್ತಿದ್ದಳೋ ಇಲ್ಲವೋ ನನಗೆ ತಿಳಿದಿಲ್ಲ, ಆದರೆ ನನಗೊಂತ್ತು ಅವಳ ಮೇಲೆ ಅತೀವವಾದ ವಿಶ್ವಾಸ ಇತ್ತು. ನನ್ನ ಹಿಂಜರಿಕೆಯೋ, ಎದರಿಕೆಯೋ ಅಥವ ಮುಜುಗರವೋ ನಾನು ಅವಳೊಂದಿಗೆ ಈ ವಿಷಯವನ್ನು ಚರ್ಚಿಸಲೇ ಇಲ್ಲ. ಅವಳೆದುರಿನಲ್ಲಿ ನನ್ನ
ಮಾತೆಲ್ಲವೂಮೌನವಾಗಿಬಿಡುತ್ತಿತ್ತು.
ಆ ನೆನಪುಗಳು, ಎಳೆ ವಯಸ್ಸಿನಲ್ಲಿ ಮೃದು ಮನಸ್ಸುಗಳ ಆ
ಪ್ರೀತಿ ಇಂದಿಗೂ ಅತಿ ಮಧುರ. ನನ್ನ ಬಾಳಿನುದ್ದಕ್ಕೂ ಈಸವಿನೆನಪುಗಳು
ಸನಿಹದಲ್ಲಿರುತ್ತದೆ. ಅವಳ ಮನಸ್ಸಿನಲ್ಲಿ ನನಿರುತ್ತೇನೋ ಇಲ್ಲವೋ? ಆದರೆ ನನ್ನೆದೆಯಲ್ಲಿ ಅವಳಿಗೊಂದು ಜಾಗ ಕಂಡಿತ
ಇದೆ.
ಎಳೆ ವಯಸ್ಸಿನಲ್ಲಿ ನಡೆದು ಹೋದ ಒಂದು ಸಣ್ಣ ಪ್ರೇಮ ಕಥೆ ಎಂದಿಗೂ ಅಳಿಸಲಾಗದೆ ನನ್ನ ಹೃದಯಾಂತರಾಳದಲ್ಲಿ ಅಮರವಾಗಿದೆ.
Wednesday, September 28, 2022
Youth in the development of the country...
ದೇಶದ ಅಭಿವೃದ್ದಿಯಲ್ಲಿ ಯುವಕರು...
‘ರಾಷ್ಟ್ರ’ ಎಂದರೆ ಕೇವಲ ಉದ್ದಗಲಕ್ಕೂ ಹರಡಿದ ಭೂಮಿ, ಎತ್ತರವಾಗಿ ನಿಂತ ಪರ್ವತ ಮಾಲೆ, ಸುತ್ತಿಹರಿವ ನದಿಗಳು, ಹಾಗೂ ಹರಿಯುತ್ತಿರುವ ಹಳ್ಳ ಕೊಳ್ಳ -ಇತ್ಯಾದಿ ಭೌಗೋಲಿಕ ಲಕ್ಷಣಗಳಷ್ಟೇ ಅಲ್ಲ. ಅಲ್ಲಿ ಹುಟ್ಟಿ ಬೆಳೆದು ಜೀವಿಸುತ್ತಿರುವ ಸಹಸ್ರಾರು ಮಾನವ ಜೀವಿಗಳು ಒಂದು ರಾಷ್ಟ್ರವನ್ನು ರೂಪಿಸುತ್ತವೆ. ನಿಸರ್ಗ, ನೈಜವಾಗಿ ನೀಡಿದ ನೆಲ, ನೀರು, ನಿಕ್ಷೇಪಿತ ನಿಧಿಗಳೆಲ್ಲ ನಾಡಿನ ನಿಜವಾದ ನಿಧಿಗಳೇನೋ ಸರಿ. ಆದರೆ ಅವುಗಳ ನ್ಯಾಯಸಮ್ಮತ ನಿರ್ವಹಣೆ ನಾಡಿನ ನಿವಾಸಿಗಳ ನಿಪುಣತೆಯಲ್ಲಿದೆ. ಅಷ್ಟಕ್ಕೂ ರಾಷ್ಟ್ರಾಭಿವೃದ್ದಿ ಎಂದರೆ- ರಾಷ್ಟ್ರದ ಸರ್ವತೋಮುಖ ಉತ್ಕರ್ಷ, ಉನ್ನತಿ, ಉತ್ಥಾನ, ಸರ್ವತೋಮುಖ ಅಭಿವೃದ್ಧಿಯೆಂದರೆ ಆ ರಾಷ್ಟ್ರದ ಚಾರಿತ್ರö್ಯ ಶಿಕ್ಷಣ, ಉದ್ಯೋಗ, ವಿಜ್ಞಾನ, ಕಲೆ, ಕೌಶಲ್ಯ, ಕ್ರೀಡೆ ಹೀಗೆ ಅನೇಕ ಆಯಾಮಗಳಲ್ಲಿ ಸಾಧಿಸಿರುವ ಪರಿಣತಿ, ರಾಷ್ಟ್ರದ ಜನತೆಗಳಲ್ಲಿ ಈ ಎಲ್ಲ ಆಯಾಮಗಳ ಪರಿಣತಿ ಇದ್ದಾಗಲೇ ರಾಷ್ಟ್ರಾಭಿವೃದ್ಧಿ ರಾಷ್ಟ್ರದ ಅಭ್ಯುದಯ ಸಾಧ್ಯವಾಗುವುದು.
ಈ ಎಲ್ಲ ಆಯಾಮಗಳಲ್ಲಿ ಪರಿಣತಿ ಪಡೆಯಲು ನಾವು ಚಿಕ್ಕ ಮಕ್ಕಳಿದ್ದಾಗಲೇ ಅದಕ್ಕಾಗಿ ಪರಿಶ್ರಮಪಡಬೇಕಾಗುತ್ತದೆ. ಮಕ್ಕಳಿಗೆ ಈ ಸಂಸ್ಕಾರವನ್ನು ಕೊಡುವುದಕ್ಕಾಗಿ ನಾವು ಅನೇಕ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಅಲ್ಲದೆ ಆ ಯೋಜನೆಗಳ ಸಾಕ್ಷಾತ್ಕಾರಕ್ಕೆ ಶ್ರಮಿಸಬೇಕಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಯಾರೂ ಹುಟ್ಟಿದಾಗಿನಿಂದಲೇ ಹೊಂದಿರಲಾರರು. ಇವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಪಡೆದುಕೊಳ್ಳಬೇಕಾಗುತ್ತದೆ. ಅಂತೆಯೇ ಮಕ್ಕಳಲ್ಲಿ ಅವರ ವಿದ್ಯಾರ್ಥಿ ಜೀವನದಲ್ಲಿಯೇ ಈ ಎಲ್ಲ ಗುಣಗಳನ್ನೂ, ವಿದ್ಯೆಗಳನ್ನೂ, ಕಲೆಗಳನ್ನೂ ಅಳವಡಿಸಬೇಕಾ ಗುತ್ತದೆ.
ಮಕ್ಕಳನ್ನು ‘ಅವರಿನ್ನೂ ಚಿಕ್ಕವರು, ರಾಷ್ಟ್ರಾಭಿವೃದ್ಧಿಯಲ್ಲಿ ಅವರೇನು ಮಾಡಬಲ್ಲರು?’ ಎನ್ನಬೇಡಿ. ‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂದು ಗಾದೆಯಿದೆ. ಆದ್ದರಿಂದಲೇ ರಾಷ್ಟ್ರದ ಅಭ್ಯುದಯಕ್ಕೆ ಆವಶ್ಯಕವಾದ ಆಯಾಮಗಳ ಪರಿಣತಿ ಪಡೆಯಲು ಈಗಿನಿಂದಲೇ ಅವರಿಗೆ ತರಬೇತಿ ನೀಡಬೇಕು. ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನೋಧರ್ಮ ರೂಪಗೊಳ್ಳಬೇಕು. ಅವರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ಅವರ ದೃಷ್ಟಿಕೋನವನ್ನು ಸಂಸ್ಕರಿಸಬೇಕು. ಅ ಎಳೆಯ ಮನಸ್ಸುಗಳಲ್ಲಿಯೇ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನವನ್ನು ಬಿತ್ತಿ ಪೋಷಿಸುತ್ತ ಬರಬೇಕು.
ವಿದ್ಯಾರ್ಥಿಗಳಲ್ಲಿ ಈ ಮನೋಧರ್ಮವನ್ನು ಮೂಡಿಸಲು ದೃಷ್ಟಿಕೋನವನ್ನು ಸೃಷ್ಟಿಸಲು ಶಾಲಾ ಕಾಲೇಜುಗಳು ಯೋಜನೆ ರಚಿಸಬೇಕಾಗಿದೆ. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕ್ರಿಯಾಶೀಲರಾಗಬೇಕಾಗಿದ್ದು, ಅಂತೆಯೇ ರಾಷ್ಟ್ರದ ಉನ್ನತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಖಂಡಿತವಾಗಿಯೂ ಪ್ರಮುಖವಾದದ್ದು, ವಿಶೇಷವಾದದ್ದು. ಅವರ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಲು ಶಾಲಾ, ಕಾಲೇಜುಗಳಲ್ಲದೆ ಶಿಕ್ಷಣ ವಿಭಾಗವೂ ಸಹ ಅತ್ಯಂತ ಗಹನವಾಗಿ ವಿಚಾರಶೀಲರಾಗಬೇಕು. ವಿದ್ಯಾರ್ಥಿಗಳಿಗೆ ಈ ರೀತಿಯ ಯೋಗ್ಯ ತರಬೇತಿ ನೀಡಲು ಪೂರಕವಾದ ಪಾಠ್ಯಕ್ರಮ ತಯಾರಿಸುವುದು ಹಾಗೂ ಅವರ ಪಠ್ಯಪುಸ್ತಕಗಳಲ್ಲಿ ಈ ಪಾಠ್ಯಕ್ರಮವನ್ನು ಅಳವಡಿಸುವುದು ತುಂಬಾ ಅವಶ್ಯಕ.
ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಒಳ್ಳೆ ಶಿಕ್ಷಣ ಪಡೆಯುವುದಲ್ಲದೆ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಅವರ ಚಾರಿತ್ರö್ಯ ಗೌರವಯುತವಾಗುತ್ತದೆ. ರಾಷ್ಟ್ರಾಭಿವೃದ್ದಿಗೆ ಕೆಲ ಅವಶ್ಯಕ ಮೌಲ್ಯಗಳನ್ನು ಈಗ ವಿವೇಚಿಸೋಣ -
ದೇಶಭಕ್ತಿ - ಚಿಕ್ಕಂದಿನಿಂದಲೂ ದೇಶಪ್ರೇಮ, ದೇಶಾಭಿಮಾನವನ್ನು ಮಕ್ಕಳ ನರ ನರಗಳಲ್ಲಿ ತುಂಬಬೇಕು. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಪರ್ವಗಳ ಕುರಿತು ಮಕ್ಕಳಲ್ಲಿ ಅಭಿಮಾನ ಹುಟ್ಟಿಸಬೇಕು. ಅವುಗಳ ವಿಷಯಕ್ಕೆ ಅರಿವನ್ನು ಮೂಡಿಸಬೇಕು. ದೇಶಭಕ್ತಿಗೆ ವಯಸ್ಸಿನ ಮಾನದಂಡ ಬೇಕಿಲ್ಲ. ಉದಾಹರಣೆಗೆ ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯ ಭಾಗವಹಿಸಿದ ಅನೇಕ ನಾಯಕರು ಶಾಲೆ, ಕಾಲೇಜ್ನಲ್ಲಿ ಇರುವಾಗಲೇ ಹೋರಾಟದಲ್ಲಿ ಭಾಗವಹಿಸಿದ್ದರು.
ನನ್ನ ಬಾಲ್ಯದ ದಿನಗಳನ್ನು ನೆನೆದಾಗ ನನಗೆ ಅಭಿಮಾನ ಎನ್ನಿಸುವುದು, ನಾವೂ ಕೂಡ ಸ್ವಾತಂತ್ರö್ಯದ ಹೋರಾಟದಲ್ಲಿ ಅಳಿಲು ಸೇವೆ ಮಾಡಿದ್ದೇವೆ ಎಂದು. ನನಗಾಗ ಆರು ವರ್ಷ ಪ್ರತಿದಿನ ಬೆಳಗಿನ ಜಾವ ನಮ್ಮ ನೆರೆಯ ಮಕ್ಕಳೆಲ್ಲ ಸೇರಿ ರಾಷ್ಟ್ರಭಕ್ತಿ ಗೀತೆಗಳನ್ನು ಹೇಳುತ್ತ ಕೈಯಲ್ಲಿ ಧ್ವಜ ಹಿಡಿದುಕೊಂಡು ‘ಪ್ರಭಾತ ಫೇರಿ’ಗೆ ಹೋಗುತ್ತಿದ್ದೆವು. ತೋಟದಲ್ಲಿ ಗಿಡಗಳಿಗೆ ಸೀರೆ ಕಟ್ಟಿ ವೇದಿಕೆ ತಯಾರಿಸಿಕೊಂಡು ಭಾಷಣ ಮಾಡುತ್ತಿದ್ದೆವು. ಘೋಷಣೆ ಕೂಗುತ್ತಿದ್ದೆವು. ದಂಟಿನಿಂದ ಮಾಡಿದ ಆಟಿಗೆ ಚಕ್ಕಡಿಗಳಿಗೆ ಪುಟ್ಟ ಧ್ವಜ ಹಚ್ಚಿ ಎಳೆಯುತ್ತಿದ್ದೆವು.
ಈಗಲೂ ಮಕ್ಕಳಿಗೆ ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸಬೇಕು. ಹೋರಾಟಗಾರರ ಜೀವನ ಚರಿತ್ರೆಗಳನ್ನು ಓದಲು ಪ್ರೋತ್ಸಾಹಿಸಬೇಕು. ಅವರ ಜೀವನದ ಘಟನೆಗಳನ್ನು ನಾಟಕ ರೂಪದಲ್ಲಿ ಪ್ರದರ್ಶಿಸಬೇಕು. ಇಂದಿನ ಶಾಸನ ಪದ್ಧತಿಯ ಕುರಿತು ಚರ್ಚೆ ನಡೆಸಬೇಕು.
ಸಮಯ ಪ್ರಜ್ಞೆ - ನಮ್ಮ ಜೀವನದಲ್ಲಿ ಸಮಯ ತುಂಬಾ ಅಮೂಲ್ಯವಾದದ್ದು. ಅಂತೆಯೇ ಒಂದು ನಿಮಿಷವನ್ನೂ ಅರ್ಥಹೀನವಾಗಿ ವ್ಯಯಿಸದೆ ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಆರ್ಥಪೂರ್ಣವಾಗಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು.
ಉದ್ಯೋಗಶೀಲತೆ - ಕಾರ್ಯಶೀಲತೆ ಅಥವಾ ಇಂಗ್ಲೀಷ್ನಲ್ಲಿ ‘Woಡಿಞ ಛಿuಟಣuಡಿe’ಎಂದು ಹೇಳುವ ಈ ಮೌಲ್ಯವನ್ನು ನಮ್ಮದಾಗಿಸಿಕೊಳ್ಳಬೇಕು. ಸೋಮಾರಿತನವೂ ತರವಲ್ಲ ಹಾಗೇ ‘ನನ್ನ ಕೈಯಿಂದ ಆಗಲಾರದು’ ಎಂಬ ಧೋರಣೆಯೂ ತರವಲ್ಲ. ‘Woಡಿಞ is ತಿoಡಿshiಠಿ’ ಹಾಗೆ ‘ಕಾಯಕವೇ ಕೈಲಾಸ’ ಎಂಬುದನ್ನು ಮನಗಂಡು ನಾವು ಮಾಡುವ ಒಳ್ಳೆಯ ಕೆಲಸವನ್ನೇ ನಮ್ಮ ದೇವರ ಪೂಜೆ ಎಂದುಕೊಳ್ಳಲು ವಿದ್ಯಾರ್ಥಿಗಳಿಗೆ ಕಲಿಸಬೇಕು.
ಪರಿಸರ ಸಂರಕ್ಷಣೆ - ಪರಿಸರವನ್ನು ಪ್ರದೂಷಣೆಯಿಂದ ಮುಕ್ತ ಮಾಡಿದಾಗ ರಾಷ್ಟ್ರ ರೋಗಮುಕ್ತವೂ ಆಗಬಹುದು. ಆದ್ದರಿಂದ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಲು ಮಕ್ಕಳಿಗೆ ತರಬೇತಿ ನೀಡಬೇಕು. ಹಾಗೇ ಮಕ್ಕಳಲ್ಲಿ ಮರಗಿಡಗಳನ್ನು ನೆಡಲು ಪ್ರೇರೇಪಿಸಬೇಕು. ವಿದ್ಯಾರ್ಥಿದೆಶೆಯಿಂದಲೆ ಈ ಅಭ್ಯಾಸ ಅವರಿಗೆ ಆಗಬೇಕಾದ್ದು ಅವಶ್ಯಕ.
ಸಹಜೀವನ - ಮಕ್ಕಳು ಪರಸ್ಪರ ದ್ವೇಷವನ್ನು ತೊರೆದು ಐಕ್ಯತೆಯಿಂದ ಸಹಜೀವನ ನಡೆಸಲು ಕಲಿಯಬೇಕು. ಈ ಭಾವನೆಯನ್ನು ಮನೆಯ ಜನ ಹಾಗೇ ಶಿಕ್ಷಕರು ಪೋಷಿಸಬೇಕು. “ಐಕ್ಯತೆಯಲ್ಲಿ ಶಕ್ತಿಯಿದೆ” ಎಂದು ಮನಗಾಣಿಸಬೇಕು. ಅವರು ಉಳಿದವರ ದುಃಖದಲ್ಲಿ ಸಂವೇದಿಸಲಿ.
ಧರ್ಮ ನಿರಪೇಕ್ಷತೆ - ಮಕ್ಕಳಲ್ಲಿ ಧರ್ಮ, ಜಾತಿ, ಪಂಥಗಳ ಭೇದಭಾವ ಇರುವುದು ಬೇಡ. ಚಿಕ್ಕವರಿದ್ದಾಗಿನಿಂದಲೇ ಅವರಲ್ಲಿ ವಿಶ್ವಬಂಧುತ್ವ, ವಿಶ್ವ ಕುಟುಂಬದ ಭಾವನೆ ಬೆಳೆಸಬೇಕು.
ಮಿತವ್ಯಯ - ಮೊಟ್ಟ ಮೊದಲು ಮಕ್ಕಳು ಕಾಸಿಗೆ ಮಹತ್ವ ಕೊಡದೆ ಮಾನವತೆಗೆ ಗೌರವ ನೀಡಲು. ಅಲ್ಲದೆ ಅನವಶ್ಯಕ ವಸ್ತುಗಳಿಗಾಗಿ ದುಡ್ಡು ವ್ಯಯಿಸುವುದು ಬೇಡ. ಈ ದೃಷ್ಟಿಕೋನ ಮುಂದೆ ದೇಶದ ಸಂಪತ್ತನ್ನು ಕೂಡಾ ಅಪವ್ಯಯ ಮಾಡದಂತೆ ಸಹಕರಿಸುತ್ತದೆ.
ಹವ್ಯಾಸಗಳ ಪೋಷಣೆ - ಪ್ರತಿಯೊಬ್ಬ ಮಗುವಿನಲ್ಲೂ ಏನಿಲ್ಲ ಏನು ಪ್ರತಿಭೆ ಇದ್ದೇ ಇರುತ್ತದೆ. ತಂದೆ-ತಾಯಿಗಳು ಹಾಗೂ ಶಿಕ್ಷಕರು ಈ ಪ್ರತಿಭೆಯನ್ನು ಗುರುತಿಸಿ ಪೋಷಿಸಬೇಕು, ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದು ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಹಸ್ತಕಲೆ ಇವುಗಳಲ್ಲಿ ಒಂದಾಗಿರಬಹುದು ಅಥವಾ ಅನೇಕ ಕ್ರೀಡೆಗಳಲ್ಲಿ ಒಂದಾಗಿರಬಹುದು. ಇವುಗಳನ್ನು ಗುರುತಿಸಿ ಪೋಷಿಸಿ ಬೆಳೆಸಬೇಕು. ರಾಷ್ಟ್ರದ ಅಭಿವೃದ್ಧಿ ಅದರ ಸಾಂಸ್ಕೃತಿಕ ವಲಯದಲ್ಲೂ ವಿಕಾಸದ ಅಭ್ಯಿವ್ಯಕ್ತಿ ತೋರುತ್ತದೆ. ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಇಂಥ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಪ್ರಾವೀಣ್ಯತೆ ಪಡೆಯಬೇಕು. ಅನೇಕ ರಾಷ್ಟ್ರಗಳು ತಮ್ಮ ಸಾಂಸ್ಕೃತಿಕ ಪ್ರತಿಭೆ ಹಾಗೂ ಕ್ರೀಡೆಗಳಿಗಾಗಿಯೇ ಪ್ರಸಿದ್ಧಿ ಪಡೆದಿವೆ.
ಈ ಎಲ್ಲ ವಿಷಯಗಳನ್ನು ವಿವೇಚಿಸಿದಾಗ ನಮಗೆಲ್ಲ ಮನದಟ್ಟಾಗುವ ಒಂದು ಸತ್ಯವೆಂದರೆ ಇಂದಿನ ವಿದ್ಯಾರ್ಥಿಗಳು ನಾಳಿನ ರಾಷ್ಟ್ರದ ಉತ್ಥಾನಕ್ಕೆ, ಉತ್ಕರ್ಷಕ್ಕೆ, ಉನ್ನತಿಗೆ ಸನ್ನದ್ಧರಾಗುತ್ತಿರುವ ಸೇನಾನಿಗಳು. ಅಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶಿಕ್ಷಣ, ಚಾರಿತ್ರö್ಯ, ಉದ್ಯಮ ಕೌಶಲ್ಯ, ರಾಷ್ಟ್ರಾಭಿಮಾನಗಳನ್ನು ಬೆಳೆಸಿಕೊಂಡು ರಾಷ್ಟ್ರದ ಗೌರವವನ್ನು ಹೆಚ್ಚಿಸಬೇಕು. “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಮಾತನ್ನು ಮರೆಯದೆ ಸತತವಾಗಿ ರಾಷ್ಟ್ರದ ಆರಾಧನೆ, ರಾಷ್ಟ್ರದ ಸೇವೆ ಮಾಡುತ್ತ ರಾಷ್ಟ್ರದ ಹಿರಿಮೆ-ಗರಿಮೆಗಳನ್ನು ಚರಮ ಸೀಮೆಗೆ ಕೊಂಡೊಯ್ಯಬೇಕು. ಈ ಉತ್ತರದಾಯಿತ್ವವನ್ನು ಅರ್ಥ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳು ರಾಷ್ಟ್ರದ ಅಭ್ಯುದಯ, ಅಭಿವೃದ್ಧಿಗಳಲ್ಲಿ ತಮ್ಮ ಪಾತ್ರದ ಔಚಿತ್ಯ ಹಾಗೂ ತಮ್ಮ ಭೂಮಿಕೆಯ ಅವಶ್ಯಕತೆ ಹಾಗೂ ಪ್ರಾಮುಖ್ಯತೆಯನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಸಕಾರಾತ್ಮಕ ಪ್ರಯತ್ನ ನಡೆಯುವುದೆಂದು ಆಶಿಸುತ್ತೇನೆ.
The way corruption has come about
ಭ್ರಷ್ಟಾಚಾರ ನಡೆದು ಬಂದ ದಾರಿ
ಭ್ರಷ್ಟಾಚಾರವನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಸ್ವರೂಪದ ಬಗ್ಗೆ ಖಚಿತ ಅಭಿಪ್ರಾಯ ವಿರುವುದು ಅಗತ್ಯ. ಭ್ರಷ್ಟಾಚಾರವನ್ನು ಸರಿಯಾಗಿ ಅರ್ಥಮಾಡಿ ಕೊಂಡಾಗ ಮಾತ್ರ ಅದಕ್ಕೊಂದು ಪರಿಹಾರ ಮಾರ್ಗ ಸೂಚಿಸಲು ಸಾಧ್ಯ. ಆದರೆ ಭ್ರಷ್ಟಾಚಾರವನ್ನು ಸುಲಭವಾಗಿ ಕೆಲವೊಂದು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅದರ ಆಳ, ವಿಸ್ತಾರ ಮತ್ತು ವೈವಿಧ್ಯತೆಯಿಂದ ಭ್ರಷ್ಟಾಚಾರ ತರ್ಕಕ್ಕೆ ಸಿಲುಕಿ ದಷ್ಟು ಸಂಕೀರ್ಣವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್ನೆಟ್ನಲ್ಲಿ ಗೂಗಲ್ ಸರ್ಚ್ ಇಂಜಿನ್ನಲ್ಲಿ `ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್ನೆಟ್ ನಲ್ಲಿ ಗೂಗಲ್ ಸರ್ಚ್ ಇಂಜಿನ್ನಲ್ಲಿ `ಭ್ರಷ್ಟಾಚಾರ’ ಎಂಬ ಪದ ನಮೂದಿಸಿದೊಡನೆ ಕೋಟಿಗೂ ಹೆಚ್ಚು ಲೇಖನ, ಪುಸ್ತಕ, ವರದಿ, ಸಮೀಕ್ಷೆ ಇತ್ಯಾದಿ ಗೋಚರಿಸುತ್ತದೆ. ಅದೇ ಜಾಗದಲ್ಲಿ `ಭಾರತದಲ್ಲಿ ಭ್ರಷ್ಟಾಚಾರ’ ಎಂದು ನಮೂದಿಸಿದರೆ ಇದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಾಹಿತಿ ಸಾಮಾಗ್ರಿ ದೊರೆಯುತ್ತದೆ. ಇಷ್ಟಾದರೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಭ್ರಷ್ಟಾಚಾರವನ್ನು ವಿವರಿಸಲು ಆಗಿಲ್ಲ. ವಿಶ್ವ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ತನ್ನ ಸಮರ ಆರಂಭಿಸುವ ಸಂದರ್ಭದಲ್ಲಿ [೨೦೦೨] ಭ್ರಷ್ಟಾಚಾರವನ್ನು ಅರ್ಥೈಸುವುದು ಬೇಡವೆಂದು ಅದರ ಬದಲಾಗಿ ಭ್ರಷ್ಟಾಚಾರದ ವಿವಿಧ ಮಾದರಿಗಳನ್ನು ಗುರುತಿಸುವುದು ಸೂಕ್ತ ಎಂಬ ನಿರ್ಧಾರ ಕೈಗೊಂಡಿತು.
ಮೂಲಭೂತವಾಗಿ ಭ್ರಷ್ಟಾಚಾರ ಲ್ಯಾಟಿನ್ ಪದ `ಕರಪ್ಟಸ್’ ನಿಂದ ಬಂದಿದೆ. ಕರಪ್ಟಸ್ ಎಂದರೆ ಒಡೆಯುವುದು ಅಥವಾ ಮುರಿಯುವುದು ಎಂದರ್ಥ. ನೈತಿಕ, ಸಾಮಾಜಿಕ ಅಥÀವಾ ಆಡಳಿತಾತ್ಮಕ ನಿಯಮಗಳನ್ನು ಮುರಿಯು ವುದು ಭ್ರಷ್ಟಾಚಾರವಾದೀತು. ಜರ್ಮನಿಯ ಟ್ರಾನ್ಸ್ಫರೆನ್ಸಿ ಇಂಟರ್ನ್ಯಾಷನಲ್ [ಟಿಐ] ಸಂಸ್ಥೆಯು ಸಾರ್ವಜನಿಕ ಅಧಿಕಾರವನ್ನು ಸ್ವಂತ ಲಾಭಕ್ಕೆ ದುರುಪಯೋಗ ಮಾಡಿಕೊಳ್ಳುವುದೇ ಭ್ರಷ್ಟಾಚಾರ ಎಂದು ಹೇಳಿತ್ತು. ಆದರೆ ಸರ್ಕಾರದ ಅನೇಕ ಯೋಜನೆಗಳು ಮತ್ತು ಕರ್ತವ್ಯಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭವಾದಾಗ ಈ ಅರ್ಥವನ್ನು ವಿಸ್ತಾರಗೊಳಿಸಿ `ಅಧಿಕಾರವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವುದು ಭ್ರಷ್ಟಾಚಾರ’ ಎಂಬ ನಿಲುವನ್ನು ತೆಗೆದುಕೊಂಡಿತು. ಸ್ಥೂಲವಾಗಿ ಹೇಳುವುದಾದರೆ ಸಾರ್ವಜನಿಕ ಸೇವಕರು ತಮ್ಮ ಸ್ಥಾನಮಾನವನ್ನು ತಮ್ಮ ಅಥವಾ ಅವರಿಗೆ ಬೇಕಾದವರ ವೈಯಕ್ತಿಕ ಲಾಭಕ್ಕೆ ದುರುಪಯೋಗ ಮಾಡಿ ಕೊಂಡರೆ ಅದು ಭ್ರಷ್ಟಾಚಾರವಾಗುತ್ತದೆ. ಭ್ರಷ್ಟಾಚಾರ ನಾಲ್ಕು ಅಂಶಗಳಿಂದ ಕೂಡಿದೆ. ಅವುಗಳೆಂದರೆ (೧) ಹುದ್ದೆಯ ಅಥವಾ ಅಧಿಕಾರದ ದುರುಪಯೋಗ (೨) ದುರಪಯೋಗದ ಲಾಭ ಪಡೆಯುವ ಫಲಾನುಭವಿಗಳು (೩) ಗೌಪ್ಯತೆ ಹಾಗೂ (೪) ಭ್ರಷ್ಟಾಚಾರದಲ್ಲಿ ಭಾಗಿಯಾಗದ ಅಮಾಯಕರ ಮೇಲೆ ಉಂಟಾಗುವ ದುಷ್ಪರಿಣಾಮ.
ಅರವತ್ತರ ದಶಕದವರೆಗೂ ಭ್ರಷ್ಟಾಚಾರವನ್ನು ನೈತಿಕ ನೆಲೆಗಟ್ಟಿನ ಮೇಲೆ ಚರ್ಚಿಸಲಾಗುತ್ತಿತ್ತು. ಅನಂತರ ಸಾರ್ವಜನಿಕ ಅಧಿಕಾರದ ದುರುಪಯೋಗದ ಹಿನ್ನೆಲೆಯಲ್ಲಿ ಭ್ರಷ್ಟಾಚಾರವನ್ನು ನೋಡುವ ಕ್ರಮ ಆರಂಭವಾಯಿತು. ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಆರಂಭವಾದಾಗಿನಿಂದ ಭ್ರಷ್ಟಾಚಾರವನ್ನು ಮತ್ತೊಂದು ರೀತಿಯಲ್ಲಿ ಪರಿಗಣಿಸಲಾಗುತ್ತಿದೆ.
ಸರ್ಕಾರವನ್ನು ತನ್ನ ಬಿಗಿ ಮುಷ್ಠಿಯಲ್ಲಿ ಇರಿಸಿಕೊಳ್ಳಲು ಮಾರುಕಟ್ಟೆ (ಉದ್ಯಮ) ಕೈಗೊಳುವ ಎಲ್ಲ ಕ್ರಮವನ್ನು ಭ್ರಷ್ಟಾಚಾರದ ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಏಸಿಯಾ ಪೆಸಿಫಿಕ್ ಮಾನವ ಅಭಿವೃದ್ಧಿ ವರದಿ (೧೯೯೭)ಯು ಭ್ರಷ್ಟಾಚಾರವನ್ನು ಪ್ರಿನ್ಸಿಪಾಲ್, ಏಜೆಂಟ್ ಮತ್ತು ಕ್ಲಯೆಂಟ್ ಎಂಬ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತದೆ. ಪ್ರಿನ್ಸಿಪಾಲರೇ ಆ ಕೆಲಸವನ್ನು ಮಾಡಲಾಗದ ಕಾರಣ ಏಜೆಂಟ್ಗಳನ್ನು ನೇಮಕ ಮಾಡುತ್ತಾರೆ. ಸರ್ಕಾರದ ದೃಷ್ಠಿಯಿಂದ ನೋಡುವುದಾದರೆ ಚುನಾಯಿತ ಪ್ರತಿನಿಧಿಗಳನ್ನು ಪ್ರಿನ್ಸಿಪಾಲ್ ಎಂದು ಅಧಿಕಾರಿಗಳನ್ನು ಏಜೆಂಟ್ ಎಂದು ಪರಿಗಣಿಸಬಹುದು. ನಾಗರಿಕರು ಕ್ಲಯೆಂಟ್ ಆಗುತ್ತಾರೆ. ಖಾಸಗಿ ವಲಯದಲ್ಲಿಯೂ ಇದನ್ನು ಕಾಣಬಹುದು. ಕಂಪನಿಗಳ ಮಾಲೀಕರನ್ನು ಪ್ರಿನ್ಸಿಪಾಲ್ ಎಂದು ಮತ್ತು ಅವರು ನೇಮಕ ಮಾಡುವ ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಯನ್ನು ಏಜೆಂಟ್ ಎಂದು ಪರಿಗಣಿಸಬಹುದು. ಸಾರ್ವಜನಿಕ ಆಡಳಿತದಲ್ಲಾಗಲೀ ಅಥವಾ ಕಂಪನಿಯ ಆಡಳಿತಕ್ಕಾಗಲಿ ಇದೊಂದು ಉತ್ತಮ ವ್ಯವಸ್ಥೆ. ಆದರೆ ಸಮಸ್ಯೆ ಉದ್ಭವಿಸುವುದು ಏಜೆಂಟ್ಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತಮಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸಿದಾಗ. ಸಾಮಾನ್ಯವಾಗಿ ಈ ಏಜೆಂಟ್ಗಳು ವ್ಯವಹಾರ ಚತುರರು. ಅವರು ಪ್ರಿನ್ಸಿಪಾಲ್ಗಿಂತ ಹೆಚ್ಚಿನ ಮಾಹಿತಿ ಹೊಂದಿರುತ್ತಾರೆ. ಈ ಅವಕಾಶವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ.
ಭ್ರಷ್ಟಾಚಾರವೆಂದರೆ ಅದೊಂದು ಮೋಹಜಾಲ, ಪ್ರಲೋಭನೆ. ಸ್ವಾರ್ಥಕ್ಕಾಗಿ ಆಮಿಷ ನೀಡಿ ಅಧಿಕಾರಿಗಳನ್ನು ಪುಸಲಾಯಿಸುವುದು ಅಥವಾ ಗ್ರಾಹಕರ, ಸಾರ್ವಜನಿಕರ ಅಗತ್ಯಗಳನ್ನು ಪೂರೈಸಿ ಪಡೆಯುವ ಯಾವುದೇ ಸ್ವರೂಪದ ಪ್ರತಿಫಲವೂ ಭ್ರಷ್ಟಾಚಾರವೇ. ಭ್ರಷ್ಟಾಚಾರಕ್ಕೆ ಅದೆಷ್ಟು ಮುಖಗಳಿವೆ-ಎಂಬುದೇ ಒಂದು ನಿಗೂಢ ಪ್ರಶ್ನೆ.
ಸೇವೆ, ಪಕ್ಷಪಾತ (ನೆರವು) ಅಥವಾ ಯಾವುದೇ ಸ್ವಹಿತಕ್ಕಾಗಿ ಲಾಭ, ಪ್ರಯೋಜನ, ಉಡುಗೊರೆ, ಹಣ, ಸಾಲ, ಶುಲ್ಕ, ಲಂಚ, ರುಷುವತ್ತು ಅಥವಾ ಸಂತೋಷ ಪಡಿಸುವುದು ಎಂದರೇನು? ಯಾವುದೇ ಕೆಲಸವನ್ನು ಕೈಗೊಳ್ಳಲು ಒಪ್ಪಿ ಕೊಳ್ಳುವುದು ಅಥವಾ ನಿರ್ದಿಷ್ಟ ಸ್ಥಾನಮಾನವನ್ನೋ ನೌಕರಿಯನ್ನೋ ಕೊಡಿಸಲು ಭರವಸೆ ನೀಡುವುದು. ಆಸ್ತಿಪಾಸ್ತಿ ಪ್ರತಿಫಲ ೫೦೦ ಡಾಲರ್ ಅಷ್ಟೇ! ನಿಮಗೆ ಪರವಾನಗಿ ನೀಡಲು ಅನುಮತಿ ನೀಡುತ್ತೇನೆ
೫೦೦ ಡಾಲರ್ ಸಾಕು! ನೀನು ಅತಿವೇಗದಿಂದ ಕಾರು ಓಡಿಸಿದೆಯಲ್ಲಾ? ಆ ಆಪಾದನೆಯನ್ನು ಕೈಬಿಟ್ಟೆ ಎಂದಿಟ್ಟುಕೊ....
ಕೇಂದ್ರ ಸರ್ಕಾರವು ೧೯೪೭ರಲ್ಲಿ ಸಂತಾನಮ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಲಹೆ ನೀಡುವುದು ಈ ಸಮಿತಿಯ ಉದ್ದೇಶವಾಗಿತ್ತು. ಸಮಿತಿಯು ಭ್ರಷ್ಟಾಚಾರವನ್ನು ತಡೆಗಟ್ಟಲು ಅನೇಕ ಉಪಯುಕ್ತ ಸೂಚನೆಗಳನ್ನು ನೀಡಿತಾದರೂ, ಭ್ರಷ್ಟಾಚಾರದ ಮೂಲ ಸ್ವರೂಪದ ಬಗ್ಗೆ ಖಚಿತವಾಗಿ ತನ್ನ ಅಭಿಪ್ರಾಯ ತಿಳಿಸಲಿಲ್ಲ. ಸಾರ್ವಜನಿಕ ಸ್ಥಾನ ಅಥವಾ ಹುದ್ದೆಯೊಂದಿಗೆ ಇರುವ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರ ಎಂಬುದು ಸಮಿತಿಯ ಅಭಿಪ್ರಾಯವಾಗಿತ್ತು. ಲಂಚ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಕಾಯ್ದೆ ೧೯೪೭ ಹಾಗೂ ಇಂಡಿಯನ್ ಫೀನಲ್ ಕೋಡ್ (ಸೆಕ್ಷನ್ ೧೬೧) ಸಹ ಭ್ರಷ್ಟಾಚಾರಕ್ಕೆ ತನ್ನದೆ ಆದ ಅರ್ಥವನ್ನು ನೀಡಿದೆ. ಇವೆಲ್ಲವೂ ಭ್ರಷ್ಟಾಚಾರದ ಒಂದೆರಡು ಮಗ್ಗಲುಗಳನ್ನು ಮಾತ್ರ ಪರಿಗಣಿಸುತ್ತದೆ. ಆದರೆ ಗ್ರೀಕ್ ಚರಿತ್ರೆಯಲ್ಲಿ ಬರುವ ಅನೇಕ ಮುಖಗಳುಳ್ಳ ರಕ್ಷ `ಹೈಡ್ರಾ’ನಂತೆ ಭ್ರಷ್ಟಾಚಾರಕ್ಕೆ ಅನೇಕ ಪಾರ್ಶ್ವಗಳಿವೆ. ಈ ವಿಷಯದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಹೆಚ್ಚು ಉಪಯುಕ್ತ ಎಂದು ತೋರುತ್ತದೆ. ಕೌಟಿಲ್ಯ ತನ್ನ `ಅರ್ಥಶಾಸ್ತ್ರ’ದಲ್ಲಿ ಭ್ರಷ್ಟಾಚಾರದ ಅನೇಕ ಮುಖಗಳ ಪರಿಚಯ ಮಾಡಿಕೊಟ್ಟಿದ್ದಾನೆ. ಭ್ರಷ್ಟರಿಗೆ ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ಸಹ ವಿವರಿಸಿದ್ದಾನೆ.
ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳಲು ಕ್ಲಿಟ್ ಗಾರ್ಡ್ ಎಂಬ ಶಾಸ್ತ್ರಜ್ಞ ಸರಳ ಸಿದ್ದಾಂತವನ್ನು ರೂಪಿಸಿದ್ದಾನೆ. ಆತನ ಪ್ರಕಾರ ಉತ್ತರದಾಯಿತ್ವ ಇಲ್ಲದೆ ಏಕಾಧಿಕಾರದ ಜೊತೆಗೆ ವಿವೇಚನಾಧಿಕಾರ ಸೇರಿದರೆ ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದನ್ನು ಸಾಂಕೇತಿಕವಾಗಿ ಹೀಗೆ ಹೇಳಿದ್ದಾನೆ.
ಅ=ಒ+ಆ-ಂ ಇಲ್ಲಿ ಅ ಎಂದರೆ ಕರಪ್ಷನ್ [ಭ್ರಷ್ಟಾಚಾರ], ಒ ಎಂದರೆ ಮೊನಾಪಲಿ [ಏಕಾಧಿಕಾರ] ಆ ಎಂದರೆ ಡಿಸ್ಕ್ರೀಷನ್ [ವಿವೇಚನಾಧಿಕಾರ] ಮತ್ತು ಂ ಎಂದರೆ ಅಕೌಂಟಬಲಿಟಿ [ಉತ್ತರದಾಯಿತ್ವ]. ಈ ಸಿದ್ದಾಂತದ ಪ್ರಕಾರ ಸಾರ್ವಜನಿಕ ಅಧಿಕಾರಿಗೆ ನೀಡಿರುವ ಅಧಿಕಾರ ಮತ್ತು ವಿವೇಚನಾಧಿಕಾರ ಭ್ರಷ್ಟಾಚಾರವನ್ನು ನಿರ್ಧರಿಸುತ್ತದೆ. ಅತ್ಯಂತ ಹೆಚ್ಚು ನಿಯಂತ್ರಣಕ್ಕೆ ಒಳಪಟ್ಟ ದೇಶಗಳಲ್ಲಿ ಏಕಾಧಿಕಾರ ಹೆಚ್ಚಾಗಿರುತ್ತದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿವೇಚನಾ ಅಧಿಕಾರ ಹೆಚ್ಚಾಗಿರುತ್ತದೆ. ದುರ್ಬಲ ಆಡಳಿತ ವ್ಯವಸ್ಥೆ ಹಾಗೂ ಅದಕ್ಷತೆಯಿಂದ ಕೂಡಿದ ನಿಯಂತ್ರಣ ಪ್ರಾಧಿಕಾರಗಳು ಇದ್ದಲ್ಲಿ ಉತ್ತರದಾಯಿತ್ವ ದುರ್ಬಲ ವಾಗಿರುತ್ತದೆ. ಇದೆಲ್ಲವೂ ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಡುತ್ತದೆ. ಆದ್ದರಿಂದ ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದರೆ ಅಧಿಕಾರಿಗಳ ಎಕಾಧಿಕಾರಕ್ಕೆ ತಡೆಹಾಕಬೇಕು. ಜೊತೆಗೆ ಅಧಿಕಾರಿಗಳ ವಿವೇಚನಾ ಅಧಿಕಾರವನ್ನು ಆದಷ್ಟು ಕಡಿಮೆ ಮಾಡಿ ಉತ್ತರದಾಯಿತ್ವ ಹೆಚ್ಚಿಸಬೇಕು. ಆರೋರಾ ಡಾಲಿ ಪ್ರಕಾರ ಭ್ರಷ್ಟಾಚಾರವನ್ನು ಮೂರು ರೀತಿ ವಿಂಗಡಿಸಬಹುದು. ಮೊದಲನೆಯ ದರಲ್ಲಿ ವ್ಯಕ್ತಿ ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಸೌಲಭ್ಯವನ್ನು ಪಡೆಯುತ್ತಾನೆ. ಇದಕ್ಕೆ ಕಾರಣ ಇತರರು ಈ ರೀತಿ ನಡೆದುಕೊಳ್ಳಲು ಹಿಂಜರಿಯಬಹುದು ಅಥವಾ ಆ ರೀತಿ ನಡೆದುಕೊಂಡರೆ ಅದರಿಂದ ಉಂಟಾಗುವ ಫಲಿತಾಂಶಕ್ಕೆ ಹೆದರಿಕೆ ಇರಬಹುದು. ಇಲ್ಲಿ ಸೌಲಭ್ಯ ನೀಡುವ ಅಧಿಕಾರಿ ಮತ್ತು ಫಲಾನುಭವಿ ಇಬ್ಬರೂ ಒಗ್ಗಟ್ಟಾಗಿ ಭ್ರಷ್ಟಾರದಲ್ಲಿ ತೊಡಗುತ್ತಾರೆ. ಈ ದೇಶ ಕಂಡ ಅತ್ಯಂತ ಬೃಹತ್ ಮೊತ್ತದ ಷೇರು ಹಗರಣದಲ್ಲಿ ಹರ್ಷದ್ ಮೆಹ್ತಾ ಮತ್ತು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರು. ಹಗರಣದ ಬಗ್ಗೆ ತನಿಖೆ ಮಾಡಿದ ಜಾನಕಿರಾಮನ್ ಸಮಿತಿ ಯ ಪ್ರಕಾರ ಕೆಲ ಬ್ಯಾಂಕ್ಗಳ ನಿರ್ದೇಶಕರೂ ಇದರಲ್ಲಿ ಭಾಗಿಯಾಗಿದ್ದರು. ಎರಡನೆಯ ಮಾದರಿ ಭ್ರಷ್ಟಾಚಾರ ಏಕಮುಖವಾದದ್ದು. ಇಲ್ಲಿ ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದರ್ಪದಿಂದ ಬಳಸುವ ಮೂಲಕ ಅಥವಾ ಬಳಸುತ್ತೇನೆಂದು ಹೆದರಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗುತ್ತಾನೆ. ಉದಾಹರಣೆಗೆ ಪೊಲೀಸ್ ಸಿಬ್ಬಂದಿ ನಾಗರಿಕರನ್ನು ಹೆದರಿಸಿ, ಬೆದರಿಸಿ ಹಣ ಸುಲಿಗೆ ಮಾಡುವುದು ಅಪರೂಪವಲ್ಲ. ಇಲ್ಲಿ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರಕ್ಕೆ ಕಾರಣ. ಈ ಎರಡೂ ಮಾದರಿ ಭ್ರಷ್ಟಾಚಾರದಲ್ಲಿ ಒಂದಕ್ಕಿಂತ ಹೆಚ್ಚಿನವರು ಭಾಗಿಯಾಗಿರುತ್ತಾರೆ. ಕೇವಲ ಒಬ್ಬನೇ ಭಾಗಿಯಾಗುವ ಭ್ರಷ್ಟಾಚಾರವು ಇದೆ. ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಾಭ ಗಳಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಉದಾಹರಣೆಗೆ ಸುಳ್ಳು ದಾಖಲೆ ನೀಡಿ ಪ್ರಯಾಣ ಭತ್ಯೆ ಪಡೆಯುವುದು, ಯಾವುದೇ ಕಾಯಿಲೆ ಇಲ್ಲದಿದ್ದರೂ ವೈದ್ಯರಿಂದ ಸರ್ಟಿಫಿಕೇಟ್ ಪಡೆದು ಕಚೇರಿಯಿಂದ ಹಣ ಪಡೆಯವುದು ಇತ್ಯಾದಿ. ವಿಚಕ್ಷಣ ಆಯೋಗ ಪತ್ತೆ ಹಚ್ಚುವ ಅನೇಕ ಪ್ರಕರಣಗಳು ಈ ಗುಂಪಿಗೆ ಸೇರಿವೆ.
ಭ್ರಷ್ಟಾಚಾರ ಬಹುರೂಪಿ. ಅದು ಅನೇಕ ರೀತಿಯಲ್ಲಿ ನಡೆಯುತ್ತದೆ. ಕೆಳಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಬ್ರೆöÊಬರಿ ಎಂದು ಕರೆಯುತ್ತಾರೆ. ಇದನ್ನು ಲಂಚ ಎನ್ನಬಹುದು. ಅಧಿಕಾರದಲ್ಲಿರುವ ವ್ಯಕ್ತಿ ಯಾವುದಾದರೂ ಕ್ರಮ ಕೈಗೊಳ್ಳಲು ಅಥವಾ ಕೈಗೊಳ್ಳದಿರಲು ನೀಡುವ ಹಣವನ್ನು ಈ ಗುಂಪಿಗೆ ಸೇರಿಸಬಹುದು. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಾಗ ಅದನ್ನು ಪತ್ತೆ ಹಚ್ಚುವ ಪೊಲೀಸ್ಗೆ ಹಣ ನೀಡಿ ಕೇಸ್ ದಾಖಲು ಮಾಡದಂತೆ ನೋಡಿಕೊಳ್ಳುವುದು ದಿನ ನಿತ್ಯ ನಡೆಯುವ ಭ್ರಷ್ಟಾಚಾರದ ಮಾದರಿ. ಇದಕ್ಕೆ ಕಿಕ್ಬ್ಯಾಕ್, ಬಕ್ಷೀಸ್ ಎಂದು ಕರೆಯಲಾಗಿದೆ. ರಸ್ತೆ ಬದಿಯ ವ್ಯಾಪಾರಿಗಳು ಪೊಲೀಸ್, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ರೌಡಿಗಳು ಮುಂತಾದವರಿಗೆ ನೀಡುವ ಹಣ ಅಥವಾ ರೋಲ್ಕಾಲ್ ಒಂದು ಮಾದರಿ ಲಂಚ. ತಪ್ಪು ಮಾಹಿತಿ ನೀಡಿ ಅದರಿಂದ ಯಾವುದಾದರೂ ಸೌಲಭ್ಯ ಪಡೆಯುವುದು ಸಹ ಒಂದು ರೀತಿಯ ಭ್ರಷ್ಟಾಚಾರ, ಕಪ್ಪು ಹಣವನ್ನು ಹೊರದೇಶದ ಬ್ಯಾಂಕ್ಗಳಿಗೆ ಗೌಪ್ಯವಾಗಿ ವರ್ಗಾಯಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮನಿ ಲಾಂಡರಿಂಗ್ ಎಂದು ಕರೆಯಲ್ಪಡುವ ಈ ವ್ಯವಹಾರವೂ ಭ್ರಷ್ಟಾಚಾರದ ಮತ್ತೊಂದು ಮಾದರಿ. ಅಧಿಕಾರ ಹೊಂದಿರುವ ರಾಜಕಾರಣಿ, ಮಂತ್ರಿ ಅಥವಾ ಸಾರ್ವಜನಿಕ ಅಧಿಕಾರಿ ತನ್ನ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ನ್ಯಾಯಬಾಹಿರವಾಗಿ ಸೌಲಭ್ಯ ಒದಗಿಸಿಕೊಡುವುದು ಸಹ ಭ್ರಷ್ಟಾಚಾರವಾಗುತ್ತದೆ. ಲಾಭ ಪಡೆಯುವವರಿಗೆ ಅರ್ಹತೆ ಇಲ್ಲದಿದ್ದರು ಅದನ್ನು ನೀಡಲಾಗುತ್ತದೆ. ಉದಾಹರಣೆಗೆ ಮುಖ್ಯಮಂತ್ರಿಗಳು ಹಾಗು ಮಂತ್ರಿಗಳು ತಮ್ಮ ಪುತ್ರ, ಪುತ್ರಿ, ಅಳಿಯ, ತಮ್ಮ ಮನೆಯಲ್ಲಿ ಅಡಿಗೆ ಮಾಡುವವರು ಮುಂತಾದವರಿಗೆ ನಿವೇಶನ ಹಂಚಿರುವುದನ್ನು ಮಹಾಲೇಖಪಾಲಕರು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಭ್ರಷ್ಟಾಚಾರದ ಮಾದರಿಯನ್ನು ಸ್ಪೀಡ್ ಮನಿ ಎಂದು ಕರೆಯಲಾಗಿದೆ. ಇದನ್ನು ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಕಾಣಬಹುದು. ವಿಶೇಷವಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳಲ್ಲಿ ಸ್ಪೀಡ್ ಮನಿ ಸಾಮಾನ್ಯ. ಇದನ್ನು ನೀಡದೆ ಯಾವುದೇ ಕೆಲಸ ಮಾಡಿಸಿಕೊಳ್ಳಲು ಆಗದ ಪರಿಸ್ಥಿತಿ ಉಂಟಾಗಿದೆ. ಸೌಲಭ್ಯವನ್ನು ಪಡೆಯಲು ಅನುಸರಿಸಬೇಕಾದ ಕ್ರಮ, ಅದಕ್ಕೆ ಸಂಬಂಧಪಟ್ಟ ಕಾನೂನುಗಳು, ಸಲ್ಲಿಸಬೇಕಾದ ದಾಖಲೆಗಳು ಎಲ್ಲವನ್ನೂ ಶೀಘ್ರವಾಗಿ ಪೂರೈಸಬೇಕಾದರೆ ಸ್ಪೀಡ್ ಮನಿ ಅಗತ್ಯ ನಾಗರಿಕರು ಪದೇ ಪದೇ ಈ ರೀತಿಯ ಭ್ರಷ್ಟಾಚಾರಕ್ಕೆ ಬಲಿಯಾಗುತ್ತಾರೆ. ಮೊತ್ತದ ದೃಷ್ಠಿಯಿಂದ ನೋಡಿದಾಗ ಇದನ್ನು ಸಣ್ಣ ಪ್ರಮಾಣದ ಭ್ರಷ್ಟಾಚಾರ ಎಂದು, ಮಂತ್ರಿಗಳು, ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ನಡುವೆ ನಡೆಯುವ ಬೃಹತ್ ಮೊತ್ತದ ಭ್ರಷ್ಟಾಚಾರವನ್ನು ಗ್ರಾಂಡ್ ಎಂದೂ ಕರೆಯಲಾಗಿದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾಲ ಎಂಬುದಿಲ್ಲ. ಅದು ವರ್ಷದ ಮುನ್ನೂರ ಅರವತ್ತೆöÊದು ದಿನಗಳು ಚಾಲ್ತಿಯಲ್ಲಿರುತ್ತದೆ. ಆದರೆ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮಾನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇದೆ. ಕಾರಣ ಆ ಸನ್ನಿವೇಶದಲ್ಲಿ ಅಗತ್ಯ ವಸ್ತುಗಳ ಅಭಾವವಿರುತ್ತದೆ. ಜೊತೆಗೆ ಕೃತಕ ಅಭಾವ ಸೃಷ್ಠಿಸುವ ಪ್ರಯತ್ನವು ನಡೆಯುತ್ತದೆ. ಆದ್ದರಿಂದಲೇ ಸಣ್ಣ ಪ್ರಮಾಣದ ಭ್ರಷ್ಟಾಚಾರ ಬಡವರ ಮೇಲೆ ಹೆಚ್ಚು ದುಷ್ಪರಿಣಾಮ ಉಂಟು ಮಾಡುತ್ತದೆ. ದೇಶವು ತ್ವರಿತ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಕಾಮಗಾರಿ, ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಮಂತ್ರಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗುತ್ತಾರೆ.
ವಿಲಿಯಮ್ ನಂದ ಬಿಸೆಲ್ [ಮೇಕಿಂಗ್ ಇಂಡಿಯಾ ವರ್ಕ್] ಅವರ ಪ್ರಕಾರ ಭ್ರಷ್ಟಾಚಾರವನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆ ಯದನ್ನು ಅವರು ಃoಣಣಟeಟಿeಛಿಞ ಅoಡಿಡಿuಠಿಣioಟಿ ಎಂದು ಕರೆಯುತ್ತಾರೆ. ಈಗಾಗಲೆ ಹೇಳಿರುವಂತೆ ಇದು ಕೃತಕ ಅಭಾವ ಸೃಷ್ಠಿಸಿ ಅದರ ಮೂಲಕ ಹಣ ಮಾಡುವುದು. ಕೆಲವೊಮ್ಮೆ ಸರ್ಕಾರವೇ ಇದಕ್ಕೆ ಕಾರಣವಾಗುತ್ತದೆ. ಎರಡನೆ ಯದು, ಅರ್ಥವಾಗದ ಕಾನೂನುಗಳನ್ನು ಮತ್ತು ಕ್ಲಿಷ್ಟಕರ ನಿಯಮಗಳನ್ನು ರಚಿಸುವುದರ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿ ಕೊಡುವುದು. ಬಹುತೇಕ ಅನಕ್ಷರಸ್ಥರು ಇರುವ ಈ ದೇಶದಲ್ಲಿ ಸಾಮಾನ್ಯರು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಕಾನೂನು ರಚಿಸಿದರೆ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಅಪಾರ ಪ್ರಮಾಣದ ಸಾಮಗ್ರಿ ಖರೀದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬೃಹತ್ ಮೊತ್ತದ ಭ್ರಷ್ಟಾಚಾರ ನಡೆಯುವುದನ್ನು ನೋಡಿದ್ದೇವೆ. ಲಂಚ ನೀಡುವ ಕಂಪನಿ ಅಗತ್ಯಕ್ಕೆ ತಕ್ಕಂತೆ ಗುತ್ತಿಗೆಯನ್ನು ರಚಿಸಲಾಗುತ್ತದೆ, ಇಲ್ಲವೆ ಅದರ ನಿಯಮಗಳನ್ನು ಮಾರ್ಪಾಟು ಮಾಡಲಾಗುತ್ತದೆ. ಉನ್ನತ ಮಟ್ಟದಲ್ಲಿ ನಡೆಯುವ ಈ ಟೆಂಡರ್ ಬೆಂಡಿಂಗ್ ಮೂರನೇ ಮಾದರಿ ಭ್ರಷ್ಟಾಚಾರ. ಇತ್ತೀಚೆಗೆ ೨ಜಿ ತರಂಗಾಂತರದ ಹಂಚಿಕೆಯಲ್ಲಿ ಮಂತ್ರಿ ಒಬ್ಬರು ಅನುಸರಿಸಿದ ಮಾದರಿ ಇದಕ್ಕೆ ಸೂಕ್ತ ಉದಾಹರಣೆ. ಈ ಮಾದರಿ ಭ್ರಷ್ಟಾಚಾರಕ್ಕೆ ಬಲಿಯಾಗುವವರು ದುರ್ಬಲ ವರ್ಗದವರು. ದೈಹಿಕ ಹಿಂಸೆ, ಜೀವ ಬೆದರಿಕೆ, ಸ್ಥಳ ಮುಂತಾದ ಅಸ್ತ್ರಗಳನ್ನು ಉಪಯೋಗಿಸುವ ಮೂಲಕ ಲಂಚ ಪಡೆಯಲಾಗುತ್ತದೆ.
ಲಂಚ ಪಡೆಯುವವರನ್ನು ಎರಡು ರೀತಿ ವಿಂಗಡಿಸಿ ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಸಣ್ಣ ಪುಟ್ಟ ಮೊತ್ತದ ಲಂಚ ಪಡೆಯುವವರನ್ನು ಹುಲ್ಲು ತಿನ್ನುವವ ರೆಂದು, ಬೃಹತ್ ಮೊತ್ತದ ಹಣ ಪಡೆಯುವವರನ್ನು ಮಾಂಸ ತಿನ್ನುವವ ರೆಂದು ವರ್ಗೀಕರಿಸಲಾಗಿದೆ. ಉದಾಹರಣೆಗೆ ಅಂಚೆ ಪೇದೆ, ಗ್ಯಾಸ್ ಸಿಲಿಂಡರ್ ವಿತರಕ ಅಥವಾ ಮನೆ ಮುಂದಿನ ಕಸವನ್ನು ಸ್ವಚ್ಛಗೊಳಿಸುವವರು ಹಣ ಕೇಳುವವರನ್ನು ಮೊದಲನೆ ವರ್ಗಕ್ಕೆ ಸೇರಿಸಬಹುದು. ಬೃಹತ್ ಮೊತ್ತದ ಭ್ರಷ್ಟಾಚಾರದಲ್ಲಿ ತೊಡುಗುವವರು ಎರಡನೇ ಗುಂಪಿಗೆ ಸೇರುವವರು. ಸರ್ಕಾರಿ ಅಧಿಕಾರಿಗಳು ಕಾನೂನಿನ ಪ್ರಕಾರ ಸೇವೆ ನೀಡಲು ಲಂಚ ಪಡೆಯುತ್ತಾರೆ. ಅದೇ ರೀತಿ ಕಾನೂನು ಉಲ್ಲಂಘಿಸಿಯೂ ಸೇವೆ ನೀಡಿ ಲಂಚ ಪಡೆಯುವ ಅವಕಾಶ ಹೊಂದಿರುತ್ತಾರೆ. ಒಟ್ಟಾರೆ ಅಧಿಕಾರಿಗಳು ನಿಯಮದ ಪ್ರಕಾರ ಮತ್ತು ನಿಯಮಕ್ಕೆ ವಿರುದ್ಧ ನಡೆದುಕೊಂಡರೂ ಲಂಚ ಪಡೆಯಬಹುದು.
ಭ್ರಷ್ಟಾಚಾರದ ಸ್ವರೂಪವನ್ನು ಭೌಗೋಳಿಕವಾಗಿಯೂ ವಿಶ್ಲೇಷಿಸಬಹುದು. ಇದರ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದು, ಭಾರತದಲ್ಲಿರುವ ಭ್ರಷ್ಟಾಚಾರ ಕ್ಕೂ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿರುವ ಭ್ರಷ್ಟಾಚಾರಕ್ಕೂ ಕೆಲವೊಂದು ವ್ಯತ್ಯಾಸಗಳಿವೆ. ದಿವಂಗತ ಮೆಹಬೂಬ್ ಉಲ್ ಹಕ್ ಅವರ ಪ್ರಕಾರ ದಕ್ಷಿಣ ಏಷ್ಯಾದ ದೇಶಗಳಲ್ಲಿರುವ ಭ್ರಷ್ಟಾಚಾರ ನಾಲ್ಕು ಅಪಾಯಕಾರಿ ಗುಣಗಳನ್ನು ಹೊಂದಿದೆ. ಪ್ರಥಮವಾಗಿ ದಕ್ಷಿಣ ಏಷ್ಯಾದ ಭ್ರಷ್ಟಾಚಾರ ಹೆಚ್ಚಾಗಿ ಸಂಭವಿಸು ವುದು ಮೇಲ್ಮಟ್ಟದಲ್ಲಿ. ಆದ ಕಾರಣ ಭ್ರಷ್ಟಾಚಾರ ಅಭಿವೃದ್ಧಿಗೆ ಕಂಟಕವಾಗುತ್ತದೆ. ಮೇಲ್ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರ ರಾಷ್ಟ್ರದ ನೀತಿ ನಿಯಮಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಎರಡನೆಯದಾಗಿ, ದಕ್ಷಿಣ ಏಷ್ಯಾದಲ್ಲಿನ ಭ್ರಷ್ಟಾಚಾರದ ಹಣಕ್ಕೆ ಚಕ್ರಗಳಿಲ್ಲ. ರೆಕ್ಕೆಗಳಿವೆ. ಭ್ರಷ್ಟಾಚಾರದಿಂದ ಬಂದ ಹಣವನ್ನು ಕೂಡಲೇ ವಿದೇಶಗಳಿಗೆ ರವಾನಿಸಲಾಗುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭ್ರಷ್ಟಾಚಾರದ ಹಣದ ಸ್ವಲ್ಪ ಅಂಶವಾದರೂ ಅಲ್ಲಿನ ಉದ್ಯಮಕ್ಕೆ ಮರು ವಿನಿಯೋಗವಾಗುತ್ತದೆ. ಮೂರನೆಯ ಗುಣ ಭಾರತಕ್ಕೆ ಸೂಕ್ತವಾಗಿ ಅನ್ವಯ ವಾಗುತ್ತದೆ. ಅದೇನೆಂದರೆ, ದಕ್ಷಿಣ ಏಷ್ಯಾದಲ್ಲಿ ಭ್ರಷ್ಟಾಚಾರ ಬಡ್ತಿಗೆ ಕಾರಣ ವಾಗುತ್ತದೆ, ಸೆರೆಮನೆಗಲ್ಲ. ಭ್ರಷ್ಟರೆಂದು ತಿಳಿದು ಬಂದರೂ ಅವರಿಗೆ ಉತ್ತಮ ಸ್ಥಾನಮಾನ, ಬಡ್ತಿ, ತಾವು ಕೇಳಿದ ಜಾಗಕ್ಕೆ/ಹುದ್ದೆಗೆ ವರ್ಗಾವಣೆ ಇತ್ಯಾದಿ ಸೌಲಭ್ಯ ದೊರೆಯುತ್ತದೆ. ಆದರೆ ಮುಂದುವರೆದ ಬಹುತೇಕ ದೇಶಗಳಲ್ಲಿ ತನಿಖೆ ಚುರುಕಾಗಿದ್ದು, ಭ್ರಷ್ಟರನ್ನು ಅತಿಶೀಘ್ರವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕಡೆಯದಾಗಿ ದಕ್ಷಿಣ ಏಷ್ಯಾದಲ್ಲಿ ಬಡತನದ ಮಧ್ಯೆ ಭ್ರಷ್ಟಾಚಾರ ನಡೆಯುತ್ತದೆ. ಆ ಸಂಖ್ಯೆಯ ಬಹುತೇಕ ವರ್ಗ ಬಡತನ, ಅನಾರೋಗ್ಯ, ಅನಕ್ಷರತೆ ಇತ್ಯಾದಿ ಸಮಸ್ಯೆಯಲ್ಲಿ ಮುಳುಗಿರುವಾಗ ಕೆಲವೇ ಮಂದಿ ಲಂಚದ ಲಾಭ ಪಡೆಯುತ್ತಾರೆ.
ನಿವೃತ್ತ ಸೇನಾಧಿಕಾರಿ ರಮೇಶ್ ವಾಸುಡಿಯೋ ಭ್ರಷ್ಟಾಚಾರದ ಮುಖ್ಯ ಗುಣಗಳನ್ನು ಪಟ್ಟಿ ಮಾಡಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಕಾರಣಗಳು ಆಗಬಹುದು. ಆ ಪಟ್ಟಿ ಹೀಗಿದೆ:
* ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಒಂದು ಸೌಲಭ್ಯ ಅಗತ್ಯವಿರುವ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಇರಬೇಕು.
* ಆ ವ್ಯಕ್ತಿ ಅಥವಾ ಸಂಸ್ಥೆಗೆ ಲಂಚ ನೀಡುವ ಯೋಗ್ಯತೆ ಮತ್ತು ಮನಸ್ಸು ಇರಬೇಕು.
* ಸೇವೆ ನೀಡುವ ವ್ಯಕ್ತಿಗೆ ಆ ಸೇವೆ ನೀಡುವ ಅಧಿಕಾರ ಇರಬೇಕು. ಆ ಸೇವೆಯನ್ನು ನೀಡುವ ಮನಸ್ಸು ಹೊಂದಿರ ಬೇಕು ಮತ್ತು ಲಂಚ ಪಡೆಯುವು ದರಲ್ಲಿ ಆಸಕ್ತಿ ಇರಬೇಕು.
* ವ್ಯವಹಾರವೆಲ್ಲವೂ ಗೌಪ್ಯವಾಗಿ ನಡೆಯಬೇಕು.
* ವ್ಯವಹಾರ ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು ಒಬ್ಬ ಮಧ್ಯವರ್ತಿ ಇರುತ್ತಾನೆ.
* ಈ ವ್ಯವಹಾರವು ಫಲಾನುಭವಿಗೆ ಅಥವಾ ಸಂಸ್ಥೆಗೆ ನಷ್ಟ ಆಗುತ್ತದೆ.
* ಲಂಚ ಪಡೆಯುವವರಲ್ಲಿ ಸ್ವಾಭಾವಿಕವಾದ ಅಳುಕು ಮತ್ತು ಭಯ ಇರುತ್ತದೆ.
* ಲಂಚ ಕೊಡುವವನಿಗೆ ತಾನು ಪಡೆದ ಸೇವೆಯ ಬಗ್ಗೆ ಸಮಾಧಾನ ಇರುತ್ತದೆ. ಸಾಮಾನ್ಯವಾಗಿ ಲಂಚ ನೀಡುವವರಲ್ಲಿ ಯಾವುದೇ ಅಳುಕು ಇರುವುದಿಲ್ಲ.
* ದೇಶ, ಭಾಷೆ, ಜಾತಿ, ಕುಲ, ಲಿಂಗಭೇದ ಇತ್ಯಾದಿ ಯಾವುದೂ ಲಂಚಕ್ಕೆ ಅನ್ವಯಿಸುವುದಿಲ್ಲ.
* ಭ್ರಷ್ಟಾಚಾರದ ವ್ಯವಹಾರ ಅತ್ಯಂತ ವಿಶ್ವಾಸದಿಂದ ಕೂಡಿದ್ದು.
* ಸಾಮಾನ್ಯವಾಗಿ ಲಂಚದ ವ್ಯವಹಾರದಲ್ಲಿ ಕಪ್ಪುಹಣ, ಬೇನಾಮಿ ಆಸ್ತಿ ಒಳಗೊಂಡಿರುತ್ತದೆ.
* ಭ್ರಷ್ಟರು ಸಾಮಾನ್ಯವಾಗಿ ಒಂಟಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅದನ್ನು ಒಂದು ಗುಂಪು ನಿರ್ವಹಿಸುತ್ತದೆ.
* ಭ್ರಷ್ಟಾಚಾರಕ್ಕೆ ಬಹು ದೊಡ್ಡ ಕಾರಣ ವಸ್ತು/ಸೇವೆಗಳ ಅಭಾವ.
Sri Kailasanath Temple Ellora
ಶ್ರೀ ಕೈಲಾಸನಾಥ ದೇವಸ್ಥಾನ ಎಲ್ಲೋರಾ
“ದೇವಾಲಯದ ಸುತ್ತ ಸುತ್ತೋಣ ಬನ್ನಿ”
“ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿ”ಯಲ್ಲಿ ಸ್ಥಾನ ಪಡೆದ, ಜಗದ್ವಿಖ್ಯಾತ ಎಲ್ಲೋರಾದ ಕೈಲಾಸನಾಥ ದೇವಸ್ಥಾನದ ಒಂದು ಕಿರುನೋಟ...
“ಹಿನ್ನೆಲೆ”
ವಿಶ್ವದ ಜೀವಕೋಟಿಗಳಲ್ಲಿ ಮಾನವನೇ ಅತೀ ಶ್ರೇಷ್ಠ ಎಂದು, ಆತನು ಮನಸ್ಸು ಮಾಡಿದಲ್ಲಿ ಯಾವ ಕೆಲಸವನ್ನಾದರೂ ಹಿಡಿದು ಸಾಧಿಸಬಲ್ಲ ಛಾತಿ ಆತನಿಗಿದೆ ಎಂಬುದು ಹಲವಾರು ಬಾರಿ ಸಾಬೀತುಗೊಂಡಿದೆ. ಇದು “ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರ (ಎಲ್ಲಾಪುರ)ದಲ್ಲಿರುವ ಕೈಲಾಸನಾಥ” ದೇವಾಲಯ ನೋಡಿದರೆ ತಿಳಿಯುತ್ತದೆ. ಯಾವುದೇ ಕಟ್ಟಡವನ್ನು ಕೆಳಗಿನಿಂದ ಅಂದರೆ ಅಡಿಪಾಯದಿಂದ ಪ್ರಾರಂಭ ಮಾಡಿ ತುದಿಯ ತನಕ ಕಟ್ಟಿ ಮುಗಿಸುತ್ತಾರೆ. ಆದರೆ ಈ ದೇವಾಲಯವು ಸಹ್ಯಾದ್ರಿ ಶ್ರೇಣಿಯ ಚÀರಣಾದ್ರಿ ಬೆಟ್ಟದ ಏಕಬಂಡೆಯಲ್ಲಿ ಕೊರೆದಿದ್ದಾಗಿದೆ. ಇದರ ಕೆಲಸವನ್ನು ಪರ್ವತದ ತುದಿಯಲ್ಲಿ ಪ್ರಾರಂಭ ಮಾಡಿ “ಯು” ಆಕಾರದಲ್ಲಿ ಇಡೀ ಬೆಟ್ಟವನ್ನು ಕೊರೆದು ನಿರ್ಮಿಸಲಾಗಿದೆ. ಬರೀ ಸುತ್ತಿಗೆ ಮತ್ತು ಚಾಣು ಉಪಯೋಗಿಸಿ ನಿರ್ಮಿಸಿದ ಈ ದೇವಸ್ಥಾನದ ನಿರ್ಮಾಣ ಮತ್ತು ಅದರ ಕಾಲದ ಬಗ್ಗೆ ಬಹಳಷ್ಟು ಊಹಾ ಪೋಹಗಳು ಇಂದಿಗೂ ನಡೆಯುತ್ತಲೇ ಇದೆ. ಇದನ್ನು ರಾಷ್ಟ್ರಕೂಟರ ರಾಜನಾದ “ಕೃಷ್ಣ” ಸುಮಾರು ಕ್ರಿ.ಶ. ೭೫೦ರ ಆಸುಪಾಸಿನಲ್ಲಿ ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅಲ್ಲಿ ನೆಡೆದಿರುವ ಕೆಲಸದ ಪ್ರಮಾಣವನ್ನು ನೋಡಿದರೆ ಅದು ಬಹುಶಃ ಸುಮಾರು ಶತಮಾನಗಳಿಂದಲೇ ಆಗಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಏಕೆಂದರೆ ಸುಮಾರು ನಾಲ್ಕು ಲಕ್ಷ ಟನ್ನ್ಗಳಷ್ಟು ಬಂಡೆಯ ಚೂರುಗಳನ್ನು ಅಲ್ಲಿಂದ ತೆಗದಿರಬಹುದೆಂದು ಲೆಕ್ಕಿಸಲಾಗಿದೆ. ಹೀಗೆ ಭೂಮಿಯ ಮೇಲಿನ ಅತ್ಯಂತ ಗಟ್ಟಿಯಾದ ಪದಾರ್ಥವಾದ ಗ್ರಾನೈಟ್ ಶಿಲೆಯನ್ನು ಸ್ವಲ್ಪವೂ ಆಕಾರಕ್ಕೆ ಚ್ಯುತಿಬಾರದಂತೆ ಕತ್ತರಿಸಿ ತೆಗೆಯುವುದು ಇಂದಿನ ಲೇಸರ್ ಕಟಿಂಗ್ ತಂತ್ರಜ್ಞಾನದಿಂದಲೂ ಅಷ್ಟು ಸುಲಭ ಸಾಧ್ಯವಲ್ಲ. ಅಂತಹುದರಲ್ಲಿ ಸಾವಿರಾರು ವರ್ಷಗಳ ಹಿಂದೆ ಇಡೀ ಬಂಡೆಯನ್ನು ಕಲಾತ್ಮಕವಾಗಿ ಕೆತ್ತಿದ ಅಂದಿನ ಶಿಲ್ಪಿಗಳ ನೈಪುಣ್ಯತೆ, ಅರ್ಪಣಾ ಮನೋಭಾವ, ಏಕಾಗ್ರತೆ ಇವುಗಳು ನಮ್ಮ ಊಹೆಗೂ ನಿಲುಕದ್ದು. ಅದರಲ್ಲೂ ವಿಶೇಷವಾಗಿ ಇಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಮತ್ತು ನೆಲ ಮಟ್ಟದಿಂದ ಎರಡು ಅಡಿಗೂ ಕಡಿಮೆ ಎತ್ತರದಲ್ಲಿ ಕೊರೆಯಲಾಗಿರುವ ಹಲವಾರು ರಂಧ್ರಗಳು. ಇವುಗಳ ಕೊನೆ ಕಣ್ಣಿಗೆ ಕಾಣುವುದಿಲ್ಲ. ಕೈಗೆಟುಕದ ಆಳಕ್ಕೆ ಅಂತಹಾ ಗ್ರಾನೈಟ್ ಶಿಲೆಯನ್ನು ಸಾವಿರಾರು ವರ್ಷಗಳ ಹಿಂದೆ ಯಾವ ತಾಂತ್ರಿಕತೆ ಬಳಸಿ ಕೊರೆದಿರಬಹುದೆಂಬುದು ನಿಗೂಢವಾಗಿದೆ.
ಮತ್ತೊಂದು ವಿಶೇಷವೆಂದರೆ, ಅಂದಿನ ದಿನಗಳಲ್ಲಿ ಇಲ್ಲಿ ಕೆತ್ತನೆ ಕಾರ್ಯಕ್ಕಾಗಿ ಬೆಳಕಿಗೆ ಏನು ವ್ಯವಸ್ಥೆ ಮಾಡಿಕೊಂಡಿರಬಹುದೆಂಬುದು. ಏಕೆಂದರೆ, ಈ ದಿನಗಳಲ್ಲೇ ಈ ದೇವಾಲಯದ ಒಳಗೆ ಬೆಳಕು ಕಡಿಮೆ ಎಂದೇ ಹೇಳಬಹುದು. ದೈವಕೃಪೆಯೊಂದೇ ಈ ಅಸಾಧ್ಯ ವಾದುದನ್ನು ಸಾಧ್ಯ ಮಾಡಿ ತನ್ನ ಇರುವಿಕೆಯನ್ನು ಪ್ರಕಟಿಸಿದ್ದಾನೆ. ಇದನ್ನು ಪರಶಿವನ ವಾಸಸ್ಥಾನವಾದ ಹಿಮಾಲಯದ ಕೈಲಾಸ ಪರ್ವತದ ಪ್ರತಿರೂಪವಾಗಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.
“ದೇವಾಲಯದ ಬಗ್ಗೆ ಮಾಹಿತಿ”
ಕೈಲಾಸನಾಥ ದೇವಾಲಯದ ಒಟ್ಟು ಉದ್ದ ೮೨ ಮೀಟರ್, ಅಗಲ ೪೬ ಮೀಟರ್. ಬಂಡೆಯ ಮೇಲಿಂದ ಸುಮಾರು ೧೫೦ ಅಡಿಗೂ ಹೆಚ್ಚು ಆಳ ಕೊರೆಯಲಾಗಿದೆ. ದೇವಾಲಯದ ಮುಖ್ಯ ದೇವತೆಯಾಗಿ ಲಿಂಗರೂಪಿಯಾದ ಶಿವನಿದ್ದು, ಅದರ ಎದುರಿಗೆ ನಂದಿಯಿದೆ. ದೇವಾಲಯಕ್ಕೆ ಹೋಲಿಸಿದರೆ ದೇವಾಲಯದ ಶಿಖರದ ಮೇಲಿನ ಕಳಶವು ಸ್ವಲ್ಪ ಚಿಕ್ಕದೆಂದು ಹೇಳಬಹುದು. ದೇವಾಲಯದ ಮುಂಭಾಗದಲ್ಲಿ ಆನೆಯ ಪ್ರತಿಮೆಗಳಿವೆ ಹಾಗೂ ದೇವಾಲಯದ ಸುತ್ತೆಲ್ಲಾ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಕೆತ್ತಲಾಗಿದೆ. ದೇವಾಲಯದ ತಳ ಭಾಗದಲ್ಲಿರುವ ಆನೆಗಳನ್ನು ಇಡೀ ದೇವಾಲಯದ ಭಾರವನ್ನು ಹೊತ್ತಿರುವುದೇನೋ ಎನ್ನುವಂತೆ ಕೆತ್ತಲಾಗಿದೆ. ಶಿವ ದೇವಾಲಯ ಮತ್ತು ನಂದಿ ಮಂಟಪ ಎರಡೂ ಸುಮಾರು ಏಳು ಮೀಟರ್ಗಳಷ್ಟು ಎತ್ತರವಿದೆ. ನಂದಿ ಮಂಟಪ ಮತ್ತು ಮುಖಮಂಟಪದ ಮಧ್ಯೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ದೇವಾಲಯದ ಎದುರಿಗೆ ಇರುವ ಸ್ತಂಭವು ಸುಮಾರು ನೂರು ಅಡಿಗೂ ಹೆಚ್ಚು ಎತ್ತರವಿದೆ. ಇದನ್ನು ಪಲ್ಲವ ಮತ್ತು ಚಾಲುಕ್ಯ ಶೈಲಿಯ ಶಿಲ್ಪಿಗಳು ನಿರ್ಮಿಸಿದ್ದಾರೆ. ಆ ಕಾಲದಲ್ಲಿ ಸಾವಿರಾರು ಜನ ಶಿವಭಕ್ತರು “ತಾವು ಶಿವನ ಸಾನಿಧ್ಯದಲ್ಲೇ ಇರಬೇಕೆಂದು, ತಮಗೆ ನಿತ್ಯವೂ ಆ ಪರಶಿವನ ದರ್ಶನವಾಗಿ, ಆತನ ಧ್ಯಾನದಲ್ಲಿಯೇ ಮುಳುಗಿರಬೇಕೆಂದು” ಬಯಕೆ ವ್ಯಕ್ತಪಡಿಸಿದಾಗ ಈ ದೇವಾಲಯವನ್ನು ನಿರ್ಮಿಸಿ ಆ ಶಿವನ ಕೈಲಾಸವನ್ನೇ ಇಲ್ಲಿಗೆ ತರಲಾಯಿತೆಂದು ಪ್ರತೀತಿ ಇದೆ. ಇದನ್ನು ನಿಜವಾದ ಭೂ ಕೈಲಾಸವೆಂದೇ ಕರೆಯುತ್ತಾರೆ. ಇದನ್ನು ನೋಡಿದವರು ಮಾನವ ನಿರ್ಮಿತ ಎನ್ನುವುದರ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಾರೆ. ಇದನ್ನು ದೈವನಿರ್ಮಿತವೆಂದು ಭಾವಿಸುತ್ತಾರೆ. ಇದಕ್ಕೆ ಸರಿಯಾಗಿ ದೇವಾಲಯದ ನಿರ್ಮಾಣದ ಬಗ್ಗೆ ಐತಿಹಾಸಿಕವಾದ ಯಾವುದೇ ದಾಖಲೆಗಳು ದೊರಕುವುದಿಲ್ಲ.
ಈ ದೇವಾಲಯವು ಇರುವ ಸ್ಥಳ :
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿರುವ ೩೪ ಗುಹಾಂತರ ದೇವಾಲಯಗಳಲ್ಲಿ ಈ ದೇವಾಲಯವು ೧೬ನೇ ಗುಹೆಯಲ್ಲಿದೆ. ಔರಂಗಾಬಾದ್ ನಿಂದ ಸುಮಾರು ೩೦ ಕಿಲೋಮೀಟರ್ ಅಂತರದಲ್ಲಿರುವ ಇಲ್ಲಿಗೆ ಹೋಗಿ ಬರಲು ಬಸ್ ಮತ್ತು ಇತರೆ ವ್ಯವಸ್ಥೆಗಳಿವೆ. ಔರಂಗಾಬಾದ್ ಜಿಲ್ಲಾ ಸ್ಥಳವಾದುದರಿಂದ ಅಲ್ಲಿ ಉಳಿಯುವ ವ್ಯವಸ್ಥೆಯಿದೆ.
ಈ ದೇವಾಲಯದ ಮಹಿಮೆಯನ್ನು ಸಹಿಸದ ಮೊಗಲ್ ದೊರೆ ಔರಂಗಾಜೇಬನು ಇದರ ಮೇಲೆ ಹಲವಾರು ಬಾರಿ ದಾಳಿ ನಡೆಸಿದನೆಂದೂ ಮತ್ತು ಅಷ್ಟಕ್ಕೇ ತೃಪ್ತನಾಗದ ಅವನು ಸುಮಾರು ಒಂದು ಸಾವಿರ ಸೈನಿಕರನ್ನು ಬಿಟ್ಟು ದೇವಾಲಯವನ್ನು ದ್ವಂಸಗೊಳಿಸಲು ಬಿಟ್ಟಿದ್ದನೆಂದು ಹೇಳಲಾಗಿದೆ. ಆದರ ಸ್ವತಃ ಪರಶಿವನ ನೆಲೆಯಾದ ಈ ದೇವಾಲಯವು ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಹಾನಿಯಾಗಿದ್ದು ಬಿಟ್ಟರೆ ಮತ್ತೇನು ಹೆಚ್ಚಿನ ಹಾನಿಗೊಳಗಾಗಿಲ್ಲ. ಆದರೆ ಈ ದೇವಾಲಯದ ದ್ವಂಸದ ಯೋಚನೆ ಬಂದಾಗಿನಿಂದ, ಆತನಿಗೆ ಹಿನ್ನೆಡೆ ಆರಂಭವಾಗಿ ಇಡೀ ಸಾಮ್ರಾಜ್ಯವೇ ಪತನಗೊಂಡು ನಾಶವಾಯಿತು. ಇಂತಹ ಮಹಿಮೆಯ ಕ್ಷೇತ್ರಕ್ಕೆ ಒಮ್ಮೆಯಾದರೂ ಹೋಗಬೇಕೆನಿಸುತ್ತೆ ಅಲ್ಲವೇ...?
Tuesday, September 27, 2022
Shri Vishnu Sahasranama
ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ
೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣ ಮಾಡಿದÀರೆ ಒಳ್ಳೆಯದು.೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲಾ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ.
೩. ವಿಷ್ಣು ಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವುದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.
೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗಒಳಿಸುತ್ತದೆ.
೫. ವಿಷ್ಣು ಸಹಸ್ರನಾಮ ಪಠಸುವ ಭಕ್ತರಿಗೆ ಎಂದು ಭಯವಿಲ್ಲ. ಇದರಿಂದ ವಿಶೇಷ ಶಾಂತಿ, ವಚ್ಸು÷್ಸ, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.
೬. ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.
೭. ಶುದ್ಧ ಮನಸ್ಸಿನಿಂದ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆದಿ ದೈವಿಕ ಹಾಗೂ ಆದಿ ಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ.
೮. ವಿಷ್ಣು ಸಹಸ್ರನಾಮ ಅಂದರೆ ಮಾಹಾವಿಷ್ಣುವಿನ ಸಹಸ್ರನಾಮ ಪಠಣ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣು ಸಹಸ್ರನಾಮ ಪಾರಾಯಣದಿಂದ ಕ್ಯಾನ್ಸರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.
೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತಾವರಣವೇ ಬದಲಾಗುತ್ತದೆ. ಮನೆಯಲ್ಲಿ ಮೈಯಲ್ಲಿ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ವಿಶೇಷ ಶಕ್ತಿ ಇದೆ.
೧೦. ವಿಷ್ಣು ಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೂತ್ರವನö್ನೆಲ್ಲ ವರ್ಗದವರು ಮತ್ತು ಎಲ್ಲ ವಯಸ್ಸಿನವರು ಪಠಿಸಬಹುದಾಗಿದೆ.
೧೧. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪಠಣ ಮಾಡಿ ಬರಬಹುದು. ಸಮಯವಿಲ್ಲದವರು ತಮ್ಮ ತಮ್ಮö ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.
೧೨. ಪ್ರಾಕೃತಿಕ ಸಮತೋಲನಕ್ಕಾಗಿ, ಗ್ರಾಮದ ಶಾಂತಿಗಾಗಿ, ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ ನಿತ್ಯ ಪಠಿಸೋಣ.
Sugar is a type of poison
ಸಕ್ಕರೆ ಒಂದು ಪ್ರಕಾರದ ವಿಷ
೧. ಸಕ್ಕರೆ ಒಂದು ಪ್ರಕಾರದ ವಿಷ. ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿರ್ಮಾಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ.
ಇದು ಹೇಗೆ, ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.
೨. ಸಕ್ಕರೆ ತಯಾರಿಸುವ ಪ್ರಕ್ರಿಯೆ (ಠಿಡಿoಛಿess) ಯಲ್ಲಿ ಸರ್ವಾಧಿಕ ಪ್ಪಮಾಣದಲ್ಲಿ ಗಂಧಕ (suಟಠಿhuಡಿ) ಉಪಯೋಗಿಸುತ್ತಾರೆ.
ಗಂಧಕ ಎಂದರೇನು?
೩. ಇದು ಬಾಂಬ್ ತಯಾರಿಸಲು ಅಥವಾ ಸಿಡಿಮದ್ದು, ಪಟಾಕಿ ತಯಾರಿಸಲು ಉಪಯೋಗಿಸುವ ರಾಸಾಯನಿಕ ಪದಾರ್ಥ (ಛಿhemiಛಿಚಿಟ). ಈ ಗಂಧಕ ಅತ್ಯಂತ ಜಡ ಪದಾಥ೯. ಇದು ಒಮ್ಮೆ ಶರೀರದೊಳಗೆ ಹೋದರೆ, ಶರೀರದಿಂದ ಹೊರಬೀಳುವುದಿಲ್ಲ.
೪. ಸಕ್ಕರೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಹೃದಯಾಘಾತ (sಣಡಿoಞe) ಆಗುತ್ತದೆ.
೫. ದೇಹದಲ್ಲಿ ತೂಕ ಹೆಚ್ಚಲು ಕಾರಣಕೂಡ ಸಕ್ಕರೆ.
೬. ದೇಹದಲ್ಲಿ ರಕ್ತದೊತ್ತಡಕ್ಕೆ (ಃ.P) ಕಾರಣ ಸಕ್ಕರೆ.
೭. ಸಕ್ಕರೆಯಿಂದಾಗಿ ಮೆದುಳಿಗೆ ಸ್ಟ್ರೋಕ್ ಹೊಡೆಯುತ್ತದೆ.
೮. ಸಕ್ಕರಯಿಂದಾಗಿ ಪಚನ ಶಕ್ತಿ ಕುಂದುತ್ತದೆ.
೯. ಸಕ್ಕರೆ ತಯಾರಿಸುವಾಗ ೨೩ ಹಾನಿಕಾರಕ ರಸಾಯನಗಳ ಉಪಯೋಗ ಆಗುತ್ತದೆ.
೧೦. ಸಕ್ಕರೆಯು ಛಿಚಿಟಿಛಿeಡಿ ಕಾರಕ. ಅಚಿಟಿಛಿeಡಿನ ಜೀವಾಣುಗಳು ಸಕ್ಕರೆ ಇಲ್ಲದೆ ಇರಲಾರವು ಎಂದು ಪ್ರಖ್ಯಾತ ತಜ್ಞರು ಕಂಡುಕೊಂಡಿದ್ದಾರೆ.
೧೧. ಮನುಶ್ಯನಿಗೆ ಡಯಾಬಿಟೀಸ್ ಕಾಯಿಲೆಗೆ ಕಾರಣವೇ ಸಕ್ಕರೆ.
೧೨. ಎಸಿಡಿಟಿ, ಹೈಪರ್ ಎಸಿಡಿಟಿ, ಹೊಟ್ಟೆಯಲ್ಲಿ ಉರಿ ಇತ್ಯಾದಿಗಳಿಗೆ ಒಂದು ಮುಖ್ಯ ಕಾರಣ ಸಕ್ಕರೆ.
೧೩. ರಕ್ತದಲ್ಲಿ ಟ್ರೆöÊಗ್ಲಿಸರಿನ್ ಹೆಚ್ಚಲು ಕಾರಣ ಸಕ್ಕರೆ.
೧೪. ಸಕ್ಕರೆಯ ಕೆಟ್ಟ ಪರಿಣಾಮಗಳಿಂದಾಗಿ ಪಾರ್ಶ್ವವಾಯು, ಪೆರಲಿಸಿಸ್ ಆಗಲು ಒಂದು ಮುಖ್ಯ ಕಾರಣ.
೧೫. ಒಟ್ಟಾರೆ ಹೇಳುವುದಾದರೆ, ಸಕ್ಕರೆಯು ಕಾಯಿಲೆಗಳ ಉದ್ಭವ ಮತ್ತು ಉಲ್ಭಣಕ್ಕೆ ಮೂಲ.
ಆತ್ಮೀಯರೇ, ನಿಮ್ಮಲ್ಲೊಂದು ಕಳಕಳಿಯ ವಿನಂತಿ. ಸಕ್ಕರೆ ಎಂಬ ನಿದಾನ ವಿಷ (sಟoತಿ ಠಿoisoಟಿ) ನಿಂದ ದೂರವಿದ್ದು, ನಮ್ಮ ಪೂರ್ವಜರಂತೆ ಬೆಲ್ಲದ ಉಪಯೋಗಕ್ಕೆ ಪರಿವರ್ತಿಸಿರಿ. ರೋಗ ಮುಕ್ತ ಜೀವನ ನಮ್ಮ, ನಿಮ್ಮೆಲ್ಲರದ್ದಾಗುವುದು.
ಈ ಮಾಹಿತಿಯನ್ನು ನಿಮ್ಮ ಬಂದುಗಳಿಗೆ, ಮಿತ್ರರಿಗೆ, ಪರಿಚಯಸ್ಥರಿಗೆ, ಸಾದ್ಯವಾದಷ್ಟು ತಿಳಿಸಿ. ಯಾರಿಗಾದರೂ ಸಹಾಯ ಆಗುವುದಕ್ಕೆ ಸಹಕಾರ ಮಾಡಿದಂತಾಗಲಿ.
Monday, September 26, 2022
Fear more than excitement about 'Shivalinga 143': Manvita Kamat
`ಶಿವಲಿಂಗ ೧೪೩' ಬಗ್ಗೆ ಎಕ್ಸೈಟ್ಮೆಂಟ್ಗಿಂತ ಹೆಚ್ಚು ಭಯವಿದೆ: ಮಾನ್ವಿತಾ ಕಾಮತ್
ಕೆಂಡಸಂಪಿಗೆ ಮತ್ತು ಟಗರು ಚಿತ್ರಗಳ ನಂತರ ಸ್ವಲ್ಪ ದಿನಗಳ ಕಾಲ ಸ್ಯಾಂಡಲ್ ವುಡ್ ನಿಂದ ದೂರವಿದ್ದ ನಟಿ ಮಾನ್ವಿತಾ ಕಾಮತ್ ಅವರ ಮುಂದಿನ ಚಿತ್ರ ಶಿವ ೧೪೩ ರಿಲೀಸ್ ಗೆ ರೆಡಿಯಾಗಿದೆ. ಅನಿಲ್ ಕುಮಾರ್ ನಿರ್ದೇಶನದ, ಜಯಣ್ಣ ಫಿಲಂಸ್ ನಿರ್ಮಾಣದ ಈ ಚಿತ್ರ ಈ ವಾರ ತೆರೆಗೆ ಅಪ್ಪಳಿಸಲಿದೆ.ನನ್ನ ವಿಷಯದಲ್ಲಿ ಚಿತ್ರೀಕರಣದ ಸಮಯದಲ್ಲಿ ಇದ್ದ ಆತಂಕ ಚಿತ್ರದ ಬಿಡುಗಡೆಗೂ ವಿಸ್ತರಿಸುತ್ತದೆ ಎಂದನಿಸುತ್ತಿದೆ. ಕೋವಿಡ್-೧೯ ಪ್ರಪಂಚದ ಮೇಲೆ ಪ್ರಭಾವ ಬೀರಿದ್ದರೂ, ಅದು ನನಗೆ ಬಹಳಷ್ಟು ಕಲಿಸಿದೆ. ಕಳೆದ ಎರಡು ವರ್ಷಗಳು ನನಗೆ ಕಲಿಕೆಯ ಪಾಠ. ಅದೃಷ್ಟವಶಾತ್, ಈ ಸಮಯದಲ್ಲಿ ನಾನು ನನ್ನ ಅಧ್ಯಯನವನ್ನು ಪೂರ್ಣಗೊಳಿಸಲು ತೆಗೆದುಕೊಂಡಿದ್ದೇನೆ ಮತ್ತು ಪರ್ಯಾಯವಾದದ್ದನ್ನು ಯೋಚಿಸಲು ಇದು ನನಗೆ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ.
ಅಂತಿಮವಾಗಿ ಶಿವ ೧೪೩ ಚಿತ್ರ ಬಿಡುಗಡೆಯಾಗುತ್ತದೆ. ಹೇಗನಿಸುತ್ತಿದೆ? ಶಿವ ೧೪೩ ಬಗ್ಗೆ ಎಕ್ಸೈಟ್ ಮೆಂಟ್ ಗಿಂತ ಹೆಚ್ಚಾಗಿ ಭಯವೂ ಇದೆ. ಅತ್ಯಂತ ಬೋಲ್ಡ್ ಪಾತ್ರದಲ್ಲಿ ಮಾಡಿದ್ದೇನೆ. ತೆರೆಯ ಮೇಲೆ ನನನ್ನು ನೋಡಲು ಕಾಯುತ್ತಿದ್ದೇನೆ. ನನ್ನ ಪಾತ್ರದ ಬಗ್ಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡುವ ಕುತೂಹಲವಿದೆ. ಕನ್ನಡ ಇಂಡಸ್ಟ್ರಿ ಇಂತಹ ಬೋಲ್ಡ್ ಹಿರೋಯಿನ್ ನೋಡಿಲ್ಲದ ಕಾರಣ ಭಯವೂ ಇದೆ. ಬೋಲ್ಡ್ ಅಂದರೆ ಎಕ್ಸ್ ಪೋಸ್ ಮಾತ್ರವಲ್ಲ, ವರ್ತನೆ ಕೂಡಾ ಆಗಿರುತ್ತದೆ ಎಂದರು.
ಸ್ಯಾಂಡಲ್ ವುಡ್ ನಿಂದ ಬರುವ ಅನೇಕ ಹಿರೋಯಿನ್ ಗಳು ಮುಂದೆ ಬಬ್ಲಿ ಗರ್ಲ್ ಇಮೇಜ್ ಬಯಸುತ್ತಾರೆ. ಆದರೆ, ೧೪೩ ಶಿವದಲ್ಲಿ ಎಲ್ಲರೂ ದ್ವೇಷಿಸುತ್ತಾರೆ ಎಂದು ನಿರೀಕ್ಷಿಸಿದ್ದೇನೆ. ಒಂದು ವೇಳೆ ಪ್ರೇಕ್ಷಕರು ನನನ್ನು ದ್ವೇಷಿಸುವಂತೆ ಮಾಡಿದರೆ, ನಂತರ ಪಾತ್ರಕ್ಕೆ ನ್ಯಾಯ ನೀಡಿದ ಪ್ರಯತ್ನವಾಗಲಿದೆ. ಮುಂದಿನ ದಿನಗಳಲ್ಲಿ ದ್ವೇಷವನ್ನು ಅಳಿಸುವುದು ಸವಾಲಿನ ಕೆಲಸವಾಗಿರುತ್ತದೆ. ಆದ್ದರಿಂದ ನನ್ನ ಹೆಸರಿನೊಂದಿಗೆ 'ಕೆಟ್ಟ ಟ್ಯಾಗ್ ಅಂಟಿಕೊಳ್ಳುವ ಸಾಧ್ಯತೆಯಿದೆ. ಶಿವ ೧೪೩ ತೆಲುಗಿನ ಆರ್ ಎಕ್ಸ್ ೧೦೦ ಸೂಪರ್ ಹಿಟ್ ಚಿತ್ರದ ರಿಮೇಕ್ ಆಗಿದೆ. ಆದ್ದರಿಂದ ಪಾಯಲ್ ರಜಪೂತ್ ಜೊತೆಗೆ ಹೋಲಿಕೆಯಿಂದಾಗಿ ಮಾನ್ವಿತ್ ಆತಂಕಗೊಂಡಿದ್ದಾರೆ.
ಪ್ರೇಕ್ಷಕರು ಸಿನಿಮಾ ನೋಡಿದ ನಂತರ, ನಾನು ಯಾರನ್ನೂ ಅನುಕರಿಸಿಲ್ಲ ಎಂಬುದು ಗೊತ್ತಾಗಲಿದೆ. ವಿಭಿನ್ನವಾದ ಪಾತ್ರವಾಗಿದೆ. ಶಿವ ೧೪೩ ರಾಜ್ ಕುಮಾರ್ ಮೊಮ್ಮಗ ಧೀರನ್ ರಾಮ್ ಕುಮಾರ್ ಅವರ ಚೊಚ್ಚಲ ಚಿತ್ರವಾಗಿದೆ. ಕೆಂಡಸಂಪಿಗೆ ಚಿತ್ರದ ಮುಹೂರ್ತ ಸಮಯದಲ್ಲಿ ಅವರ ಫೋಟೋ ನೋಡಿದ್ದೆ. ಹಿರೋ ಆಗುವ ಎಲ್ಲಾ ಅರ್ಹತೆಗಳು ಅವರಿಗಿವೆ ಎಂದೆನಿಸಿತು. ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದರು. ಶಿವಲಿಂಗ ೧೪೩ ಪಾತ್ರಗಳು ಭಿನ್ನ ರೀತಿಯಲ್ಲಿ ನಮಗೆ ಹೇಳುತ್ತವೆ. ಪಾತ್ರ ನಿರ್ವಹಣೆಯಲ್ಲಿ ಅರ್ಧದಷ್ಟು ಯಶಸ್ವಿಯಾದರೂ ನನಗೆ ಸಂತೋಷವಾಗುತ್ತದೆ. ನನ್ನ ಇಮೇಜ್ ಸುಧಾರಿಸಿಕೊಳ್ಳಲು ಪ್ಲಾನ್ ಮಾಡಬಹುದು ಎಂದು ಹೇಳುವ ಮಾನ್ವಿತ ಅವರ ರಾಜಸ್ಥಾನ ಡೈರಿಸ್ ಚಿತ್ರ ಕೂಡಾ ಸದ್ಯದಲ್ಲೇ ರಿಲೀಸ್ ಆಗಲಿದ್ದು, ಅದನ್ನು ಎದುರು ನೋಡುತ್ತಿದ್ದಾರೆ.
Harshika Poonacha accepted Kannada web series
ಕನ್ನಡದ ವೆಬ್ ಸಿರೀಸ್ ಒಪ್ಪಿಕೊಂಡ ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ ವೆಬ್ ಸಿರೀಸ್ ಆರಂಭಿಸೋಕು ಮುಂಚೇ, ಭೋಜಪುರಿ ಭಾಷೆಯ ಸಿನಿಮಾನೂ ಮಾಡಿದ್ದಾರೆ. ಅಲ್ಲಿಯ ಹೀರೋ ಜೊತೆಗೆ ಕಾಣಿಸಿಕೊಂಡು ಭೋಜಪುರಿ ಪ್ರೇಕ್ಷಕರ ಮನಸನ್ನೂ ಗೆದ್ದು ಬಂದಿದ್ದಾರೆ.
ಈಗ ಇದೇ ಕೊಡಗಿನ ಕುವರಿ ವೆಬ್ ಸಿರೀಸ್ ವೊಂದನ್ನ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಲೀಡ್ ರೋಲ್? ನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಈ ಒಂದು ವೆಬ್ ಸಿರೀಸ್ ನಾಲ್ಕು ಹುಡುಗಿಯರ ಕಥೆ ಹೇಳುತ್ತಿದೆ.
ಕನ್ನಡದ ವೆಬ್ ಸಿರೀಸ್? ನಲ್ಲಿ ಹಲವು ವಿಶೇಷತೆಗಳ ಕಥೆ
ಹೌದು, ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸದ್ಯ ವೆಬ್ ಸಿರೀಸ್ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಈ ವೆಬ್ ಸಿರೀಸ್ ನ ಚಿತ್ರೀಕರಣ ಕೂಡ ನಡೆಯುತ್ತಿದೆ. ವೆಬ್ ಸಿರೀಸ್ ನಲ್ಲಿ ಒಂದಷ್ಟು ವಿಶೇಷತೆಗಳಿವೆ.
ಇನ್ನೂ ಹೆಸರಿಡದ ಈ ವೆಬ್ ಸಿರೀಸ್ ನಲ್ಲಿ ಒಂದ್ ಒಳ್ಳೆ ಕಥೆ ಇದೆ. ಇದು ನಾಲ್ಕು ಹುಡುಗಿಯರ ಜರ್ನಿ ಕಥೆ ಅಂದ್ರೂ ತಪ್ಪಿಲ್ಲ. ಸ್ವತಃ ಹರ್ಷಿಕಾ ಪೂಣಚ್ಚ ಹೇಳುವಂತೆ ಈ ಸಿನಿಮಾದಲ್ಲಿ ನಾಲ್ಕು ಹುಡುಗಿಯರು ಕಥೆ ಬರುತ್ತದೆ.
ಇನ್ನೂ ಹೆಸರಿಡದ ವೆಬ್? ಸಿರೀಸ್?ನಲ್ಲಿ ಹುಡುಗಿಯರ ಕಥೆಈ ಕಥೆಯಲ್ಲಿ ಜರ್ನಿ ಕೂಡ ಇರೋದು ವಿಶೇಷ. ಇಂತಹ ಈ ಸಿನಿಮಾದ ಚಿತ್ರೀಕರಣ ಈಗ ಬಹುತೇಕ ಪೂರ್ಣಗೊಂಡಿದೆ. ಇನ್ನೂ ನಾಲ್ಕೈದು ದಿವಸದ ಚಿತ್ರೀಕರಣ ಆದ್ರೆ ಮುಗಿತು, ಇಡೀ ವೆಬ್ ಸಿರೀಸ್ ಚಿತ್ರೀಕರಣ ಕಂಪ್ಲೀಟ್ ಅಂತಲೂ ಹರ್ಷಿಕಾ ಹೇಳಿಕೊಂಡಿದ್ದಾರೆ.
ಕನ್ನಡದ ವೆಬ್ ಸಿರೀಸ್?ಗೆ ಹೊಸಬ ಸುನಿಲ್ ಕಟಬು
ಹರ್ಷಿಕಾ ಅಭಿನಯದ ಈ ಮೊದಲ ವೆಬ್ ಸಿರೀಸ್ ಅನ್ನ ಹೊಸಬ ಸುನಿಲ್ ಕಟಬು ಡೈರೆಕ್ಟ್ ಮಾಡುತ್ತಿದ್ದಾರೆ. ಕನ್ನಡದ ದೊಡ್ಡ ಸ್ಟಾರ್?ಗಳ ಸಿನಿಮಾದ ಕೆಲಸ ಮಾಡಿದ ಅನುಭವ ಕೂಡ ಇದೆ. ಆ ಅನುಭವದ ಆಧಾರದ ಮೇಲೇನೆ ಈಗ ಕನ್ನಡದ ವೆಬ್ ಸಿರೀಸ್ ಡೈರೆಕ್ಟ್ ಮಾಡಿದ್ದಾರೆ.
ಕಮರ್ ಫಿಲ್ಮ್ ಫ್ಯಾಕ್ಟರಿಯಿಂದ ವೆಬ್ ಸಿರೀಸ್ ನಿರ್ಮಾಣ
ನಾಲ್ಕು ಹುಡುಗಿಯರ ಕಥೆ ಇರೋ ಈ ಜರ್ನಿ ವೆಬ್ ಸಿರೀಸ್ ಅನ್ನ ಕಮರ್ ಫಿಲ್ಮ್ ಫ್ಯಾಕ್ಟರಿಯಿಂದಲೇ ನಿರ್ಮಿಸಲಾಗುತ್ತಿದೆ. ಈ ಎಲ್ಲ ವಿಷಯಗಳನ್ನೂ ನಟಿ ಹರ್ಷಿಕಾ ಪೂಣಚ್ಚ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ. ಇವರ ಈ ಮೊದಲ ವೆಬ್ ಸಿರೀಸ್ ಬಗ್ಗೆ ಒಂದು ಸಣ್ಣ ಕುತೂಹಲ ಈಗಲೇ ಮೂಡಿದೆ.