ಏನೇ ಹೇಳಿ, ನರೇಂದ್ರಮೋದಿ ವಾರಣಾಸಿಯ ಸಾಂಸದರಾಗಿದ್ದು ಸಾರ್ಥಕವಾಯ್ತು. ಯಾವುದನ್ನು ಅಹಲ್ಯಾಬಾಯಿ ಹೋಳ್ಕರ್ ಕೂಡ ಸಾಧಿಸುವಲ್ಲಿ ಪೂರ್ಣ ಪ್ರಮಾಣದ ಜಯ ಗಳಿಸಿರಲಿಲ್ಲವೋ ನರೇಂದ್ರಮೋದಿ ಅದನ್ನೂ ದಕ್ಕಿಸಿಕೊಳ್ಳುವಂತೆ ಕಾಣುತ್ತಿದೆ. ಇತಿಹಾಸ ಇವರನ್ನು ಈ ದೇಶದ ಹಿಂದುತ್ವದ ಸಂರಕ್ಷಕ ಎಂದು ಖಂಡಿತವಾಗಿಯೂ ಸುದೀರ್ಘಕಾಲ ಸ್ಮರಿಸಿಕೊಳ್ಳುತ್ತದೆ. ಇವಿಷ್ಟನ್ನೂ ಈಗೇಕೆ ಹೇಳಬೇಕಾಯ್ತೆಂದರೆ ಕಾಶಿಯಲ್ಲಿ ನಿಧಾನವಾಗಿ ಜ್ಞಾನವಾಪಿ ಮಸೀದಿಯನ್ನು ಮರಳಿ ಪಡೆದುಕೊಳ್ಳುವ ಪ್ರಯತ್ನ ಆರಂಭವಾಗಿಬಿಟ್ಟಿದೆ. ನಿಮಗೆ ಗೊತ್ತಿರುವಂತೆ ಕಾಶಿ ವಿಶ್ವನಾಥನ ಮೂಲ ಮಂದಿರ ಈ ಮಸೀದಿಯ ಸ್ಥಳದಲ್ಲೇ ಇದ್ದದ್ದು. ೧೬೬೯ರಲ್ಲಿ ಔರಂಗಜೇಬ ಇದನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿಸಿ ಜ್ಞಾನವಾಪಿ ಮಸೀದಿ ಎಂದೇ ಕರೆಯುವ ಧಾರ್ಷ್ಟ್ಯವನ್ನೂ ತೋರಿದ. ಅದು ಮುಸಲ್ಮಾನರ ಸಹಜ ಧಾರ್ಷ್ಟ್ಯತೆ. ಬಾಬರ್ನ ಸೇನಾಪತಿ ಮೀರ್ ಬಾಕಿ ರಾಮಮಂದಿರವನ್ನು ಕೆಡವಿದ ನಂತರ ಅಲ್ಲಿ ಕಟ್ಟಿದ ಮಸೀದಿಗೆ ಜನ್ಮಸ್ಥಾನ್ ಮಸೀದಿ ಎಂದು ಹೆಸರಿಡುತ್ತಾನೆ, ಈತ ಜ್ಞಾನವಾಪಿ ಮಸೀದಿ ಎನ್ನುತ್ತಾನೆ. ನಿಮ್ಮ ಮಂದಿರವನ್ನು ಕೆಡವಿ ನಿಮ್ಮ ದೇವರುಗಳನ್ನು ನಿಸ್ಸಹಾಯಕಗೊಳಿಸಿ ಈ ಕಟ್ಟಡಗಳನ್ನು ಕಟ್ಟಲಾಗಿದೆ ಎಂದು ಸದಾ ನೆನಪಿಸುವ ಪ್ರಯತ್ನ ಅದು!
ಕಾಶಿ ಹಿಂದೂಗಳಲ್ಲಿ ಯಾವ ಮತ-ಪಂಥದವನೇ ಇರಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಹೋಗಲು ಬಯಸುವ ತಾಣ. ಕಾಶಿಗೆ ಹೋಗಲಿಲ್ಲವೆಂದು ಬೇಸರಿಸಿಕೊಳ್ಳುವವರಿಗೆಂದೇ ದೇಶದ ಅಸಂಖ್ಯ ಸ್ಥಳಗಳಲ್ಲಿ ಕಾಶಿ ವಿಶ್ವೇಶ್ವರ ದೇವಾಲಯಗಳಿವೆ. ಊರಿನ ಯಾರೋ ಹಿರಿಯರು ಕಾಶಿಯಿಂದ ಲಿಂಗವನ್ನು ತಂದು ಪ್ರತಿಷ್ಠಾಪಿಸಿ ವಿಶ್ವನಾಥನ ದರ್ಶನ ಇಲ್ಲಿಯೇ ಮಾಡಿರೆಂದು ಹೇಳಿದ ನೆನಪಿಗಾಗಿ ಅದು. ಕಾಶಿಯ ವಿಶ್ವನಾಥನ ದರ್ಶನ ಪುಣ್ಯದ ಒಂದಂಶವಾದರೆ ಕಾಶಿಯಲ್ಲಿ ಪ್ರಾಣತ್ಯಾಗ ಮಾಡುವುದಕ್ಕೂ ಅಷ್ಟೇ ಬೆಲೆಯಿದೆ. ಇದು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಆಧ್ಯಾತ್ಮ ಸಾಧನೆಯನ್ನು ಬಯಸಿ ಬರುವ ಪ್ರತಿಯೊಬ್ಬರೂ ಒಂದಿಲ್ಲ ಒಂದು ಸಂದರ್ಭದಲ್ಲಿ ಕಾಶಿಗೆ ಭೇಟಿ ನೀಡಿಯೇ ನೀಡುತ್ತಾರೆ. ಹಿಂದೂಗಳ ಜೀವನದ ಅವಿಭಾಜ್ಯ ಅಂಗವಾಗಿರುವ ಕಾಶಿಯ ಮೇಲೆ ಸಾಮಾನ್ಯ ಶಕವರ್ಷ ೧೧೯೪ರಲ್ಲಿ ಮೊಹಮ್ಮದ್ ಘೋರಿಯ ಸೇನಾನಾಯಕ ಕುತುಬ್-ಉದ್-ದೀನ್ ಐಬಕ್ ಮೊದಲ ಬಾರಿಗೆ ಉರುಳಿಸಿದ ಎಂದು ಇತಿಹಾಸ ಹೇಳುತ್ತದೆ. ಇಸ್ಲಾಂ ಆಕ್ರಮಣಕಾರಿಗಳದ್ದು ಹೋದೆಡೆಯಲ್ಲೆಲ್ಲಾ ಇದೇ ಪದ್ಧತಿ. ಜನರನ್ನು ಬಲಾತ್ಕಾರದಿಂದ ಮತಾಂತರಿಸುವುದು, ಅವರ ಪೂಜಾಸ್ಥಾನಗಳನ್ನು ಧ್ವಂಸಗೊಳಿಸಿ ಇಸ್ಲಾಂ ಪ್ರದೇಶವನ್ನಾಗಿ ನಿರ್ಮಾಣ ಮಾಡಿರುವ ಸಂತಸದಿಂದ ಬೀಗುವುದು. ನಮ್ಮ ಇತಿಹಾಸಕಾರರಲ್ಲಿ ಕೆಲವರು ಇದಕ್ಕೂ ಇಸ್ಲಾಂಗೂ ಸಂಬಂಧವೇ ಇಲ್ಲವೆಂತಲೂ ಮಂದಿರಗಳಲ್ಲಿರುವ ಸಂಪತ್ತನ್ನು ಲೂಟಿ ಮಾಡಲು ಮಂದಿರ ಧ್ವಂಸಗೊಳಿಸಲಾಗುತ್ತಿತ್ತೆಂತಲೂ ತೇಪೆ ಹಚ್ಚಲು ಪ್ರಯತ್ನಿಸುತ್ತಾರೆ. ಹಾಗಿದ್ದಮೇಲೆ ಮಂದಿರವನ್ನು ಲೂಟಿ ಮಾಡಿ ಅದನ್ನು ಉರುಳಿಸಬೇಕಾದ ಅಗತ್ಯ ಬರುತ್ತಿರಲಿಲ್ಲ. ಅಲ್ಲಿರುವ ಮೂರ್ತಿಯನ್ನು ಧ್ವಂಸಗೊಳಿಸಿ ಅವಶೇಷಗಳನ್ನು ತುಳಿದು ಸಂಭ್ರಮಿಸುವ ವಿಕೃತ ಮನಸ್ಥಿತಿಯೂ ಬೇಕಿರಲಿಲ್ಲ. ಕೊನೆಗೆ ಇಲ್ಲಿದ್ದದ್ದು ಮೂಲತಃ ಮಂದಿರವೆಂದು ಗೊತ್ತಾದಾಗಲೂ ಅದನ್ನು ಮರಳಿ ಹಿಂದೂಗಳಿಗೆ ಕೊಡುವುದಿಲ್ಲ ಎಂದು ಇಂದಿನವರು ಹಠ ಮಾಡುವ ಅಗತ್ಯವೂ ಇರಲಿಲ್ಲ. ಎಲ್ಲವೂ ಮತದ ಅಫೀಮು ಸೇವಿಸಿದವರ ಘೋರಕೃತ್ಯಗಳು ಅಷ್ಟೇ.
ಆದರೆ ಕಾಶಿ ಅದೆಷ್ಟು ಪವಿತ್ರವಾಗಿತ್ತೆಂದರೆ ಕುತುಬ್-ಉದ್-ದೀನ್ ಐಬಕ್ ಇದನ್ನು ಉರುಳಿಸಿದ ಕೆಲವೇ ವರ್ಷಗಳಲ್ಲಿ ವ್ಯಾಪಾರಿಯೊಬ್ಬ ಇದನ್ನು ಮರು ನಿರ್ಮಿಸಿದನಂತೆ. ಅದಾದ ೨೦೦ ವರ್ಷಗಳ ಕಾಲ ಅಬಾಧಿತವಾಗಿ ಜನರಿಗೆ ಆಧ್ಯಾತ್ಮಿಕ ಅನುಭೂತಿ ನೀಡುತ್ತಿದ್ದ ವಿಶ್ವನಾಥ ಮತ್ತೆ ೧೫ನೇ ಶತಮಾನದಲ್ಲಿ ಇಬ್ರಾಹಿಂ ಲೋಧಿಯ ಆಕ್ರಮಣಕ್ಕೆ ತುತ್ತಾದ. ಮಂದಿರ ಮತ್ತೆ ಕೆಡವಲಾಯ್ತು. ಅನೇಕ ದಶಕಗಳ ನಂತರ ರಾಜಾ ಮಾನ್ಸಿಂಗರು ಇದನ್ನು ಮರುನಿರ್ಮಾಣ ಮಾಡಿದರು. ಮತ್ತೆ ಜನ ಶ್ರದ್ಧೆಯಿಂದಲೂ ಭಕ್ತಿಯಿಂದಲೂ ಮಂದಿರಕ್ಕೆ ಭೇಟಿಕೊಡುತ್ತಾ ಹಿಂದೂಧರ್ಮದ ಮೂಲಸತ್ವ್ತವನ್ನು ಭದ್ರಗೊಳಿಸುತ್ತಾ ನಡೆದರು. ಇಡಿಯ ಭಾರತವನ್ನು ತನ್ನ ಅವಧಿಯಲ್ಲಿ ಪೂರ್ಣ ಇಸ್ಲಾಮೀಕರಣಗೊಳಿಸಬೇಕೆಂಬ ತುಡಿತದಿಂದ ಕಾರ್ಯ ನಿರ್ವಹಿಸುತ್ತಿದ್ದ ಮತಾಂಧ ಔರಂಗಜೇಬ ಇದನ್ನು ಕೆಡವಿದ್ದು ಆಗಲೇ. ಅಲ್ಲಿಯೇ ಮಸೀದಿಯನ್ನು ನಿರ್ಮಿಸಿದ. ಅದೇ ವಿಶ್ವನಾಥ ಮಂದಿರದ ಅವಶೇಷಗಳನ್ನು ಬಳಸಿ ಕಟ್ಟಿದ ಈ ಮಸೀದಿ ಮುಸಲ್ಮಾನರ ಪಾಲಿಗೆ ಪವಿತ್ರ ಮಸೀದಿ ಏನೂ ಆಗಿರಲಿಲ್ಲ. ಕಾಫಿರರು ಪೂಜೆ ಸಲ್ಲಿಸುತ್ತಿದ್ದ ಕಟ್ಟಡಗಳ ಅವಶೇಷಗಳಿಂದ ಕಟ್ಟಿದ ಮಸೀದಿ ಪವಿತ್ರವಾಗುವುದು ಹೇಗೆ ಸಾಧ್ಯ ಹೇಳಿ? ಕುರಾನ್ ಕೂಡ ಅದನ್ನು ಒಪ್ಪುವುದಿಲ್ಲ. ಆದರೂ ಹಿಂದೂಗಳಿಗೆ ಅವಮಾನ ಮಾಡಲು, ವಿಶ್ವನಾಥನ ಅಸಹಾಯಕತೆಯನ್ನು ತೋರ್ಪಡಿಸಲು ಅವರಿಗೆ ಅದು ಬೇಕಾಗಿತ್ತು. ಮುಂದೆ ಅಹಲ್ಯಾಬಾಯಿ ಹೋಳ್ಕರ್ ಒಂದು ಶತಮಾನದ ನಂತರ ತಂಟೆಯೇ ಬೇಡವೆಂದು ಮಸೀದಿಯ ಪಕ್ಕದಲ್ಲಿ ಸುಂದರವಾದ ಮಂದಿರವೊಂದನ್ನು ಕಟ್ಟಿ ಅದನ್ನು ರಾಷ್ಟ್ರಕ್ಕೆ ಸಮರ್ಪಿಸಿದಳು. ಆ ತಾಯಿಯನ್ನು ಎಷ್ಟು ಸ್ಮರಿಸಿಕೊಂಡರೂ ಕಡಿಮೆಯೇ. ಮುಸಲ್ಮಾನರ ಆಕ್ರಮಣಕ್ಕೆ ತುತ್ತಾಗಿದ್ದ ಅನೇಕ ಮಂದಿರಗಳನ್ನು ಪುನರ್ ನಿರ್ಮಿಸಿ ಆಕೆ ರಾಷ್ಟ್ರಕ್ಕೆ ಸಮರ್ಪಿಸಿದಳು.
ಬಹುಶಃ ಆಧುನಿಕ ಅಹಲ್ಯಬಾಯಿ ಹೋಳ್ಕರ್ ಎಂದು ಭಾವಿಸಬಹುದಾದ ನರೇಂದ್ರಮೋದಿ ತಾವು ಸಂಸದರಾದ ಮೇಲೆ ಶತಾಯ-ಗತಾಯ ಶ್ರಮಿಸಿ ತಮ್ಮದ್ದೇ ಸರ್ಕಾರವನ್ನು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ತಂದರು. ಯೋಗಿ ಆದಿತ್ಯನಾಥರಂತಹ ಖಡಕ್ಕು ಮನುಷ್ಯನ ಕೈಯ್ಯಲ್ಲಿ ರಾಜ್ಯವನ್ನು ಸಂಭಾಳಿಸಲು ಕೊಟ್ಟರು. ಕಾಶಿಯ ಸ್ವರೂಪ ಬದಲಾಯಿಸುವುದು ಅವರ ಮುಂದಿರುವ ಸವಾಲಾಗಿತ್ತು. ಯೋಗಿ ಆದಿತ್ಯನಾಥರು ೨೦೧೭ರಲ್ಲಿಯೇ ಇದಕ್ಕೆ ಬೇಕಾದ ಚಟುವಟಿಕೆ ಆರಂಭಿಸಿಬಿಟ್ಟರು. ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ ಮಂದಿರ ಮಸೀದಿಯ ಎದುರಿಗೆ ಕುಬ್ಜವಾಗಿ ಕಾಣುತ್ತಿತ್ತಲ್ಲದೇ ಸುತ್ತಲೂ ಮನೆಗಳ ರಾಶಿಯಿಂದಾಗಿ ಮಂದಿರವನ್ನು ಹುಡುಕಬೇಕಾದ ಸ್ಥಿತಿಯಿತ್ತು. ಯೋಗಿ ಈ ಮನೆಗಳನ್ನು ಊಹಿಸಲಾಗದ ಬೆಲೆಕೊಟ್ಟು ಸರ್ಕಾರದ ಮೂಲಕ ಕೊಂಡುಕೊಂಡರು. ಮೂಲ ಮಂದಿರದ ಸುತ್ತಮುತ್ತಲೂ ಇದ್ದ ಕೆಲವು ಮಂದಿರಗಳನ್ನು ತೆಗೆದು ವಿಶ್ವನಾಥ ಮಂದಿರಕ್ಕೆ ಉಸಿರಾಡಲು ಬೇಕಾದಷ್ಟು ಜಾಗವನ್ನು ಕೊಡಿಸಿದರು. ೨೦೧೯ರಲ್ಲಿ ಈ ವಿಶ್ವಾಸದ ಆಧಾರದ ಮೇಲೆಯೇ ಮೋದಿ ಕಾಶಿ ಕಾರಿಡಾರ್ನ ಘೋಷಣೆ ಮಾಡಿದ್ದು. ಮೊನ್ನೆ ಇತ್ತೀಚೆಗೆ ಈ ಕಾರಿಡಾರ್ ನಿರ್ಮಾಣವಾಗಿ ಸಮಾಜಕ್ಕೆ ಸಮರ್ಪಣೆಯಾದಾಗ ದೇಶದ ಮತ್ತು ಜಗತ್ತಿನ ಮೂಲೆ-ಮೂಲೆಯಲ್ಲಿರುವ ಹಿಂದೂಗಳ ಆನಂದಕ್ಕೆ ಮಿತಿಯೇ ಇರಲಿಲ್ಲ. ಈಗ ಮಸೀದಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಕಾಣುತ್ತಿತ್ತು. ಜೊತೆಗೆ ಮೂಲ ಮಂದಿರದ ಭಾಗವಾಗಿದ್ದ ನಂದಿ ಇಷ್ಟು ದಿನ ಮಸೀದಿಯ ಭಾಗವಾಗಿದ್ದು ಕಾರಿಡಾರ್ನ ಕಾರಣದಿಂದಾಗಿ ಮಂದಿರದ ಭಾಗವಾಯ್ತು. ಪ್ರತಿ ಯಾತ್ರಿಕನೂ ವಿಶ್ವನಾಥನ ದರ್ಶನದ ನಂತರ ಈಗ ನಂದಿಯ ದರ್ಶನ ಪಡೆದೇ ಬರುತ್ತಾನೆ. ಆ ನಂದಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ ಮಂದಿರದೆಡೆಗೆ ತಿರುಗಿರದೇ ಜ್ಞಾನವಾಪಿ ಮಸೀದಿಯೆಡೆಗೆ ಮುಖಮಾಡಿ ನಿಂತಿರುವುದು ಆಕ್ರಮಣದ ಅಷ್ಟೂ ಕಥೆಯನ್ನು ವಿವರಿಸುತ್ತದೆ. ಶತಾಯ-ಗತಾಯ ವಿಶ್ವನಾಥ ಮಂದಿರವನ್ನು ಮರಳಿ ಪಡೆಯಬೇಕೆನ್ನುವ ಇಚ್ಛೆಯನ್ನು ಪ್ರತಿಯೊಬ್ಬ ಭಕ್ತನಲ್ಲಿಯೂ ಜಾಗೃತಗೊಳಿಸುತ್ತದೆ.
ರಾಮಮಂದಿರವನ್ನು ಮರಳಿ ಪಡೆದಮೇಲೆ ಹಿಂದೂಗಳಲ್ಲಿ ಈ ಮಂದಿರವನ್ನೂ ಮರಳಿ ಪಡೆಯುವ ಆಸಕ್ತಿ ತೀವ್ರವಾಯ್ತು. ೧೯೯೧ರಲ್ಲಿ ಪಂಡಿತ್ ಸೋಮನಾಥ್ ವ್ಯಾಸ್ ಈ ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ೧೯೯೧ರಲ್ಲಿ ಕಾಂಗ್ರೆಸ್ಸು ಈ ಎಲ್ಲ ಗಲಾಟೆಗಳನ್ನು ನಿಯಂತ್ರಿಸಲೆಂದೇ ಪ್ಲೇಸಸ್ ಆಫ್ ವರ್ಶಿಪ್ ???ಕ್ಟ್ ಜಾರಿಗೆ ತಂದು ಎಲ್ಲ ಪೂಜಾಸ್ಥಳಗಳೂ ೧೯೪೭, ಆಗಸ್ಟ್ ೧೫ಕ್ಕೆ ಹೇಗಿದ್ದವೋ ಹಾಗೆಯೇ ಇರಬೇಕು. ಅದನ್ನು ಬದಲಾಯಿಸುವಂತಿಲ್ಲ ಎಂದುಬಿಟ್ಟಿತು. ಇದು ಕಾಶಿ ಮತ್ತು ಮಥುರಾವನ್ನು ಮುಸಲ್ಮಾನರಿಗೇ ಉಳಿಸಿಕೊಡುವ ಸ್ಪಷ್ಟ ಪಿತೂರಿಯಾಗಿತ್ತು. ಇದರ ಆಧಾರದ ಮೇಲೆಯೇ ಅಲಹಾಬಾದ್ ಉಚ್ಚ ನ್ಯಾಯಾಲಯ ಈ ಬಗೆಯ ಎಲ್ಲ ಪಿಟೀಶನ್ನುಗಳನ್ನು ಮೂಲೆಗುಂಪು ಮಾಡಿತು. ರಾಮಮಂದಿರ ನಿರ್ಣಯದ ನಂತರ ವಕೀಲ ರಸ್ತೋಗಿ ಮತ್ತೆ ವಿಚಾರಣೆಗೆ ಎತ್ತಿಕೊಳ್ಳುವಂತೆ ಮನವಿ ಮಾಡಿದರು. ಜ್ಞಾನವಾಪಿ ಮಸೀದಿ ಕಾನೂನು ಬಾಹಿರವಾಗಿರುವುದರಿಂದ ಅದನ್ನು ಮರಳಿ ಹಿಂದೂಗಳಿಗೆ ಬಿಟ್ಟುಕೊಡಬೇಕೆಂಬುದು ಅವರ ವಾದ. ಸ್ವತಃ ಕಾಶಿಯ ನ್ಯಾಯಾಲಯ ಈ ವಾದವನ್ನು ಪುರಸ್ಕರಿಸಿ ಪುರಾತತ್ವ ಇಲಾಖೆಗೆ ಉತ್ಖನನ ನಡೆಸಿ ವರದಿ ಕೊಡುವಂತೆ ಕೇಳಿಕೊಂಡಿತು. ಮಸೀದಿ ಕಮಿಟಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಇದರ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಹೋಗಿ ಕಾಂಗ್ರೆಸ್ಸು ತಂದ ೧೯೯೧ರ ಕಾನೂನನ್ನೇ ಮುಂದಿಟ್ಟುಕೊಂಡು ತಡೆಯಾಜ್ಞೆ ಪಡೆದವು. ಆದರೆ ರಾಮಮಂದಿರದ ವಿಚಾರ ಚರ್ಚೆಯಾಗುವ ವೇಳೆಯಲ್ಲಿ ಕಾಂಗ್ರೆಸ್ ತಂದ ಈ ಕಾನೂನಿನ ಕುರಿತಂತೆಯೇ ಸಾಕಷ್ಟು ಚಚರ್uಟಿಜeಜಿiಟಿeಜಯಾಗಿದ್ದು ಒಂದು ಹಂತದಲ್ಲಿ ಮುಖ್ಯ ನಾಯಾಧೀಶರಾದ ಎಸ್.ಎ. ಬೋಗ್ಡೆ ಈ ಕಾನೂನಿನ ವ್ಯಾಪ್ತಿ, ವಿಸ್ತಾರವನ್ನೇ ಪ್ರಶ್ನಿಸಿಬಿಟ್ಟಿದ್ದರು. ಸರಿಸುಮಾರು ಇದೇ ಹೊತ್ತಿನಲ್ಲಿ ದೆಹಲಿ ಮೂಲದ ರಾಖಿ ಸಿಂಗ್ ನೇತೃತ್ವದಲ್ಲಿ ಐದು ಮಂದಿ ವಾರಣಾಸಿ ನ್ಯಾಯಾಲಯಕ್ಕೆ ಮನವಿ ಕೊಟ್ಟಿದ್ದರು. ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿರುವ ಶೃಂಗಾರ ಗೌರಿ, ಗಣೇಶ, ಹನುಮಂತ ಮತ್ತು ನಂದಿಯ ಪೂಜೆಗೆ ಅವಕಾಶ ಕೊಡಬೇಕೆಂದು ಮತ್ತು ವಿರೋಧಿ ಗುಂಪು ಈ ವಿಚಾರಣೆಯ ಅವಧಿಯಲ್ಲಿ ಈ ಮೂರ್ತಿಗಳನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕೆಂದೂ ಕೇಳಿಕೊಂಡಿದ್ದರು. ಈ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದವು. ಮೊನ್ನೆ ಏಪ್ರಿಲ್ ೨೬ಕ್ಕೆ ಅಲ್ಲಿನ ನ್ಯಾಯಾಧೀಶರಾದ ರವಿಕುಮಾರ್ ದಿವಾಕರ್ ಈ ಮಸೀದಿಯ ಆವರಣದಲ್ಲಿರುವ ಶೃಂಗಾರ ಗೌರಿಯೇ ಮೊದಲಾದ ಮಂದಿರಗಳ ವಿಡಿಯೊ ಚಿತ್ರೀಕರಣ ಮಾಡಬೇಕೆಂದು ಆದೇಶ ನೀಡಿದರು. ಆದೇಶ ನೀಡುವಾಗ ಮುಸಲ್ಮಾನರ ಈದ್ ಅನ್ನು ತೊಂದರೆಗೊಳಪಡಿಸದಂತೆ, ಅದು ಮುಗಿದ ನಂತರ ಮೇ ೧೦ರೊಳಗೆ ವಿಚಾರಣೆಗೆ ವಿಡಿಯೊದೊಂದಿಗೆ ಹಾಜರಾಗಬೇಕೆಂದು ಹೇಳಿದರು. ಈ ಹಿನ್ನೆಲೆಯಲ್ಲಿಯೇ ಮಸೀದಿಯ ನಿರ್ವಹಣಾ ಸಮಿತಿ ರಂಪಾಟ ಆರಂಭಿಸಿಬಿಟ್ಟಿತು. ಎಸ್.ಎಮ್ ಯಾಸಿನ್ 'ನಾವು ಮಸೀದಿಯೊಳಗೆ ಯಾರನ್ನೂ ಬಿಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಉಂಟಾಗಬಹುದಾದ ಪರಿಣಾಮವನ್ನೆದುರಿಸಲು ಸಜ್ಜಾಗಿರುತ್ತೇವೆ' ಎಂದುಬಿಟ್ಟ. ಇದು ಸ್ಥಳೀಯ ಮುಸಲ್ಮಾನರನ್ನು ಭಡಕಾಯಿಸುವ ಯತ್ನ. ಆಗ ಇತರೆ ಮುಸಲ್ಮಾನರ ಕೂಗು ಆರಂಭವಾಯ್ತು. ಮುಸಲ್ಮಾನರಲ್ಲದವರನ್ನು ಮಂದಿರ ಪ್ರವೇಶಿಸಲು ಬಿಡಲಾರೆವು ಎನ್ನಲಾರಂಭಿಸಿದರು. ವಾಸ್ತವವಾಗಿ ಈ ಜಾಗವೂ ಮುಸಲ್ಮಾನರದ್ದಲ್ಲ, ಕಟ್ಟಡವೂ ಅವರದ್ದಲ್ಲ. ಬೇರೆಯವರ ಕಟ್ಟಡವನ್ನು ಬಲವಂತದಿಂದ ಕಸಿದು, ನುಗ್ಗಿ ನಿಜವಾದ ಮಾಲಿಕನಿಗೆ ಒಳ ಬಿಡಲಾರೆವು ಎಂಬ ಧಾರ್ಷ್ಟ್ಯವಿದೆಯಲ್ಲ ಇದು ಅವರಿಗೆ ಸಹಜ ಸಿದ್ಧವಾದ್ದು. ಆದರೆ ಅಲ್ಲಿರುವುದು ಬೊಮ್ಮಾಯಿಯ ಸರ್ಕಾರವಲ್ಲ, ಯೋಗಿಯ ಸರ್ಕಾರ ಎಂಬುದನ್ನು ಮುಸಲ್ಮಾನರು ಒಂದು ಕ್ಷಣ ಮರೆತಿದ್ದರು ಅಷ್ಟೇ! ಮೊದಲಿಗೆ ಮುಸಲ್ಮಾನರನ್ನು ನ್ಯಾಯಾಲಯದ ಆದೇಶ ಪಾಲಿಸಲು ಓಲೈಸುವ ಯತ್ನ ಮಾಡಿದ ಸರ್ಕಾರ ಕೇಳವುದಿಲ್ಲವೆಂದು ಗೊತ್ತಾದಾಗ ಭರ್ಜರಿ ಪೊಲೀಸರನ್ನು ಕಾವಲಿಗೆ ಹಾಕಿತು. ಮುಸಲ್ಮಾನರು ತೆಪ್ಪಗಾದರು.
ಶುಕ್ರವಾರವೇ ವಿಡಿಯೊ ಚಿತ್ರೀಕರಣ ಮಾಡುವ ಆದೇಶ ದಕ್ಕಿದ್ದರಿಂದ ಅಂದು ನಮಾಜಿಗೆ ಬರುವ ದೊಡ್ಡ ಸಂಖ್ಯೆಯ ಮುಸಲ್ಮಾನರನ್ನು ಎದುರಿಸಬೇಕೆಂದೂ ಅವರಿಗೆ ಗೊತ್ತಿತ್ತು. ಆರಂಭದಲ್ಲಿ ಸ್ವಲ್ಪ ಅರಚಾಟ ನಡೆಸಿದ ಮಂದಿ ಪೊಲೀಸರ ಕೈಲಿದ್ದ ವಿಡಿಯೊ ಕ್ಯಾಮೆರಾಗಳನ್ನು ನೋಡಿ ತೆಪ್ಪಗಾದರು. ಮುಖ್ಯಮಂತ್ರಿಗಳು ಹುಡು-ಹುಡುಕಿ ಮನೆಗಳನ್ನು ಬುಲ್ಡೋಜ್ ಮಾಡಿಬಿಟ್ಟಾರು ಎಂಬ ಭಯ ಅವರಿಗೆ. ಕಾಶಿಯಲ್ಲಿರುವ ಬಹುತೇಕ ಮನೆಗಳು ಕಾನೂನು ಬಾಹಿರ ನಿರ್ಮಿತಿಗಳೇ. ಒಡೆದರೆ ಯಾರೂ ಕೇಳುವವರೂ ಇಲ್ಲ. ಸಹಜವಾಗಿಯೇ ಇವರ ನಡುವೆಯೇ ನ್ಯಾಯಾಲಯ ನೇಮಿಸಿದ್ದ ವಕೀಲರು ಜ್ಞಾನವಾಪಿ ಮಸೀದಿಯ ವಿಡಿಯೊ ಚಿತ್ರೀಕರಣ ಆರಂಭಿಸಿದರು. ಮರುದಿನವೂ ಇದು ಮುಂದುವರೆದಿದೆ. ೧೦ನೇ ತಾರೀಖಿನಿಂದ ವಿಚಾರಣೆ ಆರಂಭವಾಗಬೇಕಿದೆ ಅಷ್ಟೇ.
ವಿಚಾರಣೆಯ ಫಲಿತಾಂಶ ಹೇಗೇ ಇರಲಿ. ಆದರೆ ಸತ್ಯವನ್ನು ಮುಲಾಜಿಲ್ಲದೇ ಹೇಳುವ, ಆಚರಣೆಗೆ ತರುವ ಧೈರ್ಯವಂತೂ ಈಗ ಭಾರತೀಯ ಸಮಾಜಕ್ಕೆ ಬಂದಿದೆ. ಆದರೆ ನನಗಿರುವ ಪ್ರಶ್ನೆ ಸಂವಿಧಾನಕ್ಕೆ ಬದ್ಧರೆಂದು ಪದೇ ಪದೇ ಹೇಳಿಕೊಳ್ಳುವ ಮುಸಲ್ಮಾನರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿರುವುದಾದರೂ ಏಕೆ? ಮಸೀದಿ ಮಂದಿರ ಒಡೆದು ನಿರ್ಮಿಸಿದ್ದಲ್ಲವೆನ್ನುವುದಾದರೆ ವಿಡಿಯೊ ಚಿತ್ರೀಕರಣ ನಡೆಯಲಿ ಬಿಡಿ, ಹೆದರಿಕೆ ಏಕೆ? ಒಡೆದು ನಿರ್ಮಿಸಿದ್ದೇ ನಿಜ ಎನ್ನುವುದಾದರೆ ಸೌಹಾರ್ದತೆಯ ಕಾರಣಕ್ಕೆ ಅದನ್ನು ಬಿಟ್ಟುಕೊಡುವ ಜವಾಬ್ದಾರಿ ಮುಸಲ್ಮಾನರದ್ದಲ್ಲವೇನು? ಮತ್ತು ಈ ರೀತಿ ಮಂದಿರದ ಅವಶೇಷಗಳೊಂದಿಗೆ ಕಟ್ಟಿದ ಮಸೀದಿ ಪ್ರಾರ್ಥನೆಗೆ ಯೋಗ್ಯವಲ್ಲವೆಂದು ಅವರ ಮತಗ್ರಂಥವೇ ಹೇಳುತ್ತದಲ್ಲ, ಮತ್ತೇಕೆ ಅದನ್ನು ಉಳಿಸಿಕೊಂಡಿದ್ದಾರೆ? ೩೬ ಸಾವಿರ ದೇವಾಲಯಗಳನ್ನು ಮುಸಲ್ಮಾನರು ಕೆಡವಿದ್ದಾರೆ ಅಥವಾ ಮಸೀದಿಯಾಗಿ ಪರಿವರ್ತಿಸಿದ್ದಾರೆ. ಹಿಂದೂಗಳು ಪ್ರೀತಿಯಿಂದ ಕೇಳಿರುವುದು ಅಯೋಧ್ಯೆ, ಕಾಶಿ ಮತ್ತು ಮಥುರಾ ಮಾತ್ರ. ಅದನ್ನೂ ನ್ಯಾಯಾಲಯದಲ್ಲಿ ಬಡಿದಾಡಿಯೇ ಪಡೆದುಕೊಳ್ಳಬೇಕೆನ್ನುವುದಾದರೆ ೩೬ ಸಾವಿರ ಮಂದಿರಕ್ಕೂ ಕೈ ಹಾಕೋಣ. ಏನಂತೀರಿ?
ಅಂದಹಾಗೆ, ನೂರು ವರ್ಷಗಳ ಹಿಂದೆ ಕೆನಡಾಕ್ಕೆ ಕದ್ದೊಯ್ಯಲ್ಪಟ್ಟಿದ್ದ ಅನ್ನಪೂರ್ಣೆಯೂ ಕಾಶಿಗೆ ಮರಳಿ ಬಂದಿದ್ದಾಳೆ. ಅನ್ನಪೂರ್ಣೆ ಕಾಶಿಯ ಸಮೃದ್ಧಿಯ ಸಂಕೇತ. ಅಂದರೆ, ಕಾಶಿಗೆ ಆ ಸಮೃದ್ಧಿ ಮರುಕಳಿಸಿದೆ ಅಂತ ಅರ್ಥ. ಹೀಗಾಗಿಯೇ ಕನಸುಗಳ ಭೂಮಿಕೆ ವಿಸ್ತಾರವಾಗಿದೆ. ಭವ್ಯವಾಗಿರುವ ಮೂಲ ಕಾಶಿ ದೇವಾಲಯ ಬಲುಬೇಗ ನಿರ್ಮಾಣಗೊಂಡರೆ ಅಚ್ಚರಿ ಪಡಬೇಡಿ!
No comments:
Post a Comment