Sunday, February 18, 2024

Dwajasthamba in temples

ಗುಡಿಯಲ್ಲಿ ಧ್ವಜಸ್ತಂಭ ಯಾಕೆ ಇರುತ್ತದೆ? 
ಧ್ವಜಸ್ತಂಭದ ಹಿಂದೆ ಒಂದು ಕಥೆ ಇದೆ....


 ನಮ್ಮಲ್ಲಿ ಬಹಳಷ್ಟು ಮಂದಿ ದೇವಸ್ಥಾನಕ್ಕೆ ಹೋಗಿ ಬರುತ್ತಿರುತ್ತೇವೆ.. ನಮ್ಮ ಕೋರಿಕೆಗಳನ್ನು ನೆರವೇರಿಸು ಎಂದು ದೇವರನ್ನು ಬೇಡಿಕೊಳ್ಳುತ್ತಿರುತ್ತೇವೆ... ಗುಡಿಗೆ ಹೋಗುವ ಮೊದಲು ನಮಗೆ ಧ್ವಜಸ್ತಂಭ ದರ್ಶನ ನೀಡುತ್ತದೆ. ನಾವು ಧ್ವಜಸ್ತಂಭಕ್ಕೆ ಕೈಮುಗಿದ ಬಳಿಕ ದೇವರ ಬಳಿಗೆ ಹೋಗುತ್ತೇವೆ. ಆದರೆ ಗುಡಿಯಲ್ಲಿ ಧ್ವಜಸ್ತಂಭ ಯಾಕೆ ಇರುತ್ತದೆ ಎಂಬುದನ್ನು ಎಂದಾದರೂ ಅಲೋಚಿಸಿದ್ದೀರಾ...? ಗುಡಿಯಲ್ಲಿರುವ ಧ್ವಜಸ್ತಂಭದ ಹಿಂದೆ ಒಂದು ಕಥೆ ಇದೆ.

ಕುರುಕ್ಷೇತ್ರದ ಬಳಿಕ ಧರ್ಮರಾಜ ಸಿಂಹಾಸನವನ್ನು ಏರಿ ರಾಜ್ಯವನ್ನು ಪರಿಪಾಲಿಸುತ್ತಿರುತ್ತಾನೆ. ಪ್ರಜೆಗಳ ಬಳಿ ಒಳ್ಳೆಯವನೆನಿಸಿಕೊಳ್ಳಲು ಧರ್ಮಮೂರ್ತಿಯಾಗಿ ಹೆಸರು ಮಾಡಲು ಅನೇಕ ದಾನ ಧರ್ಮಗಳನ್ನು ಮಾಡುತ್ತಿರುತ್ತಾನೆ. ಇದು ಸರಿಯಲ್ಲ ಎಂದು ಶ್ರೀಕೃಷ್ಣನು ಧರ್ಮರಾಜನಿಗೆ ಗುಣಪಾಠ ಕಲಿಸಬೇಕು ಎಂದುಕೊಳ್ಳುತ್ತಾನೆ. ಅದಕ್ಕಾಗಿ ಅಶ್ವಮೇಧ ಯಾಗ ಮಾಡಿ, ಶತ್ರು ರಾಜರನ್ನು ಗೆದ್ದು ದೇವತೆಗಳನ್ನು, ಬ್ರಾಹ್ಮಣರನ್ನು ಗೆದ್ದು ರಾಜ್ಯವನ್ನು ಸುಭಿಕ್ಷವಾಗಿ ಮಾಡಬೇಕೆಂದು ಕೋರುತ್ತಾನೆ. 

ಧರ್ಮರಾಜನು ಶ್ರೀಕೃಷ್ಣನ ಮಾತನ್ನು ಶಿರಸಾ ಪಾಲಿಸಿ ಅಶ್ವಮೇಧಕ್ಕೆ ತಯಾರು ಮಾಡಿ, ಯಾಗಾಶ್ವಕ್ಕೆ ರಕ್ಷಕರನ್ನಾಗಿ ನಕುಲ ಸಹದೇವರನ್ನು ಸೈನ್ಯದೊಂದಿಗೆ ಕಳುಹಿಸುತ್ತಾನೆ. ಆ ಯಾಗಾಶ್ವ ಎಲ್ಲಾ ರಾಜ್ಯಗಳನ್ನೂ ಸುತ್ತಿ ಕೊನೆಗೆ ಮಣಿಪುರ ರಾಜ್ಯ ಸೇರುತ್ತದೆ. ಆ ರಾಜ್ಯಕ್ಕೆ ರಾಜ ಮಯೂರ ಧ್ವಜ. ಅವನು ಮಹಾ ಪರಾಕ್ರಮಶಾಲಿ. ಭಾರಿ ಹೆಸರು ಮಾಡಿರುವಂತಹವನು. ಮಯೂರಧ್ವಜನ ಪುತ್ರ ತಾಮ್ರ ಧ್ವಜ ಪಾಂಡವರ ಯಾಗದ ಅಶ್ವವನ್ನು ಬಂಧಿಸುತ್ತಾರೆ.

ತಾಮ್ರ ಧ್ವಜನ ಜತೆಗೆ ಯುದ್ಧ ಮಾಡಿದ ನಕುಲ ಸಹದೇವರು, ಭೀಮಾರ್ಜುನರು ಸೋತುಹೋಗುತ್ತಾರೆ. ತಮ್ಮಂದಿರೆಲ್ಲಾ ಸೋತ ಸುದ್ದಿಯನ್ನು ತಿಳಿದುಕೊಂಡ ಧರ್ಮರಾಜ ಯುದ್ಧಕ್ಕಾಗಿ ಹೊರಡುತ್ತಾನೆ. ಆಗ ಶ್ರೀಕೃಷ್ಣನು ಆತನನ್ನು ತಡೆದು ಮಯೂರಧ್ವಜನನ್ನು ಯುದ್ಧದಲ್ಲಿ ಜಯಿಸುವುದು ಸಾಧ್ಯವಿಲ್ಲ, ಕುಟಿಲೋಪಾಯದಿಂದ ಮಾತ್ರ ಗೆಲ್ಲಬಹುದು ಎನ್ನುತ್ತಾನೆ.

ಶ್ರೀಕೃಷ್ಣನು, ಧರ್ಮರಾಜ ಜತೆಯಾಗಿ ವಯಸ್ಸಾದ ಬ್ರಾಹ್ಮಣರ ರೂಪದಲ್ಲಿ ಮಣಿಪುರಕ್ಕೆ ಹೋಗುತ್ತಾರೆ. ಅವರನ್ನು ನೋಡಿದ ಮಯೂರ ಧ್ವಜ ಅವರಿಗೆ ದಾನ ನೀಡಬೇಕೆಂದು ಏನು ಬೇಕು ಕೇಳಿಕೊಳ್ಳಿ ಎಂದು ಕೇಳುತ್ತಾನೆ. ಅದಕ್ಕೆ ಶ್ರೀಕೃಷ್ಣನು, "ರಾಜಾ! ನಿಮ್ಮ ದರ್ಶನಕ್ಕಾಗಿ ನಾವು ಬರುತ್ತಿದ್ದ ದಾರಿಯಲ್ಲಿ ಒಂದು ಸಿಂಹ ಅಡ್ಡ ಬಂದು ಈತನ ಪುತ್ರನನ್ನು ಹಿಡಿದುಕೊಂಡಿದೆ. ಮಗುವನ್ನು ಬಿಟ್ಟುಬಿಡುವಂತೆ ನಾವು ಪ್ರಾರ್ಥಿಸಿದೆವು. ಸಿಂಹ ಮಾನವ ಭಾಷೆಯಲ್ಲಿ, "ನಿಮ್ಮ ಪುತ್ರ ನಿಮಗೆ ಬೇಕಾದರೆ ಮಣಿಪುರ ರಾಜನಾದ ಮಯೂರಧ್ವಜನ ದೇಹದ ಅರ್ಧದಷ್ಟು ಭಾಗವನ್ನು ನನಗೆ ಆಹಾರವಾಗಿ ಆತನ ಪತ್ನಿ ಪುತ್ರರು ಸ್ವತಃ ಕೊಯ್ದು ಕೊಟ್ಟಿದ್ದನ್ನು ತಂದುಕೊಟ್ಟರೆ, ಈತನನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದಾಗಿ, ಆದಕಾರಣ ಪ್ರಭುಗಳು ನಮ್ಮ ಬಗ್ಗೆ ದಯ ತೋರಿ ತಮ್ಮ ದೇಹದ ಅರ್ಧ ಭಾಗವನ್ನು ದಾನ ನೀಡಿ ಇವರ ಕುಮಾರನನ್ನು ಕಾಪಾಡಬೇಕೆಂದು ಕೋರುತ್ತಾರೆ.

ಅವರ ಕೋರಿಕೆ ಕೇಳಿದ ಮಯೂರಧ್ವಜ ಅಂಗೀಕರಿಸಿ ಅದಕ್ಕೆ ಸೂಕ್ತ ಏರ್ಪಾಡುಗಳನ್ನು ಮಾಡಿಸಿ ಪತ್ನಿ ಪುತ್ರರಿಗೆ ಆತನ ದೇಹವನ್ನು ಮಧ್ಯಕ್ಕೆ ಕತ್ತರಿ ಕೊಡಬೇಕೆಂದು ಹೇಳುತ್ತಾನೆ. ಅವರು ಅವನ ದೇಹವನ್ನು ಅರ್ಧದಷ್ಟು ಕತ್ತರಿಸುವುದನ್ನು ನೋಡಿದ ಧರ್ಮರಾಜ ಆತನ ದಾನ ಗುಣಕ್ಕೆ ಬೆರಗಾಗುತ್ತಾನೆ. ಅಷ್ಟರಲ್ಲಿ ಮಯೂರ ಧ್ವಜನ ಎಡಗಣ್ಣಿನಿಂದ ನೀರು ಸೋರುವುದನ್ನು ನೋಡಿದ ಧರ್ಮರಾಜ "ತಾವು ಕಣ್ಣೀರು ಸುರಿಸುತ್ತಾ ಕೊಟ್ಟ ದಾನ ನಮಗೆ ಬೇಡ ಎಂದರೆ ಬೇಡ ಎನ್ನುತ್ತಾನೆ" ಅದಕ್ಕೆ ಮಯೂರಧ್ವಜ, "ಮಹಾತ್ಮಾ ತಾವು ತಪ್ಪಾಗಿ ಭಾವಿಸುತ್ತಿದ್ದೀರಾ. ನೋವಿನಿಂದ ನನ್ನ ದೇಹವನ್ನು ನಿಮಗೆ ನೀಡುತ್ತಿಲ್ಲ. ನನ್ನ ಬಲಭಾಗ ಪರೋಪಕಾರಕ್ಕೆ ಉಪಯೋಗವಾಯಿತು. ಆದರೆ ಆ ಭಾಗ್ಯ ತನಗಿಲ್ಲವಲ್ಲ ಎಂದು ಎಡಗಣ್ಣು ತುಂಬಾ ನೋವನ್ನನುಭವಿಸುತ್ತಾ ಕಣ್ಣೀರು ಹಾಕುತ್ತಿದೆ" ಎಂದು ವಿವರಿಸುತ್ತಾನೆ. ಮಯೂರ ಧ್ವಜನ ದಾನಶೀಲ ಗುಣವನ್ನು ಮೆಚ್ಚಿ ಶ್ರೀಕೃಷ್ಣನು ತನ್ನ ನಿಜ ರೂಪವನ್ನು ತೋರಿಸಿ "ಮಯೂರಧ್ವಜ, ನಿನ್ನ ದಾನ ಗುಣ ಅಮೋಘ... ಏನಾದರೂ ವರ ಕೋರಿಕೋ" ಎನ್ನುತ್ತಾನೆ.

"ಪರಮಾತ್ಮ, ನನ್ನ ದೇಹ ನಶಿಸಿದರೂ ನನ್ನ ಆತ್ಮ ಪರೋಪಕಾರಕ್ಕಾಗಿ ಉಪಯೋಗಪಡುವಂತೆ ನಿತ್ಯ ನಿಮ್ಮ ಮುಂದಿರುವಂತೆ ಅನುಗ್ರಹಿಸಿ" ಎಂದು ಕೋರಿಕೊಳ್ಳುತ್ತಾನೆ ಮಯೂರ ಧ್ವಜ. ಅದಕ್ಕೆ ಶ್ರೀಕೃಷ್ಣನು ತಥಾಸ್ತು ಎನ್ನುತ್ತಾನೆ. "ಮಯೂರ ಧ್ವಜ, ಇಂದಿನಿಂದ ಪ್ರತಿ ದೇವಾಲಯದ ಮುಂದೆ ನಿನ್ನ ನೆನಪಿಗಾಗಿ ಧ್ಜಜಸ್ತಂಭಗಳಿರುತ್ತವೆ. ಅದನ್ನು ಆಶ್ರಯಿಸಿದ ನಿನ್ನ ಆತ್ಮ, ನಿತ್ಯ ದೈವ ಸನ್ನಿಧಿಯಲ್ಲಿ ಇರುತ್ತದೆ. ಮೊದಲು ನಿನ್ನ ದರ್ಶನ ಪಡೆದು ಪ್ರದಕ್ಷಿಣಿ ನಮಸ್ಕಾರಗಳನ್ನು ಆಚರಿಸಿದ ಬಳಿಕವಷ್ಟೇ ಪ್ರಜೆಗಳು ತಮ್ಮ ಇಷ್ಟ ದೈವದ ದರ್ಶನ ಪಡೆಯುತ್ತಾರೆ. ಪ್ರತಿನಿತ್ಯ ನಿನ್ನ ದೇಹದಲ್ಲಿ ದೀಪ ಯಾರು ಇಡುತ್ತಾರೋ ಅವರ ಜನ್ಮ ಸಾರ್ಥಕವಾಗುತ್ತದೆ. ನಿನ್ನ ನೆತ್ತಿಯ ಮೇಲೆ ಇಟ್ಟ ದೀಪ ರಾತ್ರಿ ಹೊತ್ತು ದಾರಿಹೋಕರಿಗೆ ದಾರಿ ತೋರುವ ದೀಪವಾಗುತ್ತದೆ" ಎಂದು ಅನುಗ್ರಹಿಸುತ್ತಾನೆ.

ಅಂದಿನಿಂದ ಆಲಯಗಳ ಮುಂದೆ ಧ್ವಜಸ್ತಂಭಗಳನ್ನು ಕಡ್ಡಾಯವಾಗಿ ಪ್ರತಿಷ್ಠಾಪಿಸುವ ಆಚಾರ ಆರಂಭವಾಯಿತು. ಭಕ್ತರು ಮೊದಲು ಧ್ವಜಸ್ತಂಭಕ್ಕೆ ನಮಿಸಿ ಬಳಿಕ ಮೂಲವಿರಾಟ್ ದರ್ಶನ ಮಾಡಿಕೊಳ್ಳುವುದು ಸಾಂಪ್ರದಾಯಿಕವಾಗಿ ಬದಲಾಗಿದೆ

No comments:

Post a Comment