Namma Vishwa Bharathi
Namma Vishwa Bharathi, Kannada monthly magazine printed and published by Vijaya Lakshmi Prakashana, the publishing house from Karnataka, India.
Friday, January 10, 2025
Friday, December 27, 2024
Guru Nanak Childhood Story
ರೈತನ ಕಾಳು, ದೇವರ ಕಾಳು. ಗುರುನಾನಕರ ಬಾಲ್ಯದ ಕಥೆ
ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ ಕಾಳುಗಳನ್ನು ತಿನ್ನತೊಡಗಿದವು.
ಒಂದೂರಿನಲ್ಲಿ ಒಬ್ಬ ಬಾಲಕ. ಅವನು ವ್ಯವಹಾರ ಜ್ಞಾನ ಕಲಿಯಲೆಂದು ತಂದೆ ಶಾಲೆಗೆ ಸೇರಿಸಿದರು. ಅವನು ತಪ್ಪಿಸಿಕೊಂಡು ಕಾಡು ಸೇರುತ್ತಿದ್ದ, ಭಗವಂತನನ್ನು ಧ್ಯಾನಿಸುತ್ತಾ ಕುಳಿತುಬಿಡುತ್ತಿದ್ದ. ಒಮ್ಮೆ ಅದೇ ಊರಿನ ವೃದ್ಧನೊಬ್ಬ ತರ್ಥಯಾತ್ರೆ ಹೊರಟ. ತನ್ನ ಗದ್ದೆ ನೊಡಿಕೊಳ್ಳಲು ಒಂದು ಜನ ಬೇಕಾಗಿತ್ತು. ಆ ಬಾಲಕ ಬಹಳ ಒಳ್ಳೆಯ, ವಿನಯವಂತ ಹುಡುಗನೆಂದು ಹೆಸರಾಗಿದ್ದ. ವೃದ್ಧ ಅವನ ಬಳಿ ಹೋಗಿ, ನೋಡು..! ನಾನು ತರ್ಥಯಾತ್ರೆಗೆ ಹೋಗುತ್ತಿದ್ದೇನೆ. ನಾಲ್ಕೈದು ದಿನಗಳಲ್ಲಿ ಮರಳಿ ಬಂದುಬಿಡುತ್ತೇನೆ. ಅಲ್ಲಿಯವರೆಗೆ ನನ್ನ ಹೊಲವನ್ನು ಕಾಯುತ್ತಿರು. ನಿನಗೆ ಚೀಲದ ತುಂಬ ಗೋಧಿ ಕೊಡುತ್ತೇನೆ. ನನ್ನ ಹೊಲದಲ್ಲಿ ಹತ್ತು ಚೀಲ ಗೋಧಿ ಬೆಳೆಯುತ್ತದೆ ಎಂದ.
ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ ಕಾಳುಗಳನ್ನು ತಿನ್ನತೊಡಗಿದವು.
ಬಾಲಕನಿಗೆ ಅವನ್ನು ಓಡಿಸಲು ಮನಸ್ಸಾಗಲಿಲ್ಲ. ಆಕಾಶದೆಡೆ ಮುಖ ಮಾಡಿ ಕಣ್ಮುಚ್ಚಿದ. ದೇವರೇ, ರೈತನ ಗೋಧಿಯ ರಕ್ಷಣೆ ಮಾಡು. ಹಕ್ಕಿಗಳಿಗೆ ನಿನ್ನ ಕಾಳುಗಳನ್ನು ತಿನ್ನಿಸು ಎಂದು ಪ್ರರ್ಥನೆ ಮಾಡಿದ. ಹೀಗೇ ನಾಲ್ಕು ದಿನ ಕಳೆಯಿತು. ಹಕ್ಕಿಗಳು ಪ್ರತಿ ದಿನವೂ ಬಂದು ಪ್ರತಿದಿನ ಕಾಳು ತಿನ್ನುತ್ತಿದ್ದವು. ನಾಲ್ಕು ದಿನಗಳ ನಂತರ ರೈತನು ಮರಳಿ ಬಂದ. ಹೊಲದಲ್ಲಿನ ಬೆಳೆಯ ಮೇಲಿನ ಹಕ್ಕಿಗಳ ಗುಂಪನ್ನು ನೋಡಿ ಅವನಿಗೆ ವಿಪರೀತ ಕೋಪ ಬಂತು. ಬಾಲಕ ಅವನನ್ನು ಸಮಾಧಾನಪಡಿಸುತ್ತಾ, ಅಜ್ಜ..! ಕೋಪ ಬೇಡ..... ಪೈರು ಕೊಯ್ದು, ಕಾಳಿನ ಎಣಿಕೆ ಮಾಡಿ. ನಾನು ದೇವರ ಕಾಳನ್ನು ಹಕ್ಕಿಗಳಿಗೆ ತಿನಿಸಿದ್ದೇನೆ. ನಿಮ್ಮ ಕಾಳು ಹಾಗೇ ಇದೆ ಎಂದ. ಅದರಂತೆ ರೈತ ಹೊಲದ ಬೆಳೆಯನ್ನು ಕೊಯ್ದು. ಕಾಳುಗಳನ್ನು ಬರ್ಪಡಿಸಿ, ಅಳೆದು ನೋಡಿದ. ಏನಾಶ್ರ್ಯ..! ಹನ್ನೊಂದು ಗೋಧಿಯ ಚೀಲಗಳು ತುಂಬಿದ್ದವು..!
ಬಾಲಕ ಹೇಳಿದಂತೆಯೇ ಹಕ್ಕಿಗಳು ತಿಂದಿದ್ದು ದೇವರ ಕಾಳು. ರೈತನಿಗೆ ಒಂದು ಮೂಟೆ ಹೆಚ್ಚು ಪಾಲು..! ಇದು ಸಾಧ್ಯವಾಗಿದ್ದು ಬಾಲಕನ ಶ್ರದ್ಧೆಯಿಂದ. ಈ ಬಾಲಕ ಯಾರು ಗೊತ್ತೆ..? ಸಿಕ್ಖ್ ಮತದ ಸ್ಥಾಪಕ ಗುರು ನಾನಕ್..!
ನಮ್ಮ ಶರೀರ ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೇ ಈ ಹೊಲದಲ್ಲಿ ಬಿತ್ತುವ ಬೀಜಗಳು. ಈ ಬೀಜಗಳು ಮೊಳಕೆ ಒಡೆಯುವುದು ಪ್ರೇಮದಿಂದ. ಅರಳಿ ಫಲ ನೀಡುವುದೂ ಪ್ರೇಮದಿಂದಲೇ. ನಮ್ಮ ಹೊಲದಿಂದ ಈ ರೀತಿಯಲ್ಲಿ ಕುಟುಂಬವನ್ನು ಪೊರೆಯುವಷ್ಟು ಆದಾಯ ಹೊಂದಿಸುವ ಫಸಲು ತೆಗೆಯಬಹುದು ಎನ್ನುತ್ತಿದ್ದ ಗುರು ನಾನಕ್, ಬದುಕಿದ್ದು ಅಕ್ಷರಶಃ ಹಾಗೆಯೇ..
ಸಂಗ್ರಹ: ಶ್ರೀ ಮಹೇಶ ಹೊಸಮನಿ
Wednesday, December 18, 2024
ಭ್ರಷ್ಟಾಚಾರ, ಲಂಚ, ಸ್ವಜನ ಪಕ್ಷಪಾತ, ಕರ್ತವ್ಯಲೋಪ...
ತೀರಾ ಇತ್ತೀಚಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿರುವ ವಾದಿರಾಜ್ ಫೋನ್ ಮಾಡಿದರು. ನಾನಾಗ ಪ್ರಯಾಣದಲ್ಲಿದ್ದೆ. ಸವಿಸ್ತಾರವಾಗಿ ಮಾತನಾಡಲಾಗಲಿಲ್ಲ. ಅವರ ಬ್ಯಾಂಕ್ನಲ್ಲಿ ಒಂದು ಕಾರ್ಯಕ್ರಮ ಇರುವುದಾಗಿಯೂ, ಅದರಲ್ಲಿ ಅತಿಥಿಯಾಗಿ ಭಾಗವಹಿಸಬೇಕೆಂದು ತಿಳಿಸಿದರು. ನಾನು ಒಪ್ಪಿಗೆ ಕೊಟ್ಟೆ. ಅವರ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿ ಕಾರ್ಯಕ್ರಮ ರೂಪಿಸಿದರು. ಎರಡು ದಿನಗಳ ನಂತರ ಸಾಯಂಕಾಲ ತೀರಾ ಅನಿರೀಕ್ಷಿತವಾಗಿ ದಾರಿಯಲ್ಲಿ ಸಿಕ್ಕರು. ಅವರೇನು ನನಗೆ ಹೊಸಬರಲ್ಲ. ಇಪ್ಪತ್ತು ವರ್ಷಗಳ ಸಂಪರ್ಕ. ಕಾರಣ, ನಾನು ಎಸ್. ಬಿ.ಐ.ನ ಗ್ರಾಹಕ ಇಲ್ಲವೆ ಖಾತೆದಾರ. ಅದಕ್ಕಿಂತಲೂ ಮೀರಿದ್ದು ನಮ್ಮಿಬ್ಬರ ಆಪ್ತತೆ. ದಾರಿಯಲ್ಲಿ ಸಿಕ್ಕಾಗ ಮಾತನಾಡುತ್ತಾ ವಿಷಯಕ್ಕೆ ಬಂದೆವು. ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಕೇಂದ್ರ ಸರ್ಕಾರದ ಜಾಗೃತಿ ದಳದಿಂದ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಸಾರ್ವಜನಿಕರೂ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ. ವಿಷಯ ಕುರಿತು ಹಲವಾರು ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆಯೂ ಇತ್ತು. ಸಂಜೆ ಐದೂವರೆ ಗಂಟೆಗೆ ಬರಲು ಹೇಳಿದ್ದರಾದರೂ ಬ್ಯಾಂಕ್ ಸಿಬ್ಬಂದಿಯ ಕೆಲಸ ಸಾಮಾನ್ಯರು ತಿಳಿದುಕೊಮಡಷ್ಟು ಸುಲಭವಾಗಿಲ್ಲ. ರಾತ್ರಿ ಏಳೂವರೆ-ಎಂಟು ಗಂಟೆಯಾದರೂ ಮುಗಿಯದಷ್ಟು ಕಾರ್ಯ.
ಬ್ಯಾಂಕ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರೇ ಸಭಿಕರು. ನಾನಾದರೋ ಎಂಟು ಗಂಟೆಗೆ ಬೇರೊಂದು ಕಾರ್ಯಕ್ರಮಕ್ಕೆ ತೆರಳಲೇಬೇಕಾದ ಅನಿವಾರ್ಯತೆ. ಪ್ರಯುಕ್ತ, ಗಡಿಬಿಡಿಯಲ್ಲಿ ನನ್ನ ಮಾತು ಮುಗಿಸಿದೆ. ಒಂದು ರೀತಿ ಪುರೋಹಿತರ ಶೈಲಿಯಲ್ಲಿ. ಪುರೋಹಿತರನ್ನೇ ನೋಡಿ. ಬೇರೆಡೆ ಯಾವುದೇ ಕಾರ್ಯ ಇಲ್ಲದೇ ಹೋದರೆ ನಿಧಾನವಾಗಿ ಪ್ರತಿಯೊಂದು ಶಾಸ್ತçವನ್ನು ಮಾಡಿ ಮುಗಿಸುತ್ತಾರೆ. ಒಂದೇ ಒಂದು ಮಂತ್ರವನ್ನೂ ಬಿಡುವುದಿಲ್ಲ. ಈ ಮಧ್ಯೆ ಅಲ್ಲಲ್ಲಿ ಗಾಯಿತ್ರಿ ಮಂತ್ರ. ಬಹಳ ನಿಧಾನವಾಗಿ ಕಾರ್ಯ ಮುಗಿಸಿ ತಾಂಬೂಲದೊAದಿಗೆ ಕಾಣಿಕೆ ಪಡೆದು ಮಂತ್ರಾಕ್ಷತೆ ಹಾಕಿ ಆಶೀರ್ವಾದ ಮಾಡಿ ತೆರಳುತ್ತಾರೆ. ಒಂದೇ ದಿನ ಎರಡು ಕಾರ್ಯಗಳಿದ್ದರೆ ಮುಗಿದೇ ಹೋಯಿತು. ಅಗತ್ಯವಿರುವಷ್ಟು ಮಂತ್ರ. ಕೆಲವೊಂದು ವಸ್ತುಗಳು ಕಡಿಮೆ ಇದ್ದರೂ ಇಲ್ಲವೇ ಇಲ್ಲದೇ ಹೋದರೂ ಮಾಫಿ. ಕಾಣಿಕೆ ಪಡೆದು ಓಡುತ್ತಾರೆ. ಅಂದು ನಾನು ಮಾಡಿದ್ದು ಅದನ್ನೆ. ಅಂದು ಸವಿಸ್ತಾರವಾಗಿ ಹೇಳದೇ ಇದ್ದುದರಿಂದ ಇಲ್ಲಿ ಬರೆಯಬೇಕಾಯಿತು.
ಲಂಚ, ಭ್ರಷ್ಟಾಚಾರ, ಸೃಜನ ಪಕ್ಷಪಾತ ಇವುಗಳು ಅಸಹ್ಯ ಹುಟ್ಟಿಸುತ್ತವೆ. ಕರ್ತವ್ಯಲೋಪ ಸಿಟ್ಟು ತರಿಸುತ್ತದೆ.
ಒಬ್ಬ ಹಿರಿಯ ಪ್ರಾಮಾಣಿಕ ಐ.ಎ.ಎಸ್. ಅಧಿಕಾರಿಯಿದ್ದ. ಕುಡಿಯುವ ನೀರನ್ನು ಮನೆಯಿಂದ ತರುತ್ತಿದ್ದ. ಅವನ ಪ್ರಾಮಾಣಿಕತೆ ನೂರಕ್ಕೆ ಇನ್ನೂರರಷ್ಟು. ಅದು ಅವನಿಗೆ, ಹೆಮ್ಮೆಯೇನೋ ತಿಳಿಯದು. ಒಮ್ಮೆ ಅವನದೇ ಇಲಾಖೆಯ ನೂರಾರು ನೌಕರರ ಭಡ್ತಿಗೆ ಸಂಬAಧಿಸಿದ ಕಡತವೊಂದು ಆತನ ಬಳಿ ಬಂದಿತು.ಆ ವೇಳೆಗೆ ಎಲ್ಲಾ ಹಂತಗಳಲ್ಲಿ ಪರಿಶೀಲನೆಗೊಳಗಾಗಿ ಅಲ್ಲಿಗೆ ತಲುಪಿರುತ್ತದೆ. ಆತ ಒಂದು ಸಹಿ ಹಾಕಿದರೆ ಎಲ್ಲರಿಗೂ ಬಡ್ತಿಯ ಅವಕಾಶ. ಆದರೆ ಮೂರು ತಿಂಗಳಾದರೂ ಸಹಿ ಮಾಡಲಿಲ್ಲ. ನೌಕರರು ಚಿಂತೆಗೊಳಗಾದರು. ಐ.ಎ.ಎಸ್. ಅಧಿಕಾರಿಯ ಆಪ್ತರೊಬ್ಬರಿಗೆ ಅರಿಕೆ ಮಾಡಿಕೊಂಡರು. ಆದರೆ ಪ್ರಾಮಾಣಿಕ ಅಧಿಕಾರಿಯ ಉತ್ತರ “ನಾನೇನು ಲಂಚ ಪಡೆದಿದ್ದೇನೆಯೆ? ಮಾಡಿದರಾಯಿತು ಬಿಡಿ” ಎಂದು ಬಿಟ್ಟರು. ಕೆಲವರು ನಿವೃತ್ತಿಗೆ ತಿಂಗಳುಗಳು ಹಾಗೂ ವರ್ಷವಷ್ಟೇ ಇದ್ದವರು. ಎಲ್ಲರೂ ಸೇರಿ ಐ.ಎ.ಎಸ್. ಅಧಿಕಾರಿಯನ್ನೇ ವರ್ಗಾವಣೆ ಮಾಡಿಸಿದರು. ಅವರ ಸ್ಥಾನಕ್ಕೆ ಬಂದ ಹೊಸ ಅಧಿಕಾರಿ ತಕ್ಷಣವೇ ಬಡ್ತಿಗೆ ಸಹಿ ಹಾಕಿದರು. ಎಲ್ಲವೂ ಸರಿ ಇದ್ದು ಹಣ ಪಡೆದು ಕೆಲಸ ಮಾಡಿಕೊಟ್ಟರೆ ಅದು ಲಂಚ.
ಐ.ಎ.ಎಸ್. ಅಧಿಕಾರಿ ಪ್ರಾಮಾಣಿಕನೆ. ಆದರೆ ಮಾಡಬೇಕಾದ ಕೆಲಸ ಮಾಡಲಿಲ್ಲ. ವಿಷಯ ಲೋಕಾಯುಕ್ತ ಗಮನಕ್ಕೆ ಬಂದಿತು. ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಪ್ರಾಮಾಣಿಕ ಐ.ಎ.ಎಸ್. ಅಧಿಕಾರಿಯ ಮೇಲೆ ಪ್ರಕರಣ ದಾಖಲಾಯಿತು. ಮಾಡಬೇಕಾದ ಕೆಲಸ ಮಾಡದೇ ಹೋದರೂ ಭ್ರಷ್ಟಾಚಾರವೆ. ಇದೇ ಕಾರಣಕ್ಕೆ ಎನ್. ವೆಂಕಟಾಚಲಯ್ಯನವರು ಲೋಕಾಯುಕ್ತರಾಗಿದ್ದ ಸಂದರ್ಭದಲ್ಲಿ ಎಲ್ಲೆಡೆ ಸುತ್ತಿ ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿದ್ದರು. ಆ ಮೂಲಕ ಜನರಿಗೆ ತ್ವರಿತ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದರು. ಲೋಕಾಯುಕ್ತರ ಮೂಲ ಆಶಯ ಅದೆ ನೀರಾವರಿ ಇಲಾಖೆಯಲ್ಲಿ ಒಂದು ಯೋಜನೆ ಕೈಗೆತ್ತಿಕೊಂಡರು. ನಾಲೆ ನಿರ್ಮಾಣದ ಯೋಜನೆ. ಅಂದಾಜು ವೆಚ್ಚ ತಯಾರಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಯಿತು. ಎಂಜಿನಿಯರ್ ಒಬ್ಬ ಒಂದು ನೂರು ಕೋಟಿ ರೂಪಾಯಿಗಳ ಯೋಜನಾ ವೆಚ್ಚ ಸಿದ್ಧಪಡಿಸಿದ. ಆದರೆ ಸಚಿವರಿಗೆ ಒಪ್ಪಿಗೆಯಾಗಲಿಲ್ಲ. ಮನ್ನೂರು ಕೋಟಿಗೆ ಏರಿಸಲು ಸುಚಿಸಿದರು. ಅಧಿಕಾರಿ ಒಪ್ಪಲಿಲ್ಲ. ಯಥಾಪ್ರಕಾರ ವರ್ಗಾವಣೆ. ಅದೇ ಜಾಗಕ್ಕೆ ಬಂದ ಮತ್ತೊಬ್ಬ ಅಧಿಕಾರಿ ನಾಲ್ಕು ನೂರು ಕೋಟಿಗಳ ಅಂದಾಜು ವೆಚ್ಚ ರೂಪಿಸಿದ ಆತ ಮಾಡಿದ್ದಿಷ್ಟೆ. ಅಂತಹ ಕಲ್ಲು ಮಿಶ್ರಿತವಲ್ಲದ ಭೂಮಿಯಾದರು ಬಂಡೆಯಿAದ ಕೂಡಿದ ಭೂಮಿಯೆಂದು ವಿವರಿಸಿದ. ಸಹಜವಾಗಿಯೇ ಬಂಡೆ ಸಿಡಿಸುವುದು, ಇತ್ಯಾದಿ ಯೋಜನಾವೆಚ್ಚ ಏರಿತು. ಇಲ್ಲಿ ಮಾಡಬಾರದ್ದನ್ನು ಮಾಡಿದ್ದರಿಂದ ಇದು ಭ್ರಷ್ಟಾಚಾರ. ಕೃಷ್ಣ ಮೇಲ್ದಂಡೆಯ ವಿಷಯದಲ್ಲಿ ಇದೇ ಆಗಿರುವುದು. ಇಂದಿಗೂ ಸಿ.ಐ.ಡಿ ಯಲ್ಲಿ ಪ್ರಕರಣ ಬಾಕಿ ಇದೆ. ಸಂಬAಧಿಸಿದವರೆಲ್ಲರೂ ಕಾಲವಾದ ಮೇಲೆ ಷೆರಾ ಬರೆದರೆ ಮುಗಿಯಿತು.
ಮಾಡಬೇಕಾದುದ್ದನ್ನು ಮಾಡದೇ ಹೋದರೆ, ಹಾಗೆಯೆ ಮಾಡಬಾರದ್ದನ್ನು ಮಾಡಿದರೆ ಅದು ಭ್ರಷ್ಟಾಚಾರ.
ಒಬ್ಬರು ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರು ತಮ್ಮ ಸಮಯ ಮುಗಿಯಿತೆಂದು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅದು ಭ್ರಷ್ಟಾಚಾರ. ಅಗತ್ಯ ಸೇವೆಗಳಿಗೆ ಸಮಯವೆಂಬುದಿಲ್ಲ. ಆದರೆ ವೈದ್ಯನೊಬ್ಬ ಶಸ್ತçಚಿಕಿತ್ಸೆ ಮಾಡುವಾಗ ಕತ್ತರಿಯನ್ನೋ ಇಲ್ಲವೆ ಉಪಕರಣವನ್ನೋ ಹೊಟ್ಟೆಯೊಳಗೆ ಬಿಟ್ಟು ಹೊಲಿಗೆ ಹಾಕಿದ ಪ್ರಸಂಗಗಳನ್ನು ಓದಿದ್ದೇವೆ. ಅದು ಭ್ರಷ್ಟಾಚಾರವಲ್ಲ. ಅದು ಕರ್ತವ್ಯಲೋಪ. ಒತ್ತಡದಿಮದಲೋ, ಕೆಲವೊಮ್ಮೆ ಉದಾಸೀನದಿಂದಲೋ ಆಗುವ ತಪ್ಪುಗಳು. ಅಂತಹ ಸಂದರ್ಭಗಳಲ್ಲಿ ಸಂಬAಧಿಸಿದವರ ಮೇಲೆ ಕ್ರಮ ಕೈಗೊಳ್ಳುವುದೂ ಉಂಟು.
ಶಿಕ್ಷಕರನ್ನೇ ತೆಗೆದುಕೊಳ್ಳಿ ಮೌಲ್ಯಮಾಪನಕ್ಕಾಗಿ ತೆರಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದು ಕಾಕತಾಳೀಯವೂ ಆಗಿರುತ್ತದೆ. ಉದಾಹರಣೆಗೆ ಕೇವಲ ಐದಾರು ದಿನಗಳಲ್ಲಿ ಮೌಲ್ಯ ಮಾಪನ ಮುಗಿಯುವ ಸಂದರ್ಭ ಬರುತ್ತದೆ. ಅಂತಹ ಸಂದರ್ಭದಲ್ಲಿ ಮೊದಲಿನ ಹಾಗೂ ಕಡೆಯ ದಿನವನ್ನು ಹೊರತು ಪಡಿಸಿದರೆ ಉಳಿಯುವುದು ಮೂರರಿಂದ ನಾಲ್ಕು ದಿನ. ಆ ಮರ್ನಾಲ್ಕು ದಿನಗಳಲ್ಲಿ ಭಾನುವಾರವೋ ಇಲ್ಲ ಮತ್ಯಾವುದೋ ರಜೆ ಬಂದರೆ ಮುಗಿದೇ ಹೋಯಿತು. ಇದರ ಜೊತೆಗೆ ಕಾಕತಾಳೀಯವೆಂಬAತೆ ಒಬ್ಬ ಶಿಕ್ಷಕನಿಗೆ ಬರುವ ಎಲ್ಲ ಉತ್ತರ ಪತ್ರಿಕೆಗಳು ಎಂಭತ್ತಕ್ಕೂ ಹೆಚ್ಚು ಅಂಕಗಳನ್ನು ಪಡೆಯುವಂತಿದ್ದರೆ ಕತೆ ಮುಗಿದಂತೆ. ಆಗ ಸಹಜವಾಗಿಯೇ ಒತ್ತಡ ಉಂಟಾಗುತ್ತದೆ. ಉತ್ತರ ಪತ್ರಿಕೆಗಳಲ್ಲಿನ ಉತ್ತರಗಳನ್ನು ನೋಡುವುದಕ್ಕಿಂತ ಹೆಚ್ಚಿನದಾಗಿ ಗಡಿಯಾರದ ಕಡೆ ಕಣ್ಣು ಹೊರಳುತ್ತದೆ. ಸಹಜವಾಗಿಯೇ ಎಣಿಕೆಯಲ್ಲಿಯೋ ಇಲ್ಲವೇ ಮೌಲ್ಯಮಾಪನದಲ್ಲಿಯೇ ಏರು ಪೇರಾಗಿರುತ್ತದೆ.
ಅಭ್ಯರ್ಥಿಗಳು ಮರು ಎಣಿಕೆಗೋ ಇಲ್ಲವೇ ಮರು ಮೌಲ್ಯ ಮಾಪನಕ್ಕೋ ಅರ್ಜಿ ಸಲ್ಲಿಸುತ್ತಾರೆ. ತಪ್ಪುಗಳು ಹೊರ ಬರುತ್ತವೆ. ಸಂಬAಧಿಸಿದ ಶಿಕ್ಷಕ ವಿವರಣೆ ಕೊಡಬೇಕು. ದಂಡ ಇತ್ಯಾದಿ ಇದ್ದದ್ದೇ. ಇದೂ ಕೂಡ ಕರ್ತವ್ಯಲೋಪ. ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪಲ್ಲ.
ಭ್ರಷ್ಟಾಚಾರದ ಪ್ರಕರಣಗಳು ಯಾವಾಗ ಬೇಕಾದರೂ ಹೊರಬರಬಹುದು. ಮಾಹಿತಿ ಹಕ್ಕಿನ ಮೂಲಕ ಅಗತ್ಯ ಮಾಹಿತಿ ಪಡೆದು ಲೋಕಾಯುಕ್ತಕ್ಕೆ ಪ್ರಕರಣ ದಾಖಲಿಸಿದರೆ ಮುಗಿಯಿತು. ಅದೆಷ್ಟೇ ಹಳೆಯ ಪ್ರಕರಣವಾದರೂ ಜೀವ ಪಡೆದುಕೊಳ್ಳುತ್ತದೆ. ತನಿಖೆ ವಿಚಾರಣೆೆ, ಅಗತ್ಯ ಬಿದ್ದರೆ ಆರೋಪ ಪಟ್ಟಿ, ನ್ಯಾಯಾಲಯ, ವಾದ, ವಿವಾದ, ತೀರ್ಪು.
ಲಂಚದ ವಿಷಯವೇ ಬೇರೆ. ಒಬ್ಬ ನೌಕರ ನಿವೃತ್ತಿಯಾಗುತ್ತಾನೆ. ನಿವೃತ್ತಿಯ ದಿನವೇ ತನಗೆ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅವಕಾಶವಿದೆ. ಆದರೆ ಇಡೀ ಕರ್ನಾಟಕ ಸರ್ಕಾರ ದ ಇತಿಹಾಸದಲ್ಲಿ ಸಿರಾ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನ ಪಿ.ಎಚ್. ಮಹೇಂದ್ರಪ್ಪ ಒಬ್ಬರು ಮಾತ್ರ ನಿವೃತ್ತಿ ದಿನವೇ ಎಲ್ಲವನ್ನೂ ಪಡೆದು ದಾಖಲೆ ಮಾಡಿದ್ದಾರೆ. ನಿವೃತ್ತ ವೇತನವೇನು ತಾನಾಗಿಯೇ ಬರುವುದಿಲ್ಲ. ನಿವೃತ್ತಿಗೆ ಮೂರು ತಿಂಗಳ ಮುಂಚಿತವಾಗಿ ಬಟವಾಡೆ ಅಧಿಕಾರಿ ಸೇವಾ ಪುಸ್ತಕ ಹಾಗೂ ಅಗತ್ಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕು. ದಾಖಲೆಗಳನ್ನು ಯಾರೊಬ್ಬರೂ ತಿದ್ದಲಾಗಲೀ ಇಲ್ಲವೇ ಇಲ್ಲದ್ದನ್ನು ಸೇರಿಸಲಾಗಲಿ ಸಾಧ್ಯವಿಲ್ಲ. ಆದರೂ ಬಟವಾಡೆ ಅಧಿಕಾರಿ ಸಹಿ ಮಾಡದೆ ಕೆಲಕಾಲ ಇಟ್ಟುಕೊಳ್ಳಬಹುದು. ಖಾಸಗಿ ಶಾಲಾ ಕಾಲೇಜುಗಳಾದರೆ ಆಡಳಿತ ಮಂಡಳಿಯವರೇ ತಡೆ ಹಿಡಿಸಬಹುದು. ಉದ್ದೇಶ ನಷ್ಟ ವಸೂಲಿ ಅಂದರೆ ಲಂಚ.
ಎರಡನೇ ಹಂತದಲ್ಲಿ ಇಲಾಖಾ ಕಚೇರಿಯ ನೌಕರರು ನಂತರ ಅಧಿಕಾರಿ. ನಿವೃತ್ತಿ ವೇತನದ ಜೊತೆಗೆ ಲಕ್ಷ ಲಕ್ಷ ಹಣ ಬರುವುದರಿಂದ ಎಲ್ಲರ ಕಣ್ಣು ಅದರ ಮೇಲೆ. ಕೆಲವೊಮ್ಮೆ ನಿವೃತ್ತರು ತಮ್ಮ ಮಕ್ಕಳ ಮದುವೆಗೋ ಮನೆ ನಿರ್ಮಿಸಲೋ ತೊಡಗಿದ್ದರೆ ಅವರ ಕಷ್ಟ ಹೇಳತೀರದು. ಹೀಗಾಗಿ ಲಂಚ ಕೊಟ್ಟು ಆದಷ್ಟು ಬೇಗೆ ಕಡತಗಳನ್ನು ದಾಟಿಸುತ್ತಾರೆ. ಇಲ್ಲಿ ಯಾರೊಬ್ಬರೂ ಮಾಡಬಾರದ್ದನ್ನು ಮಾಡಿ ಅನುಕೂಲ ಮಾಡಿಕೊಡುತ್ತಿಲ್ಲ. ಎಲ್ಲವೂ ಕಾನೂನು ಪ್ರಕಾರವಾಗಿಯೇ ನಡೆಯುತ್ತದೆ. ಅಂದರೆ ಎಲ್ಲವೂ ಕ್ರಮಬದ್ದವಾಗಿದ್ದು. ಕ್ರಮಬದ್ದವಾಗಿ ಕೆಲಸ ಮಾಡುವುದಕ್ಕೆ ನೀಡುವುದೇ ಲಂಚ.
ನೌಕರರೂ ಕೂಡ ಮತ್ತೊಬ್ಬ ನೌಕರನಿಗೆ ತನ್ನ ಸಂಬಳ, ಭತ್ಯೆ, ಭತ್ಯೆ ಬಾಕಿ, ವೇತನ ಬಡ್ತಿ ಹೀಗೆ ನಿಯಮಾನುಸಾರ ಪಡೆಯುವ ಸೌಲಭ್ಯಕ್ಕೆ ನೀಡುವ ಹಣ ಲಂಚ. ಲಂಚ ಪಡೆಯುವಾಗ ಹಿಡಿದgಷ್ಟೆ ಪ್ರಕರಣ ದಾಖಲು. ಆ ಕ್ಷಣ ದಾಟಿದರೂ ಯಾವ ದಾಖಲೆಯೂ ಇರುವುದಿಲ್ಲ. ಅಂದರೆ ಭ್ರಷ್ಟಾಚಾರವನ್ನು ಯಾವಾಗ ಬೇಕಾದರೂ ಕೆದಕಲೂ, ಕೆಣಕಲೂ ಅವಕಾಶವಿದೆ. ಆದರೆ ಲಂಚದ ವಿಷಯದಲ್ಲಿ ಹಾಗಲ್ಲ. ಲಂಚದ ಹಣ ಕಲವೇ ರೂಪಾಯಿಗಳಂದ ಕೋಟಿ ಕೋಟಿ ರೂಪಾಯಿಗಳವರೆವಿಗೂ ನಡೆಯುತ್ತದೆ. ಲಂಚವನ್ನು ಕೆಲವೊಮ್ಮೆ ಕಂತುಗಳಲ್ಲಿ ಕೊಡುವುದು ಉಂಟು. ಮುಂಗಡ, ಕಡತ ಚಾಲ್ತಿಯಾಗುವಾಗ, ಅಂತಿಮವಾಗಿ ಆದೇಶವಾದಾಗ ಅಂದರೆ ಕೆಲಸವಾದಾಗ. ಕೆಲವೊಮ್ಮೆ ಕೆಲಸವಾದ ಮೇಲೆ ಕೈ ಕೊಡುವವರು ಉಂಟು. ಅದೇ ಕಾರಣಕ್ಕೆ ಇತ್ತೀಚೆಗೆ ಕೆಲಸಕ್ಕೂ ಮೊದಲೇ ಚುಕ್ತಾ ಮಾಡುತ್ತಾರೆ.
ಲಂಚಕ್ಕೆ ಸಂಬAಧಿಸಿದAತೆ ಒಂದು ಜೋಕ್ ನೆನಪಾಯಿತು. ಕೆಲವು ವರ್ಷಗಳ ಹಿಂದೆ ಕೈಗಾರಿಕೆ ಸ್ಥಾಪನೆಗೆ ಸಂಬAಧಿಸಿದAತೆ ಉದ್ಯಮಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಸಂಬAಧಪಟ್ಟ ಸಚಿವರಿಂದ ಅನುಮೋದನೆ ಪಡೆಯಬೇಕಾಗಿತ್ತು. ಆ ವೇಳೆಗಾಗಲೇ ಉದ್ದಿಮೆದಾರರು ಸಚಿವರೊಂದಿಗೆ ಮಾತುಕತೆ ಮುಗಿಸಿದ್ದರು. ಹಾಗೆಯೇ ಮುಂಗಡವನ್ನೂ ನೀಡಿದ್ದರು. ಉದ್ದಿಮೆದಾರ ಸಚಿವರ ಆಪ್ತಸಹಾಯಕನನ್ನು ಸಂಪರ್ಕಿಸಿ ತನ್ನಬ ಕಡತ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳುತ್ತಿದ್ದ. ಅಂದರೆ ಆಪ್ತ ಸಹಾಯಕನಿಗೆ ಕೈ ಬೆಚ್ಚಗೆ ಮಾಡಿದ್ದ. ಒಂದು ದಿನ ಸಚಿವರು ಸಂಬAಧಿಸಿದ ಕಡತದ ಮೇಲೆ “ಚಿಠಿಠಿಡಿoveಜ ಎಂದು ಬರೆದು ಅದರ ಕೆಳಗಡೆ ಸಹಿ ಮಾಡಿದರು. ಸಚಿವರ ಆಪ್ತ ಸಹಾಯಕ ಉದ್ದಿಮೆದಾರನಿಗೆ ವಿಷಯ ಮುಟ್ಟಿಸಿದ. ಉದ್ದಿಮೆದಾರ ಕಿಲಾಡಿ ಮನುಷ್ಯ. ಹೇಗಿದ್ದರೂ ಚಿಠಿಠಿಡಿoveಆಗಿದೆ ಉಳಿದ ಹಣ ನೀಡುವುದೇ ಬೇಡವೆಂದು ದುರಾಸೆಗೆ ಬಿದ್ದ. ಸಚಿವರೂ ಕೂಡ ಒಂದು ವಾರ ಕಾದರು. ಉದ್ಯಮಿ ತಲೆ ಹಾಕಲಿಲ್ಲ. ಆಪ್ತ ಸಹಾಯಕನನ್ನು ಕರೆದು ಸಂಬAಧಿಸಿದ ಕಡತ ತೆಗೆಸಿದರು. ಚಿಠಿಠಿಡಿoveಜ ಎನ್ನುವ ಪದದ ಹಿಂದೆ ಟಿoಣ ಸೇರಿಸಿದರು. ಅಲ್ಲಿಗೆ ಟಿoಣ ಚಿಠಿಠಿಡಿoveಜ ಎಂದಾಯಿತು. ಸಹಾಯಕನ ಮೂಲಕ ವಿಷಯ ತಿಳಿದ ಉದ್ದಿಮೆದಾರ ಅನಿವಾರ್ಯವಾಗಿ ಹಣದೊಂದಿಗೆ ಸಚಿವರ ಮುಂದೆ ಹೋಗಲೇಬೇಕಾಯಿತು. ತಾನು ಊರಿನಲ್ಲಿ ಇರಲಿಲ್ಲವೆಂದು ಅದೇನೋ ಸಬೂಬು ಹೇಳಿದ. ಉಳಿದ ಹಣವನ್ನು ಸಂದಾಯ ಮಾಡಿದ. ಅಂದು ಸಂಜೆಯೆ ಸಂಬAಧಿಸಿದ ಕಡತ ವಿಲೇವಾರಿಯಾಗುವುದಾಗಿ ಸಚಿವರು ತಿಳಿಸಿದರು. ಸಂಬAಧಿಸಿದ ಕಡತ ತರಿಸಿಕೊಂಡ ಸಚಿವರು ‘ಟಿoಣ ಚಿಠಿಠಿಡಿoveಜ’ ಎಂದಿದ್ದುದರಲ್ಲಿ ಟಿoಣ ಎಂಬ ಪದಕ್ಕೆ ‘e’ ಸೇರಿಸಿ ಟಿoಣe ಎಂಬುದಾಗಿ ಬರೆದರು. ಅಲ್ಲಿಗೆ 'ಟಿoಣ ಚಿಠಿಠಿಡಿoveಜ' ಇದ್ದದ್ದು ‘ಟಿoಣe ಚಿಠಿಠಿಡಿoveಜ’ ಆಗಿ ಹೋಯಿತು. ಇದಕ್ಕೆಲ್ಲ ಪಡೆದದ್ದು ಅಕ್ಷರಷಃ ಲಂಚ.
ಎಪ್ಪತ್ತರ ದಶಕಕ್ಕೂ ಮೊದಲು ನೌಕರರ ಬದುಕಿಗೂ ಸಾಮಾನ್ಯ ಜನರ ಬದುಕಿಗೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಕೊಂಚ ಮಟ್ಟಿಗೆ ರೈತರೇ ಸುಖವಾಗಿದ್ದರು. ವರ್ತಕರು ದಿವಿನಾಗಿದ್ದರು. ಆದರೆ ಎಪ್ಪತ್ತರ ದಶಕದಿಂದ ಆರಂಭವಾದ ಲಂಚ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ... ಸಾಮಾನ್ಯ ಜನರ ಜೀವನವನ್ನೇ ಮಣ್ಣು ಪಾಲು ಮಾಡಿದವು. ಅಂದಿಗೆ ಸಾವಿರಗಳೇ ದೊಡ್ಡ ಮೊತ್ತ. ಇಂದು ಕೋಟಿ ಲೆಕ್ಕದಲ್ಲಿ ಮಾತನಾಡುವುದು ಸಾಮಾನ್ಯವಾಗಿದೆ.
ಲಂಚದ ಪರಿಣಾಮವನ್ನು ಒಮ್ಮೆ ಯೋಚಿಸಿ. ಲಂಚದ ಹಣವನ್ನು ಹಾಗೆಯೇ ಇಡಲು ಯಾರೂ ಬಯಸುವುದಿಲ.್ಲ ಇಂತಹವರಿAದಲೇ ಜಮೀನು ಹಾಗೂ ನಿವೇಶನಗಳ ಬೆಲೆ ಗಗನಕ್ಕೇರಿರುವುದು. ಭೋಗದ ಜೀವನ ಶೈಲಿ; ಅದಕ್ಕೊಂದಿಷ್ಟು ಖರ್ಚು. ಉಳಿದ ಹಣ;? ಹೂಡಿಕೆ. ಸೈಟು, ಜಮೀನು, ಷೇರು ಇತ್ಯಾದಿ. ಯಾವಾಗ ಲಂಚದ ಹಣ ಕೈ ಸೇರಿತೋ ಜಮೀನಿನ ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೆಷ್ಟೇ ಆಗಲಿ ಎನ್ನುವಷ್ಟರ ಮಟ್ಟಿಗೆ. ಒಮ್ಮೆ ಒಂದು ಜಮೀನು ದೊಡ್ಡ ಮೊತ್ತಕ್ಕೆ ಮಾರಾಟ ವಾಯಿತೆಂದರೆ ಅಲ್ಲಿಗೆ ಮುಗಿಯಿತು.ಇನ್ನು ನಿವೇಶನಗಳ ಬೆಲೆಯೂ ಅಷ್ಟೆ. ಇಂದು ನಿವೇಶನಗಳ ಬೆಲೆ ಗಗನಕ್ಕೇರಲು ಮುಖ್ಯವಾದ ಕಾರಣ ದಾಖಲೆ ಇಲ್ಲದ ಹಣ. ಅಂದರೆ ಕಪ್ಪು ಹಣ. ಆದರೆ ನೋಟು ಅಮಾನೀಕರಣದಿಂದ ತಕ್ಷಣಕ್ಕೆ ನಿವೇಶನದ ಬೆಲೆ ಸ್ಥಿರವಾಗಿದೆ. ಒಮ್ಮೆ ಕಪ್ಪು ಹಣ ಶೇಖರಣೆ ಯಾದರೆ ಮತ್ತದೇ ಕತೆ. ಸಾಮಾನ್ಯ ಜನರ ಬದುಕು ಬರ್ಬಾದ್ ಆಗಿರುವುದೇ ಈ ಲಂಚ ಹಾಗೂ ಭ್ರಷ್ಟಾಚಾರದಿಂದ.
ಕರ್ನಾಟಕ ಸರ್ಕಾರದಲ್ಲಿ ಅರವತ್ತಕ್ಕೂ ಅಧಿಕ ಇಲಾಖೆಗಳೂ ಹಾಗೂ ಮುವತ್ತಕ್ಕೂ ಅಧಿಕ ನಿಗಮ ಮಂಡಳಿಗಳಿವೆ. ಕರ್ನಾಟಕದಲ್ಲಿ ಮುನ್ನೂರು ಜನ ಶಾಸಕರು, ಸಾವಿರಾರು ಅಧಿಕಾರಿಗಳು, ಲಂಚ ಪಡೆಯಲು ಅವಕಾಶವಿರುವ ಸುಮಾರು ಅರವತ್ತು ಸಾವಿರ ನೌಕರರು. ಅಂದರೆ ನಮ್ಮ ರಾಜ್ಯದ ಒಟ್ಟು ಜನರಲ್ಲಿ ಈ ರೀತಿ ಅಕ್ರಮ ಸಂಪಾದನೆ ಮಾಡುವವರು ಸರಾಸರಿ ಸಾವಿರಕ್ಕೆ ಒಬ್ಬ. ಕೇವಲ ಇಷ್ಟು ಜನ ಇಡಿ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಸಾಮಾನ್ಯ ಜನರ ಬದುಕಿಗೆ ಕೊಳ್ಳಿ ಇಡುತ್ತಾರೆಂದರೆ ನಂಬುತ್ತೀರಾ? ಅನುಮಾನವೇ ಬೇಡ. ಇದು ಸತ್ಯ.
ಲಂಚವಿಲ್ಲದೆ ಬದುಕಲು ಸಾಧ್ಯವಿಲ್ಲವೆ?
ಈಗಾಗಲೇ ಹೇಳಿರುವಂತೆ ಸರಿ ಸುಮಾರು ಒಂದು ನೂರು ಇಲಾಖೆಗಳಿವೆ. ಎಲ್ಲಕ್ಕೂ ಕೇಂದ್ರ ಸ್ಥಾನ ವಿಧಾನ ಸೌಧ. ಅಲ್ಲಿಯೂ ಭ್ರಷ್ಟಾಚಾರ, ಲಂಚ, ಸ್ವಜನ ಪಕ್ಷಪಾತ ನಡೆದಿರುವ ಪ್ರಕರಣಗಳು ದಾಖಲಾಗಿವೆ. ಇನ್ನು ಉದ್ಯೋಗ ಸೌಧ ವೊಂದಿದೆ. ಅಂದರೆ ಕೆ.ಪಿ.ಎಸ್.ಸಿ. ಇಲ್ಲಿಯೂ ಲಂಚ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ನಡೆದಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ನೇಮಕಾತಿಗಾಗಿ ಲಕ್ಷ ಲಕ್ಷ ಲಂಚ ಕೊಟ್ಟ ವ್ಯಕ್ತಿ ಅದನ್ನು ಮರಳಿ ಪಡೆಯಲು ಅನುಸರಿಸಬೇಕಾದ ವಿಧಾನವೇ ಲಂಚ.
ವಿಧಾನ ಸೌಧದÀ ಪಶ್ಚಿಮ ಗೇಟ್ನ ಎದುರಿಗೆ ಹಾಗೆಯೇ ಉದ್ಯೋಗ ಸೌಧದ ಎದುರಿಗೆ ಒಂದು ಕಚೇರಿ ಇದೆ. ಅದು ಅಕೌಂಟೆAಟ್ ಜನರಲ್ ಕಚೇರಿ. ಇಡೀ ಕರ್ನಾಟಕ ಸರ್ಕಾರಿ ನೌಕರರ ನಿವೃತ್ತ ವೇತನ ಹಾಗೂ ಇತರ ಸೌಲಭ್ಯಗಳು ಅಂತಿಮಗೊಳ್ಳುವುದೇ ಅಲ್ಲಿ. ಅಲ್ಲಿನ ನೌಕರರು ಮನಸ್ಸು ಮಾಡಿದರೆ ದಿನವೊಂದಕ್ಕೆ ಲಕ್ಷ ಲಕ್ಷ ಲಂಚ ಪಡೆಯಬಹುದು. ಆದರೆ ಒಂದೇ ಒಂದು ಕಾಫಿ ಕುಡಿಸಿ ನೋಡಿ. ಅಸಾಧ್ಯದ ಮಾತು.ಅಷ್ಟರ ಮಟ್ಟಿಗೆ ನಿಷ್ಕಳಂಕ ಸೇವೆ ಸಲ್ಲಿಸುವ ಸಂಸ್ಥೆ ಅದು. ಅವರೂ ಬೆಂಗಳೂರಿನಲ್ಲಿಯೇ ಇರುವುದು. ಎಲ್ಲರಂತೆಯೇ ಅವರಿಗೂ ಹೆಂಡತಿ, ಮಕ್ಕಳು, ಅವರ ವಿದ್ಯಾಭ್ಯಾಸ, ಮನೆ, ಇತ್ಯಾದಿ. ಆದರೂ ಲಂಚಕ್ಕೆ ಕೈ ಒಡ್ಡುವುದಿಲ್ಲವೆಂದರೆ ಅದು ಅವರ ಮನಸ್ಥಿತಿ. ಅವರಿಗೊಂದು ಸಲಾಂ. ಇಡೀ ಕರ್ನಾಟಕ ಸಕಾರಿ ನೌಕರರಲ್ಲಿ ನೂರಕ್ಕೆ ನೂರರಷ್ಟು ಲಂಚಮುಕ್ತ ಕಚೇರಿ ಎಂದರೆ ಎ.ಜಿ.ಸ ಒಂದೆ.
ಅAದಿನ ಕಾರ್ಯಕ್ರಮದ ಮೂಲ ಆಶಯವೇ ಭ್ರಷ್ಟಾಚಾರ ನಿಮೂರ್ಲನೆ. ಇದು ಸಾಧ್ಯವೇ? ನೂರಕ್ಕೆ ನೂರರಷ್ಟು ಸಾಧ್ಯ. ಆದರೆ ಇಚ್ಛಾಶಕ್ತಿ ಬೇಕು. ಲಕ್ಕವಿಲ್ಲದೆ ಹಣ ಹೇಗೆ ಪಡೆಯುತ್ತಾರೆ ಎನ್ನುವುದು ಬಹುತೇಕರಿಗೆ ತಿಳಿದಿದೆ. ಆದರೆ ಅದರ ನಿಯಂತ್ರಣಕ್ಕೆ ಪ್ರಾಮಾಣಿಕ ದಕ್ಷ ಹಾಗೂ ತೀರಾ ವೇಗವಾಗಿ ಪ್ರತಿಕ್ರಿಯಿಸುವ ವ್ಯಕ್ತಿಗಳ ಅಗತ್ಯವಿದೆ. ಉದಾ: ಹರೀಶ್ಗೌಡ, ಮದನ್ಗೋಪಾಲ್, ಚಿರಂಜೀವಿ ಸಿಂಗ್, ಟೈಗರ್ ಅಶೋಕ್ ರಂತಹ ನೂರಾರು ನಿವೃತ್ತ ಅಧಿಕಾರಿಗಳಿದ್ದಾರೆ. ಅಂತಹವರ ಬಗ್ಗೆ ಜನರಲ್ಲಿ ವಿಶ್ವಾಸವಿದೆ. ಅವರನ್ನು ನೇಮಿಸಿ. ಅವರ ಫೋನ್ ನಂಬರ್ಗಳನ್ನು ಪ್ರತಿದಿನ ಪ್ರಕಟಿಸಿ. ಸಾಮಾನ್ಯ ಜನ ಯಾವ ಯಾವ ನೌಕರ ಇಲ್ಲವೇ ಅಧಿಕಾರಿ ಯಾವ ಯಾವ ಕೆಲಸಕ್ಕೆ ಎಷ್ಟು ವಸೂಲು ಮಾಡುತ್ತಾನೆ ಎನ್ನುವುದನ್ನುಉ ತಿಳಿಸುತ್ತಾರೆ. ಅಂತಹ ಲಂಚಕೋರರನ್ನು ನೇರವಾಗಿ ಸಂಪರ್ಕಿಸಿ ಚಳಿ ಬಿಡಿಸುವ ಪ್ರಾಮಾಣಿಕ ಅಧಿಕಾರಿಗಳು ಕ್ಷಣ ಕ್ಷಣಕಕ್ಕೂ ಬೆನ್ನು ಹತ್ತುತ್ತಾರೆ. ಇಷ್ಟಾದ ಮೇಲೂ ಲಂಚ ಪಡೆಯುವುದು ಸಾಧ್ಯವೇ? ಆದರೆ ಮಾಡಬೇಕಾದವರು ಯಾರು? ರಾಷ್ಟçಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ. ಅಂತಹ ದಿನವನ್ನು ನಿರೀಕ್ಷಿಸಬಹುದೇ?
Sunday, November 24, 2024
ಬೆಂಬಿಡದೆ ಕಾಡುವ ಕರ್ಮಫಲ:-
ಮಹಾಭಾರತದಲ್ಲಿ ಎಷ್ಟೊ ಯೋಧರು ನಿಸ್ವಾರ್ಥದಿಂದ, ಲೋಕಕಲ್ಯಾಣಕ್ಕಾಗಿ ಒಳ್ಳೆಯದು ಮಾಡಿ, ಧರ್ಮದಿಂದ, ವೀರ ಮರಣವನ್ನು ಹೊಂದಿರುತ್ತಾರೆ. ಅಂಥವರಲ್ಲಿ, ಧರ್ಮದ ಒಳಿತಿಗಾಗಿ, ಹಸ್ತಿನಾಪುರದ ರಕ್ಷಣೆಗಾಗಿ, ಆಜನ್ಮ ಬ್ರಹ್ಮಚಾರಿ, ಸೋಲಿಲ್ಲದ ಸರದಾರ, ಇಚ್ಛಾಮರಣಿ, ಪರಾಕ್ರಮಿ, ಅಜೇಯರೆ ನಿಸಿಕೊಂಡ ಮೊದಲಿಗರು ಕುರುವಂಶದ ಪಿತಾಮಹ, ಗಂಗಾ ಪುತ್ರ ಭೀಷ್ಮರು ಸಿಂಹಾಸನಕ್ಕಾಗಲಿ, ಅಧಿಕಾರಕ್ಕಾಗಲೀ, ಆಸೆಪಡದೆ, ಕೊಟ್ಟ ಮಾತಿಗೆ ತಪ್ಪದಂತೆ ಕುರುವಂಶದ ಉನ್ನತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ, ಹಸ್ತಿನಾಪುರದ ರಕ್ಷಣೆ ಮಾಡುವ ಪಣತೊಟ್ಟು, ಹೋರಾಡಿ ಕೊನೆಗೆ ರಕ್ತಸಿಕ್ತ ದೇಹದ, ಬಾಣಗಳ ಹಾಸಿಗೆ ಮೇಲೆ ೫೮ ದಿನಗಳ ಯಾತನೆ, ನೋವುಗಳನ್ನು ಸಹಿಸಿಕೊಂಡು ಇಚ್ಛಾಮರಣವನ್ನು ಪಡೆದ ಪಿತಾಮಹ ಭೀಷ್ಮರು.
ಪಿತಾಮಹ ಭೀಷ್ಮರು ಮಾಡಿದ ಪಾಪ ಪುಣ್ಯಗಳನ್ನು ಲೆಕ್ಕ ಹಾಕಿದರೆ ಪಾಪಗಳ ಲೆಕ್ಕ ಹುಡುಕಿದರೂ ಒಂದೇ ಒಂದು ಸಿಗುವುದಿಲ್ಲ. ಪುಣ್ಯ ಹಾಗೂ ಧರ್ಮ ಮಾರ್ಗದಲ್ಲಿ ನಡೆದು ಎಲ್ಲರಿಗೂ ಒಳಿತನ್ನೇ ಬಯಸುತ್ತಿದ್ದು, ಅಪಾರ ಪುಣ್ಯ ಕೆಲಸಗಳನ್ನು ಮಾಡಿದ ಭೀಷ್ಮರಿಗೆ ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸುವ ಶಿಕ್ಷೆ ಯಾಕೆ ಬಂದಿತು ಎಂಬ ಪ್ರಶ್ನೆಗೆ ಕೃಷ್ಣನೇ ಉತ್ತರ ಕೊಟ್ಟಿದ್ದಾನೆ.
ಮಹಾಭಾರತದ ಯುದ್ಧದ ಸಮಯದಲ್ಲಿ ಅಧರ್ಮದ ಪಕ್ಷ ಎಂದು ಗೊತ್ತಿದ್ದರೂ ಅವರ ಪರವಾಗಿ ನಿಂತ ಪಿತಾಮಹ ಭೀಷ್ಮರು ವೀರಾವೇಶದಿಂದ ಹೋರಾಡಿ ಯುದ್ಧವನ್ನು ಮಾಡಿದರು. ಕೊನೆಗೆ ಶಿಖಂಡಿ ಎದುರು ಬಂದಾಗ ಕತ್ತಿಯನ್ನು ಬಿಟ್ಟು ನಿಶಸ್ತ್ರರಾಗಿ ನಿಂತಾಗ ಅರ್ಜುನನು ಬಹಳ ದುಃಖದಿಂದ ಕರ್ತವ್ಯ ಪಾಲಿಸುವ ಸಲುವಾಗಿ ತನ್ನ ಬಾಣಗಳಿಂದ ಪಿತಾಮಹರನ್ನು ಹೊಡೆದು ಕೆಳಗೆ ಬೀಳಿಸಿದ. ನಂತರ ಪಿತಾಮಹರ ಆಸೆಯಂತೆ, ದಕ್ಷಿಣಾಯನ ಮುಗಿದು ಉತ್ತರಾಯಣ ಪುಣ್ಯಕಾಲ ಬಂದ ಮೇಲೆ ಪ್ರಾಣೋತ್ಕ್ರ್ ಕ್ರಮಣ ಮಾಡುವೆ ಎಂಬ ಭೀಷ್ಮರ ಮಾತಿನಂತೆ ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದನು. ಉತ್ತರಾಯಣ ಬರಲು ೫೮ ದಿನಗಳ ಕಾಲ ಬಾಣಗಳ ಹಾಸಿಗೆಯ ಮೇಲೆ ನೋವು ಹಾಗೂ ಯಾತನೆಯನ್ನು ಅನುಭವಿಸಿದರು.
ಬಾಣಗಳ ಹಾಸಿಗೆಯ ಮೇಲೆ ಮಲಗಿದ ಪಿತಾಮಹರನ್ನು ಉಪಚರಿಸಲು ದೇಶದ ಮೂಲೆ ಮೂಲೆಯಿಂದ ವೈದ್ಯ ಪಂಡಿತರುಗಳನ್ನು ಕರೆಸುತ್ತಿದ್ದರು. ಆದರೆ ಅವೆಲ್ಲವನ್ನು ನಿರಾಕರಿಸಿದರು. ಉಳಿದ ಸಮಯದಲ್ಲಿ ಅವರನ್ನು ಕಂಡು ಮಾತನಾಡಿಸಿ ಆಶೀರ್ವಾದ ಪಡೆಯಲು ನೂರಾರು ಜನ ನಿತ್ಯವೂ ಬರುತ್ತಿದ್ದರು. ಎಲ್ಲರೊಂದಿಗೆ ಸಂತೋಷದಿಂದ ಮಾತನಾಡಿದ ಭೀಷ್ಮ ಪಿತಾಮಹರಿಗೆ ಚಿಂತೆಯೊಂದು ಕಾಡುತ್ತಿತ್ತು. ಇಚ್ಛಾಮರಣಿಯಾದ ನಾನು ಯಾವಾಗ ಬೇಕಾದರೂ ದೇಹತ್ಯಾಗ ಮಾಡಬಹುದಿತ್ತು. ಆದರೆ ಹೀಗೇಕೆ ಬಾಣಗಳ ಹಾಸಿಗೆಯ ಮೇಲೆ ಮಲಗಿ ನೋವನ್ನು ಅನುಭವಿಸುವಂತಹ ಶಿಕ್ಷೆ ನನಗೇಕೆ ಬಂದಿತು ಎಂದುಕೊಳ್ಳುತ್ತಿದ್ದ ಭೀಷ್ಮರ ಬಳಿ ಒಂದು ದಿನ ಶ್ರೀಕೃಷ್ಣ ಬಂದನು.
ಶ್ರೀಕೃಷ್ಣನು ಬಂದಾಗ ಅವರ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಕೃಷ್ಣನ ಬಳಿ ಕೇಳಿದರು. ಹೇ ವಾಸುದೇವ, ನನಗೆ ನೆನಪಿರುವಂತೆ ನನ್ನ ಹಿಂದಿನ ಹತ್ತು ಜನ್ಮಗಳನ್ನು ನೋಡಿದಾಗ ಆ ಹತ್ತು ಜನ್ಮದಲ್ಲೂ ಒಂದೇ ಒಂದು ಪಾಪ ಕಾರ್ಯವನ್ನು ಮಾಡಿಲ್ಲ ಹೀಗಿರುವಾಗ ಇಚ್ಛಾಮರಣಿಯಾದ ನಾನು ಸಾಯುವ ಸಮಯದಲ್ಲಿ ಬಾಣಗಳ ಹಾಸಿಗೆಮೇಲೆ ಮಲಗಿ ಯಾತನೆ ಹಾಗೂ ಆಗುವ ನೋವನ್ನು ಸಹಿಸಿಕೊಳ್ಳುವಂಥ ಶಿಕ್ಷೆ ನನಗೇಕೆ ಬಂದಿದೆ ಎಂದು ನೊಂದು ಕೇಳಿದರು. ಮುಗುಳ್ನಗುತ್ತಾ ಕೃಷ್ಣನು, ಪಿತಾಮಹ ನಿಮಗೆ ನೆನಪಿರುವಂತೆ ಹತ್ತು ಜನ್ಮಗಳಲ್ಲಿ ನೀವು ಒಂದೇ ಒಂದು ಪಾಪವನ್ನು ಮಾಡಿಲ್ಲ. ಆದರೆ ನಿಮಗೆ ಗೊತ್ತಿರದ ೧೦ ಜನ್ಮದ ಹಿಂದಿನ ಹನ್ನೊಂದನೇ ಜನ್ಮದಲ್ಲಿ ನೀವೊಬ್ಬ ರಾಜರಾಗಿದ್ದೀರಿ. ನೀವು ಶಿಕಾರಿ ಪ್ರಿಯರು ಆಗಿದ್ದಿರಿ ನಿಮ್ಮ ಹೆಚ್ಚಿನ ಸಮಯವನ್ನು ಕಾಡಿನಲ್ಲಿ ಬೇಟೆಯಾಡುವುದರಲ್ಲಿ ಕಳೆಯುತ್ತಿದ್ದಿರಿ. ಒಂದು ದಿನ ಬೇಟೆಯಾಡಲು ಹೋಗುತ್ತಿದ್ದಾಗ ನಿಮಗೆ ಅಡ್ಡವಾಗಿ ಒಂದು ಸರ್ಪ ಬರುತ್ತದೆ ಹೀಗೆ ಅಡ್ಡಬಂದ ಸರ್ಪವನ್ನು ಯಾವ ಯೋಚನೆಯನ್ನೂ ಮಾಡದೆ ಎತ್ತಿ ಅದನ್ನು ಒಂದು ಬದಿಗೆ ಬಿಸಾಡಿದಿರಿ.
ಹಾಗೆ ಬಿಸಾಕಿದ ಸರ್ಪವು ಮುಳ್ಳುಗಳಿರುವ ಪೊದೆಗಳ ಮೇಲೆ ಬಿತ್ತು. ಅದು ಮುಳ್ಳಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟು ಪೊದೆಗಳಲ್ಲಿದ್ದ ಮುಳ್ಳುಗಳು ಚುಚ್ಚಿ ನೋವಾಗುತ್ತಿತ್ತು.
ಈ ರೀತಿಯಾಗಿ ಅದಕ್ಕೆ ಮುಳ್ಳಿನಿಂದ ಚುಚ್ಚಿ ಯಾತನೆ ಯಾಗುತ್ತಿದ್ದಾಗ ಪರಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿತ್ತು. ಹೇ ಪರಮೇಶ್ವರ ನನ್ನ ನೋವಿಗೆ ಕಾರಣವಾದ ರಾಜನು ಸಹ ನನ್ನ ಹಾಗೆ ಮುಳ್ಳುಗಳಿಂದ ಚುಚ್ಚಿಸಿಕೊಂಡು ಯಾತನೆ ಅನುಭವಿಸುವಂತಾಗಲಿ ಎಂದು ಬೇಡುತ್ತಿತ್ತು.
ಹೀಗೆ ಪರಶಿವನನ್ನು ಪ್ರಾರ್ಥಿಸುತ್ತಲೇ ಯಾತನೆ ಅನುಭವಿಸುತ್ತಾ ೧೮ ದಿನಗಳ ಕಾಲ ಕಳೆದ ಮೇಲೆ ಪ್ರಾಣಬಿಟ್ಟಿತು.
ಕೃಷ್ಣನಿಂದ ಈ ಕಥೆ ಕೇಳಿದ ಪಿತಾಮಹರು ಹತ್ತು ವರ್ಷಗಳ ಹಿಂದಿನ ಪಾಪ ಸುಳ್ಳೋ, ನಿಜವೋ, ಎಂಬ ಅನುಮಾನದಿಂದ ಕೃಷ್ಣನನ್ನು ನೋಡುತ್ತಾ ಕೇಳಿದರು. ವಾಸುದೇವ ಹತ್ತು ಜನ್ಮಗಳ ಹಿಂದಿನ ಶಾಪ ಅಂದರೆ ಶಿಕ್ಷೆಯಾದ ಮುಂದಿನ ಜನ್ಮದಲ್ಲೇ ಈ ಶಿಕ್ಷೆಯನ್ನು ಅನುಭವಿಸಬೇಕಿತ್ತು. ಹತ್ತು ಜನ್ಮಗಳ ನಂತರ ಅನುಭವಿಸುವುದು ಎಂದರೆ ಹೇಗೆ ಎಂದು ಕೇಳಿದರು.
ಪಿತಾಮಹ ಮುಂದಿನ ಹತ್ತು ವರ್ಷದಲ್ಲಿ ಪಾಪದ ಕೊಡ ತುಂಬುವಂಥ ಒಂದೇ ಒಂದು ಪಾಪದ ಕೆಲಸವನ್ನು ನೀವು ಮಾಡಲಿಲ್ಲ. ಹೀಗಾಗಿ ನೀವು ಪುಣ್ಯ ಜೀವಿಗಳು ಆದಿರಿ. ಹಾಗಾಗಿ ಅದೆಲ್ಲ ಈ ಜನ್ಮದಲ್ಲಿ ನಿಮಗೆ ಸಿಕ್ಕಿತು.
ಮತ್ತೂ ಆಶ್ಚರ್ಯದಿಂದ ಭೀಷ್ಮರು, ಹೇ ವಾಸುದೇವ ಈ ಜನ್ಮದಲ್ಲಿ ನನಗೆ ನೆನಪಿರುವಂತೆ ಒಂದೇ ಒಂದು ಅಪರಾಧವನ್ನು ನಾನು ಮಾಡಿಲ್ಲ ಧರ್ಮಮಾರ್ಗದಲ್ಲಿ ನಡೆದಿದ್ದೇನೆ. ಅದಕ್ಕೆ ಕೃಷ್ಣನು ಪಿತಾಮಹ ಯಾಕೆ ಪಾಪ ಮಾಡಿಲ್ಲವೇ? ನೆನಪಿಸಿಕೊಳ್ಳಿ ಹಸ್ತಿನಾಪುರದ ಅಧರ್ಮಿ ರಾಜನ ಪರ ನಿಂತು, ಸಿಂಹಾಸನವನ್ನು ಕೊನೆ ಉಸಿರಿರುವರೆಗೂ ರಕ್ಷಿಸುತ್ತೇನೆ ಎಂದು ಮಾತುಕೊಟ್ಟು, ಅಧರ್ಮಕ್ಕೆ ಟೊಂಕಕಟ್ಟಿ ನಿಲ್ಲಲಿಲ್ಲವೇ? ತುಂಬಿದ ಸಭೆಯಲ್ಲಿ ಕುಲವಧುವಿನ ಮಾನ ಹೋಗುತ್ತಿದ್ದರೂ ಅದನ್ನು ತಡೆಯದೆ ಸಹಿಸಲಿಲ್ಲವೇ?
ಅಧರ್ಮಿಗಳಾದ ದುರ್ಯೋಧನ, ಅವನ ಅಪ್ಪ ದೃತರಾಷ್ಟ್ರ ಮಾಡುವ ಅಧರ್ಮವನ್ನು ಕಂಡು ಕಾಣದಂತೆ ಅವರ ಪಕ್ಷದಲ್ಲಿ ನಿಂತು ಹಸ್ತಿನಾಪುರದ ಸಿಂಹಾಸನವನ್ನು ರಕ್ಷಿಸುತ್ತೇನೆ ಎಂದು ಮಾತು ಕೊಟ್ಟಿರಿ. ಅವರಿಗೆ ಬೆಂಬಲವಾಗಿ ನಿಂತು ಧರ್ಮದ ವಿರುದ್ಧ ಹೋರಾಟಕ್ಕೆ ಇಳಿದಿರಿ.
ಅದೆಷ್ಟು ಅಮಾಯಕರನ್ನು ಅಧರ್ಮದ ಪರವಾಗಿ ನಿಂತು ಕೊಂದುಹಾಕಿದಿರಿ.
ನಿಮ್ಮ ಪಾಪದ ಕೊಡ ತುಂಬಲು ಇಷ್ಟು ಸಾಲದೇ ಎಂದು ಕೇಳಿದನು.
ಪಶ್ಚಾತಾಪದಿಂದ ಕಣ್ಣೀರು ಹರಿಸುತ್ತ ಎಲ್ಲವನ್ನೂ ಕೇಳಿಸಿಕೊಳ್ಳುವ ವೇಳೆಗೆ ಅವರ ಪಾಪದ ಶಿಕ್ಷೆಗಳÀÄ ಮುಗಿದಿತ್ತು ಅವರ ಮುಖದಲ್ಲಿ ತೇಜಸ್ಸು ಮಾಘಮಾಸದ ಶುಕ್ಲ ಪಕ್ಷ ಉತ್ತರಾಯಣದ ಸೂರ್ಯನು ಬಂದಿದ್ದ. ಸಾಕ್ಷಾತ್ ಭಗವಂತನಾದ ಶ್ರೀಕೃಷ್ಣನ ದರ್ಶನ ಭಾಗ್ಯದಿಂದ. ಅವಶೇಷದ ಪಾಪಗಳೆಲ್ಲವು ಸುಟ್ಟು ಭಸ್ಮವಾಯಿತು. ಭಗವಂತನನ್ನು ಕಣ್ತುಂಬಾ ನೋಡುತ್ತಾ ಇಚ್ಛಾಮರಣಿಯಾದ ಭೀಷ್ಮರು ಪ್ರಾಣೋತ್ಕ್ರಮಣಗೈದು ಪರಮಾತ್ಮನ ಸಾನಿಧ್ಯವಾದ ವೈಕುಂಟಕ್ಕೆ ಹೋದರು.
ಯತೇಂದ್ರಿಯ ಮನೋ ಬುದ್ದಿ, ಮುನಿರ್ಮೋಕ್ಷ ಪರಾಯಣ!
ವಿಗತೇಚ್ಚಾಭಯ ಕ್ರೋದ, ಯ ಸದಾ ಮುಕ್ತ ಏವ ಸಹ!
ಇಂದ್ರಿಯಗಳನ್ನೂ ಮನಸ್ಸು ಮತ್ತು ಬುದ್ಧಿಯನ್ನೂ ಯಾವಾಗಲೂ ತನ್ನ ವಶದಲ್ಲಿಟ್ಟುಕೊಂಡು, ಮೋಕ್ಷವನ್ನೇ ತನ್ನ ಪರಮ ಗುರಿಯನ್ನಾಗಿ ಮಾಡಿಕೊಂಡು ಬಯಕೆ, ಭಯ ಮತ್ತು ಕ್ರೋಧಗಳಿಂದ ಬಿಡುಗಡೆ ಹೊಂದಿರುವ ಆ ಮುನಿಯು. ಮೋಕ್ಷವನ್ನು ಪಡೆಯುತ್ತಾನೆ.