Sunday, February 18, 2024

Is sugar a type of poison?

ಸಕ್ಕರೆ ಒಂದು ಪ್ರಕಾರದ ವಿಷ


 ೧. ಸಕ್ಕರೆ ಒಂದು ಪ್ರಕಾರದ ವಿಷ. ಇದು ಅನೇಕ ಪ್ರಕಾರದ ರೋಗ, ರುಜಿನಗಳನ್ನು ನಿರ್ಮಾಣ ಮಾಡುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುತ್ತಾರೆ. 

ಇದು ಹೇಗೆ, ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. 

೨. ಸಕ್ಕರೆ ತಯಾರಿಸುವ ಪ್ರಕ್ರಿಯೆ (ಠಿಡಿoಛಿess) ಯಲ್ಲಿ ಸರ್ವಾಧಿಕ ಪ್ಪಮಾಣದಲ್ಲಿ ಗಂಧಕ (suಟಠಿhuಡಿ) ಉಪಯೋಗಿಸುತ್ತಾರೆ. 

ಗಂಧಕ ಎಂದರೇನು? 

೩. ಇದು ಬಾಂಬ್ ತಯಾರಿಸಲು ಅಥವಾ ಸಿಡಿಮದ್ದು, ಪಟಾಕಿ ತಯಾರಿಸಲು ಉಪಯೋಗಿಸುವ ರಾಸಾಯನಿಕ ಪದಾರ್ಥ (ಛಿhemiಛಿಚಿಟ). ಈ ಗಂಧಕ ಅತ್ಯಂತ ಜಡ ಪದಾಥ೯. ಇದು ಒಮ್ಮೆ ಶರೀರದೊಳಗೆ ಹೋದರೆ, ಶರೀರದಿಂದ ಹೊರಬೀಳುವುದಿಲ್ಲ. 

೪. ಸಕ್ಕರೆಯಿಂದಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಹೆಚ್ಚುವುದರಿಂದ ಹೃದಯಾಘಾತ (sಣಡಿoಞe) ಆಗುತ್ತದೆ. 

೫. ದೇಹದಲ್ಲಿ ತೂಕ ಹೆಚ್ಚಲು ಕಾರಣಕೂಡ ಸಕ್ಕರೆ. 

೬. ದೇಹದಲ್ಲಿ ರಕ್ತದೊತ್ತಡಕ್ಕೆ (ಃ.P) ಕಾರಣ ಸಕ್ಕರೆ. 

೭. ಸಕ್ಕರೆಯಿಂದಾಗಿ ಮೆದುಳಿಗೆ ಸ್ಟ್ರೋಕ್ ಹೊಡೆಯುತ್ತದೆ. 

೮. ಸಕ್ಕರಯಿಂದಾಗಿ ಪಚನ ಶಕ್ತಿ ಕುಂದುತ್ತದೆ. 

೯. ಸಕ್ಕರೆ ತಯಾರಿಸುವಾಗ ೨೩ ಹಾನಿಕಾರಕ ರಸಾಯನಗಳ ಉಪಯೋಗ ಆಗುತ್ತದೆ. 

೧೦. ಸಕ್ಕರೆಯು ಛಿಚಿಟಿಛಿeಡಿ ಕಾರಕ. ಅಚಿಟಿಛಿeಡಿನ ಜೀವಾಣುಗಳು ಸಕ್ಕರೆ ಇಲ್ಲದೆ ಇರಲಾರವು ಎಂದು ಪ್ರಖ್ಯಾತ ತಜ್ಞರು ಕಂಡುಕೊಂಡಿದ್ದಾರೆ. 

೧೧. ಮನುಶ್ಯನಿಗೆ ಡಯಾಬಿಟೀಸ್ ಕಾಯಿಲೆಗೆ ಕಾರಣವೇ ಸಕ್ಕರೆ. 

೧೨. ಎಸಿಡಿಟಿ, ಹೈಪರ್ ಎಸಿಡಿಟಿ, ಹೊಟ್ಟೆಯಲ್ಲಿ ಉರಿ ಇತ್ಯಾದಿಗಳಿಗೆ ಒಂದು ಮುಖ್ಯ ಕಾರಣ ಸಕ್ಕರೆ. 

೧೩. ರಕ್ತದಲ್ಲಿ ಟ್ರೆöÊಗ್ಲಿಸರಿನ್ ಹೆಚ್ಚಲು ಕಾರಣ ಸಕ್ಕರೆ. 

೧೪. ಸಕ್ಕರೆಯ ಕೆಟ್ಟ ಪರಿಣಾಮಗಳಿಂದಾಗಿ ಪಾರ್ಶ್ವವಾಯು, ಪೆರಲಿಸಿಸ್ ಆಗಲು ಒಂದು ಮುಖ್ಯ ಕಾರಣ. 

೧೫. ಒಟ್ಟಾರೆ ಹೇಳುವುದಾದರೆ, ಸಕ್ಕರೆಯು ಕಾಯಿಲೆಗಳ ಉದ್ಭವ ಮತ್ತು ಉಲ್ಭಣಕ್ಕೆ ಮೂಲ. 

ಆತ್ಮೀಯರೇ, ನಿಮ್ಮಲ್ಲೊಂದು ಕಳಕಳಿಯ ವಿನಂತಿ. ಸಕ್ಕರೆ ಎಂಬ ನಿದಾನ ವಿಷ (sಟoತಿ ಠಿoisoಟಿ) ನಿಂದ ದೂರವಿದ್ದು, ನಮ್ಮ ಪೂರ್ವಜರಂತೆ ಬೆಲ್ಲದ ಉಪಯೋಗಕ್ಕೆ ಪರಿವರ್ತಿಸಿರಿ. ರೋಗ ಮುಕ್ತ ಜೀವನ ನಮ್ಮ, ನಿಮ್ಮೆಲ್ಲರದ್ದಾಗುವುದು. 

ಈ ಮಾಹಿತಿಯನ್ನು ನಿಮ್ಮ ಬಂದುಗಳಿಗೆ, ಮಿತ್ರರಿಗೆ, ಪರಿಚಯಸ್ಥರಿಗೆ, ಸಾದ್ಯವಾದಷ್ಟು ತಿಳಿಸಿ. ಯಾರಿಗಾದರೂ ಸಹಾಯ ಆಗುವುದಕ್ಕೆ ಸಹಕಾರ ಮಾಡಿದಂತಾಗಲಿ.

Friday, February 16, 2024

Srimad Bhagavad Gita

ಶ್ರೀಮದ್ಭಗವದ್ಗೀತೆ - ಹತ್ತನೇ  ಅಧ್ಯಾಯ ಶ್ಲೋಕ 6


ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ ।

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ॥೬॥

ಮೊದಲ ಮನ್ವಂತರದ ಏಳು ಮಂದಿ ಮಹರ್ಷಿಗಳು [ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ ], ಮೊದಲ ನಾಲ್ವರು ಮನುಗಳು [ಸ್ವಾಯಂಭುವ, ಸ್ವಾರೋಚಿಷ, ಉತ್ತಮ ಮತ್ತು ರೈವತ], ಚತುರ್ಮುಖನ ಮಾನಸ ಪುತ್ರರಾದ ಇವರು ನನ್ನಿಂದಲೆ ಆದವರು.[ನಾಲ್ಕು ವರ್ಣಗಳ ನಿಯಾಮಕರಾಗಿ ನಾಲ್ಕು ಪಂಗಡದಲ್ಲಿ ಸೇರಿದ, ವಿಶೇಷ ಅರಿವಿನ ಕಾರಣ ‘ಮನು’ಗಳೆನಿಸಿದ ಎಲ್ಲ ದೇವತೆಗಳು ನನ್ನಿಂದಲೆ ಆದವರು; ನನ್ನ ಇಚ್ಛೆಯಿಂದಲೆ ಹುಟ್ಟಿ ಬಂದವರು.] ವಿಶ್ವದ ಈ ಜನರೆಲ್ಲ ಅವರದೇ ಸಂತತಿ.

ವಿಶ್ವಸೃಷ್ಟಿಯ ರಹಸ್ಯವನ್ನು ಬ್ರಹ್ಮಜ್ಞಾನಿಗಳಾದ ಮಹರ್ಷಿಗಳು ಹೊರಹಾಕಿರುವುದನ್ನು ನಾವೆಲ್ಲರೂ ಮನುಕುಲದವರಾಗಿದ್ದು ತಿಳಿದು ಭೂಮಿಗೆ ಬಂದಿರುವ ಉದ್ದೇಶವನರಿತು ನಡೆಯುವಾಗ ಅದ್ವೈತ  ಎಲ್ಲೆಡೆಯೂ ಇದೆ ಆದರೆ ಆ ಮೂಲ ಸತ್ಯ ಧರ್ಮ ಇಲ್ಲದೆ  ಹೊರಗಿನ ವಿಜ್ಞಾನ ಜಗತ್ತು ಬೆಳೆಯುತ್ತಿದೆ. ಆಕಾಶದೆತ್ತರ ಹರಡಿರುವ ಸತ್ಯ ಭೂಮಿಯಲ್ಲಿಲ್ಲದೆ ಮನುಕುಲ ಸತ್ಯದ ಹುಡುಕಾಟಕ್ಕೆ ಮನೆಯಿಂದ ಹೊರಗೆ ಬಂದಿರೋದು  ದುರಂತವೆ ಆದರೂ ಮಹರ್ಷಿಗಳು  ಮನೆಯಿಂದ ದೂರವಿದ್ದರೂ ಅವರ ಮನಸ್ಸು ಪರಮಾತ್ಮನೆಡೆಗೆ  ಇದ್ದ ಕಾರಣ ಸತ್ಯದರ್ಶನ ಮಾಡಿಕೊಂಡರು.ಹೆಣ್ಣುಹೊನ್ನು ಮಣ್ಣಿನ ಋಣ ತೀರಿಸಲು ಮನಸ್ಸಿನ  ಶುದ್ದೀಕರಣ  ಅಗತ್ಯವಿದೆ ಎಂದರುಆಗಲೇ ಯೋಗಿ ಆಗುವುದು. ದೈಹಿಕವಾಗಿ ಸಬಲರಾದರೂ ಮಾನಸಿಕ ದುರ್ಭಲತೆಯಿಂದ  ಸ್ವಾವಲಂಬನೆ ಸ್ವತಂತ್ರ. ಜ್ಞಾನ, ಸ್ವಾಭಿಮಾನ ಆತ್ಮನಿರ್ಭರತೆಗೆ  ಕೊರತೆಯಾಗುತ್ತದೆನ್ನುವ ಕಾರಣಕ್ಕಾಗಿ ಮಹರ್ಷಿಗಳ ಆಹಾರ ವಿಹಾರವೂ ಕಟ್ಟುನಿಟ್ಟಾಗಿತ್ತು. ಇದನ್ನು ಭಗವದ್ಗೀತೆ ಬಹಳ ಚೆನ್ನಾಗಿ ತಿಳಿಸುತ್ತದೆ. ಏನನ್ನಾದರೂ ಸಾಧನೆ ಮಾಡಬೇಕಾದರೆ  ಜ್ಞಾನವೇ ಪ್ರಧಾನ. ಇದರಲ್ಲಿ ಸ್ವತಂತ್ರ ಜ್ಞಾನದಿಂದ  ಯೋಗಿಯಾದಾಗಲೇ ಪರಮಾತ್ಮನ ಸತ್ಯದರ್ಶನ. ಯಾರೋ ಯಾವುದೋ ಕಾಲದಲ್ಲಿ ಯಾವುದೋ ಪರಿಸ್ಥಿತಿಯಲ್ಲಿ  ಅರ್ಥ ಮಾಡಿಕೊಂಡಿರೋ ಸತ್ಯ ಇಂದಿಗೂನಮಗೆ ಅನ್ವಯಿಸುತ್ತದೆ ಎಂದಾಗ ಅದೇ ಸತ್ಯ.

ಕಾರಣ ಸತ್ಯ ಒಂದೇ. ಎಲ್ಲಾ ಕಾಲಕ್ಕೂ  ಅದು ಸ್ಥಿರ ವಾಗಿದೆ..ಪರಮಾತ್ಮನ  ಕಾಣೋದಕ್ಕೆ ಆ ಒಂದೇ ಅ ಸತ್ಯದ ಕಡೆಗೆ  ಮನಸ್ಸನ್ನು  ಹೊರಳಿಸಲು ಎಲ್ಲರಿಗೂ ಕಷ್ಟ.ಸತ್ಯ ಕೇಳಿ ತಿಳಿಯಬಹುದು.ಆದರೆ ಅದೇ ಸತ್ಯವನ್ನು ಪರಾಮರ್ಷಿಶಿ ಅರ್ಥ ಮಾಡಿಕೊಳ್ಳಲು  ಯೋಗಮಾರ್ಗದಲ್ಲಿ ನಡೆದವರನ್ನು ಮಹಾತ್ಮರೆಂದರು. ಈಗಲೂ ಇದ್ದಾರೆ ಆದರೆ ಸತ್ಯ ಕಾಣದ. ಕಾರಣ  ಅವರಿಗೆ ಯಾವ ರಾಜಕೀಯದ  ಅಗತ್ಯವಿಲ್ಲದೆ ಸ್ಥಿತಪ್ರಜ್ಞವಂತರಾಗಿ ತಮ್ಮ ನ್ನು ತಾವರಿತು  ಒಂಟಿಯಾಗಿದ್ದಾರೆ.  ದೇವನೊಬ್ಬನೆ ನಾಮ ಹಲವು ,ಹಲವು ನಾಮಗಳಲ್ಲಿರುವ. ಒಬ್ಬನೇ ದೇವರನ್ನು ಕಂಡವರು ವಿರಳ.

ಇದನ್ನು ಅಧ್ವೈತ ವೆಂದರು. ಭೂಮಿ ಒಂದೇ, ದೇಶ ಒಂದೇ,  ಎನ್ನುವ ಸಾಮಾನ್ಯ ಜ್ಞಾನ ಎಲ್ಲರಿಗೂ ತಿಳಿಸುವ ಅಗತ್ಯವಿಲ್ಲ ಆದರೂ  ಇದನ್ನು ಒಪ್ಪಿ ನಡೆಯೋ ಮಾನವರು ಎಲ್ಲರೂ ಆಗೋದಿಲ್ಲ.ಕಾರಣ ನಮ್ಮೊಳಗೇ ಅಡಗಿರುವ ದೇವಾಸುರ ಶಕ್ತಿಯ ನಡುವಿರುವ ಅಂತರದಲ್ಲಿ ಬೆಳೆದು ನಿಂತಿರುವ ಅರ್ಧ ಸತ್ಯದ ರಾಜಕೀಯದ ದಾಳದಲ್ಲಿ ಸಿಲುಕಿರುವ ಕಾಲಾಳುಗಳಿಗೆ ಗೊತ್ತಿಲ್ಲ. ನಮ್ಮಲ್ಲಿ ರಾಜನನ್ನೂ ಬದುಕಿಸುವ ಶಕ್ತಿ ಒಳಗಿದೆ ಎಂದು. ಹೀಗಾಗಿ ಅಧರ್ಮ ವನ್ನು  ನೋಡಿ ಯೂ ತನ್ನ ಮತದಾನವನ್ನು ದಾನವರಿಗೇ ದಾನ ಮಾಡಿ ನಂತರ  ಬೇಡೋ ಪರಿಸ್ಥಿತಿ ಬಂದಿದೆ. 

ಇದಕ್ಕೆ ಕಾರಣ ಅಜ್ಞಾನ.ಅಜ್ಞಾನಕ್ಕೆ ಕಾರಣ ಶಿಕ್ಷಣ. ಯಾರು ಶಿಕ್ಷಣ ನೀಡಿ ಜ್ಞಾನ ತುಂಬಬೇಕಿತ್ತೋ  ಅವರು  ನಮಗೇನೂ ಸಾಧ್ಯವಿಲ್ಲವೆಂದೋ ಅಥವಾ ರಾಜಕೀಯ ಬೇರೆ ಧರ್ಮ ಬೇರೆ ಎಂದೋ‌ನಿರ್ಲಕ್ಷಿಸಿ ಹೊರಗಿನ‌ವ್ಯವಹಾರಕ್ಕೆ ಧರ್ಮಕ್ಕೆ  ಸಹಕಾರ ಕೊಟ್ಟು  ಹಣಗಳಿಸಿದ್ದರೂ ಒಳಗೇ ಅಡಗಿದ್ದ ದೈವತ್ವಕ್ಕೆ  ಸರಿಯಾದ ಶಿಕ್ಷಣವಿಲ್ಲದ ದೇಹಕ್ಕೆ  ಆತ್ಮಜ್ಞಾನದ ಕೊರತೆ ಕಾಡುತ್ತಿದೆ.ಮನಸ್ಸೇ  ದಾರಿತಪ್ಪಿರುವಾಗ‌ ಅದನ್ನು ತಡೆಹಿಡಿದು ಯೋಗ ಮಾರ್ಗದಲ್ಲಿ ನಡೆಸುವುದೆ ಗುರು. 

ಗುರುವಿನ‌ಕೃಪಾಶಿರ್ವಾದವಿಲ್ಲದೆ ಏನೂ  ನಡೆಯದು.

ಅರಿವನ್ನು  ಹಣದಿಂದ ಖರೀದಿಸಿದರೆ  ತಾತ್ಕಾಲಿಕ ತೃಪ್ತಿ. ಹಾಗಾಗಿ ಮಾನವನೊಳಗೇ ಅಡಗಿರುವ ಶಾಶ್ವತವಾದ ಜ್ಞಾನವನ್ನು ಕಷ್ಟಪಟ್ಟು ಯೋಗ ಮಾರ್ಗದಿಂದ  ಗಳಿಸಿದವರು ಮಹರ್ಷಿಗಳು. ಇವರ ಸಂತಾನವೇ ನಾವೆಲ್ಲರೂ ಎಂದಾಗ  ಪರಮಾತ್ಮನ  ಅರಿವಿನೆಡೆಗೆ  ಹೋಗೋದಕ್ಕೆ ಒಳಗಿನ ಜ್ಞಾನವೇ ಬಂಡವಾಳ. ಬಂಡವಾಳವನ್ನು ಸುಶಿಕ್ಷಣ,ಸದ್ಗುರು, ಸತ್ಯ ಧರ್ಮ ದಿಂದ  ಮಾತ್ರ ಸಾಧ್ಯವೆಂದು ಸನಾತನ ಧರ್ಮ ತಿಳಿಸಿದೆ. ಇದರಲ್ಲಿ ರಾಜಕೀಯವಿರದೆ ರಾಜಯೋಗವಿದ್ದರೆ ಯೋಗ. ಇಲ್ಲವಾದರೆ ವೈಭೋಗದ ಜೀವನ.ವೈಭೋಗದಲ್ಲಿ ಸತ್ವ ಸತ್ಯ ತತ್ವಕ್ಕೆ ಬೆಲೆಯಿರದು.ಅದಕ್ಕಾಗಿ ಭ್ರಷ್ಟಾಚಾರದ ರೋಗ ಬೆಳೆದಿದೆ.

Sunday, February 11, 2024

Financial issues

ಲಕ್ಷಾಂತರ ಸಂಪಾದಿಸಿದರೂ ತೃಪ್ತಿ ಸಿಗದೆ ಸಮಸ್ಯೆಗಳು ಬೆಳೆದಿರುವುದು ಯಾಕೆ?



ಕೋಟಿ ವಿದ್ಯೆಗಿಂತ ಮೇಟಿವಿದ್ಯೆಯೇ ಮೇಲು ಎಂದಿದ್ದರು.

ಇಂದು ವಿದ್ಯೆ ಹಣಸಂಪಾದನೆಯ ಗುರಿ ಕಡೆಗೆ ತಂತ್ರದ ಕಡೆಗೆ ನಡೆದಿದೆ. ಇದಕ್ಕೆ ತಕ್ಕಂತೆ  ತಂತ್ರಜ್ಞಾನ ಬೆಳೆದಿದೆ. ತಂತ್ರ ಯಾವತ್ತೂ ಸತ್ಯವಿರದು.ಧರ್ಮ ರಕ್ಷಣೆಗೆ  ತಾತ್ಕಾಲಿಕ ಪರಿಹಾರ ತಂತ್ರವಿದ್ಯೆ ನೀಡಿದರೂ ಸ್ವತಂತ್ರ ಜ್ಞಾನವನ್ನು ಪಡೆಯಲಾಗದು. ಹೀಗಾಗಿ ಕಷ್ಟಪಟ್ಟು ನೂರು ರೂ ಸತ್ಕರ್ಮ ಸ್ವಧರ್ಮ ಸದಾಚಾರ ಸತ್ಯದಿಂದ ಗಳಿಸಿದರೆ ಸಿಗುವ ತೃಪ್ತಿ  ಪರರ ವಶದಲ್ಲಿ ‌ ಪರತಂತ್ರದಲ್ಲಿ ಪರದೇಶದಲ್ಲಿ ಲಕ್ಷ ಕೋಟಿ ಹಣ ಗಳಿಸಿದರೂ ಅದು ಪರಮಾತ್ಮನ ಕಡೆಗೆ ಮನಸ್ಸನ್ನು ಎಳೆಯಲಾಗದು.ಹೀಗಾಗಿ ಅತಿಯಾದ  ಹಣದ ಶ್ರೀಮಂತರ  ಊಟ ನಿದ್ರೆಗೂ ಬಡವನ ಊಟ ನಿದ್ರೆಗೂ ಅಂತರವಿದೆ.

ಬಡವನ ಹೊಟ್ಟೆಯ ಹಸಿವು  ಅನ್ನದಲ್ಲಿದ್ದರೆ ಶ್ರೀಮಂತ ನ ಹಸಿವು ಹಣದಲ್ಲಿರುತ್ತದೆ.ಎಷ್ಟು ದುಡಿದರೂ ತೃಪ್ತಿ ಸಿಗದೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವೂ ಇರದೆ ದುಂದುವೆಚ್ಚ ಮಾಡುವುದಲ್ಲದೆ ಅಡ್ಡದಾರಿಯಲ್ಲಿ ಭ್ರಷ್ಟಾಚಾರದಲ್ಲಿಯೇ  ಜೀವನ ಮುಗಿದಿರುತ್ತದೆ.ಇಂತಹವರ ಹಿಂದೆ ಬಡವ ನೆಡೆದರೆ‌ ಮುಗಿಯಿತು ಕಥೆ. ಭ್ರಷ್ಟಾಚಾರ ಹಂಚಿಕೊಂಡು ಇರುವ ಸುಖನಿದ್ರೆಯನ್ನೂ ಕಳೆದುಕೊಂಡು ತನ್ನೊಳಗೆ ಇದ್ದ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಸೋತು ಋಣಭಾರದಿಂದ ನರಳಬೇಕು.

ಇದೇ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು  ಜ್ಞಾನದಿಂದ ಹಣಸಂಪಾದಿಸಿ ತಮ್ಮ ಧರ್ಮ ಕರ್ಮ ಗಳಲ್ಲಿಯೇ ಪರಮಾತ್ಮನ ಸೇವೆ ಮಾಡುತ್ತಾ ಸಂಸಾರದ ಜೊತೆಗೆ ಸಮಾಜದ ಋಣವನ್ನು ತೀರಿಸುವವರಾಗಿ ಮುಕ್ತಿ ಮಾರ್ಗ ಹಿಡಿದಿದ್ದರು.ಈಗ ಪರದೇಶದ ವ್ಯಾಮೋಹದಲ್ಲಿ ಪರಮಾತ್ಮನ ಹೆಸರಿನಲ್ಲಿ ದೇಶಭ್ರಷ್ಟರಾದವರಿಗೆ ಸ್ವಾಗತಿಸುವ ವರಿಗೇ  ಹೆಚ್ಚಿನ ಬೆಲೆ ಎಂದರೆ ಅಜ್ಞಾನ ಮಿತಿಮೀರಿದೆ. ಇದಕ್ಕೆ ಕಾರಣವೇ ಮೂಲ ಶಿಕ್ಷಣ ನೀತಿ. 

ಮಕ್ಕಳಿಗೆ ಆಸ್ತಿ ಮಾಡಲು ಹಣಮಾಡುವ ಮೊದಲು ಮಕ್ಕಳನ್ನೇ ದೇಶದ  ಆಸ್ತಿ ಯಾಗಿಸುವ‌ಸಾತ್ವಿಕ ಶಿಕ್ಷಣ ಮನೆಮನೆಯೊಳಗೆ ‌ನೀಡಿದಾಗಲೇ ಹಿಂದಿನ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.ಹಾಗಂತ ಹಣ ಬೇಡವೆಂದಿಲ್ಲ ಅದರ ಸದ್ಬಳಕೆ ಸದ್ವಿನಿಯೋಗದ ಅಗತ್ಯವಿದೆ.ಹೊರಗಿನ ಕಾರ್ಯಕ್ರಮಕ್ಕೆ ಪ್ರತಿಮೆಗಳಿಗೆ ಸಮಾರಂಭ ಸಮಾವೇಷ,ವೇಷಭೂಷಣ,ನಾಟಕಗಳಿಗೆ ಬಳಸುವ  ಹಣವೂ ದೇಶದ ಸಾಲವೇ ಆಗಿದ್ದು ಜನಸಾಮಾನ್ಯರಿಗೆ  ಮೋಸ ಮಾಡಿಗಳಿಸಿದ್ದರೆ ಅದರಿಂದ ಆತ್ಮತೃಪ್ತಿ ಸಿಗೋದಿಲ್ಲ.ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮ ನಿಗೇ ಮೋಸ ಮಾಡಿದರೆ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗದು.ಇದನ್ನು ಮಹಾತ್ಮರುಗಳು ಹಿಂದೆಯೂ ಹೇಳಿದ್ದರು ಈಗ ಹೇಳುವವರು ಮಹಾತ್ಮರಂತೆ ನಡೆಯುವವರಿಲ್ಲದೆ  ಜನರು ದಾರಿತಪ್ಪಿದ್ದಾರೆ. ಹಿಂದೆ ಪರದೇಶಿ ಪದವನ್ನು ಬೈಗಳಕ್ಕೆ ಬಳಸಿದ್ದರು.ಈಗಿದು‌ ಪ್ರತಿಷ್ಠೆಯ ಪದವಾಗುತ್ತಿದೆ.ಇಷ್ಟೇ ವ್ಯತ್ಯಾಸ.

ಹಣದ ಶ್ರೀಮಂತಿಕೆಗೂ ಜ್ಞಾನದ ಶ್ರೀಮಂತಿಕೆಗೂ ವ್ಯತ್ಯಾಸ ವಿಷ್ಟೆ.ಹಣ ಕಣ್ಣಿಗೆ ಕಾಣುತ್ತದೆ ಅದರ ಹಿಂದೆ ಋಣವೂ ಇರುತ್ತದೆ ಕಾಣೋದಿಲ್ಲ.ಹಾಗೆ ಜ್ಞಾನ ಕಣ್ಣಿಗೆ ಕಾಣೋದಿಲ್ಲ ಹಿಂದೆ ಋಣ ತೀರುತ್ತಿರುತ್ತದೆ.

ಇದರಲ್ಲಿ  ಎರಡೂ ಮಾನವನ ಜೀವನಕ್ಕೆ ಮುಖ್ಯ. ಮೊದಲು ಜ್ಞಾನ ನಂತರ ಜ್ಞಾನದಿಂದ ಹಣ ಬಳಸಿದರೆ ಋಣ ಸಂದಾಯ.

 ಹಿಂದೆ ರಾಜಾಧಿರಾಜರ ಕಾಲದಲ್ಲಿದ್ದ  ಐಶ್ವರ್ಯ ಇಂದು ಕೆಲವೇ ಕೆಲವರ ಪಾಲಾಗಿದೆ.ಅಂದಿನ ರಾಜಪ್ರಭುತ್ವದಲ್ಲಿದ್ದ ಧರ್ಮ ಶಿಕ್ಷಣವೂ ಕೆಲವೇ ಕೆಲವರ ವಶದಲ್ಲಿದೆ. ಆದರೆ ಇದು ಸಮಾಜಕ್ಕೆ  ಯಾವ ಕೊಡುಗೆ ಕೊಟ್ಟಿದೆ? ಪ್ರಜಾಪ್ರಭುತ್ವ ದಲ್ಲಿ  ಎಲ್ಲರ ಸಹಕಾರವಿಲ್ಲದೆ ಏನೂ ನಡೆಯದು. ಹಾಗಂತ ಕಾಣದ ದೇವರ ಹೆಸರಿನಲ್ಲಿ ‌ ಕಾಣದ ಕೈಗಳು ಕೆಲಸ ಮಾಡಿದರೆ ಯಾರಿಗೂ ಕಾಣಿಸೋದಿಲ್ಲವೆಂದು ಹಣಗಳಿಸಿ ಶ್ರೀಮಂತ ರಾದರೆ  ಮೇಲಿರುವ  ಪರಮಾತ್ಮನೇ ಕಾಣೋದಿಲ್ಲ. ಇದೇ ಹಿಂದಿರುಗಿ ಬರೋವಾಗ  ಬಡತನದ ಅನುಭವಾಗೋದು.ಇಲ್ಲಿ  ತೃಪ್ತಿಯಿಲ್ಲದ ಜೀವನವೇ ನಿಜವಾದ ಬಡತನವಾಗಿದೆ. ಹಾಗಾದರೆ ತೃಪ್ತಿ ಹಣದಿಂದ ಖರೀದಿಸಬಹುದೆ? ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವೆ?

ವಿದ್ಯೆಗೂ ಜ್ಞಾನಕ್ಕೂ ವ್ಯತ್ಯಾಸವಿಲ್ಲವೆ? ವಿದ್ಯೆ ಹೊರಗಿನಿಂದ ಕಲಿತರೆ ಜ್ಞಾನ ಒಳಗಿನಿಂದ ಬೆಳೆಯುತ್ತದೆ. ಆದರೆ ಒಳಗಿರುವ ಜ್ಞಾನವೇ‌ಬೇರೆ ವಿದ್ಯೆಯೇ ಬೇರೆಯಾದಾಗಲೇ ಬಡತನ ಹೆಚ್ಚಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ  ಜ್ಞಾನದ ಶಿಕ್ಷಣದಿಂದ  ಮಹಾತ್ಮರಾಗಿಸಬಹುದೆ ಹೊರತು ಸಂಸ್ಕಾರವಿಲ್ಲದ ವಿದ್ಯೆಯಿಂದ ಹಣಗಳಿಸಿದರೂ ಆತ್ಮ ಕ್ಕೆ ತೃಪ್ತಿ ಸಿಗದು. ಇದೇ ಕಾರಣಕ್ಕಾಗಿ ಭಾರತೀಯರ ಸಮಸ್ಯೆ ಹೊರಗಿನಿಂದ ಒಳಗೆ ಹೆಚ್ಚಾಗಿ ಬೆಳೆಯುತ್ತಿದೆ. ಅದಕ್ಕೆ ಪರಿಹಾರವಾಗಿ ಹೊರಗಿನ ಸಾಲ ಬೆಳೆಯುತ್ತಿದೆ. ಸಾಲ ತೀರಿಸಲು ಮನೆ ಬಿಟ್ಟು ದೇಶ ಬಿಟ್ಟು ಮಕ್ಕಳು  ಯುವಕರು ಮಹಿಳೆಯರು ಹೊರಗೆ ಬರುತ್ತಿರುವುದರಿಂದ  ಯಾರಿಗೆ ಲಾಭ? ಯಾರಿಗೆ ನಷ್ಟ?

ಶ್ರೀಮಂತ ರು ಯಾರು? ಬಡತನ ಯಾವುದು? ಸರಳವಾಗಿದೆ ಉತ್ತರ‌ಇದನ್ನೇ ಮಹಾತ್ಮರುಗಳು ತಿಳಿದು ತಿಳಿಸಿರೋದು.

ಅಲ್ಲಿ ಯಾವ ಧರ್ಮ, ಜಾತಿ,ಪಕ್ಷ,ದೇವರಲ್ಲಿ ಬೇದವಿರಲಿಲ್ಲ.

ಇದನ್ನು ಅಪಾರ್ಥ ಮಾಡಿಕೊಂಡು ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ನಿಜವಾದ ಜ್ಞಾನವನ್ನು ಕೊಡದೆ  ದ್ವೇಷ ಬೆಳೆಸಿ  ಹಣದಿಂದ ಶ್ರೀಮಂತ ರಾದರು. ಈಗಲೂ ಇದು ರಾಜಾರೋಷವಾಗಿ ನಡೆದಿದ್ದರೂ ಜನರ ಕಣ್ಣಿಗೆ ಕಾಣೋದು  ಕೇವಲ ಹಣ ಮಾತ್ರ. ಯಾರದ್ದೋ ದುಡ್ಡು ಯಲ್ಲಮ್ಮ ನ ಜಾತ್ರೆ. ದೈವತ್ವ ಪಡೆಯಲು ಬೇಕಾದ ಶಿಕ್ಷಣ ಕೊಡುವುದರಿಂದ  ಮಾನವ ಮಹಾತ್ಮನಾಗಲು ಸಾಧ್ಯ.

ಹೊರಗಿನ‌  ಶಿಕ್ಷಣ ಹಣಕ್ಕಾಗಿ ಒಳಗಿನ ಶಿಕ್ಷಣ ಜ್ಞಾನಕ್ಕಾಗಿ‌

ಜ್ಞಾನದಿಂದ‌ ಗಳಿಸಿದ ಹಣದಿಂದ ಋಣ ತೀರುತ್ತದೆ ಎಂದಾಗ  ನಮ್ಮಲ್ಲಿ  ನಮ್ಮ ಜ್ಞಾನವಿದೆಯೆ?

ಯಾರದ್ದೋ ಜ್ಞಾನದಲ್ಲಿ ನಮ್ಮ ಋಣ ತೀರಿಸುತ್ತಿದ್ದೇವೆಯೆ?

ಹಿಂದೂ ಧರ್ಮ ನಿಂತಿರೋದೇ ಹಿಂದಿನ ಸಾತ್ವಿಕ ತಾತ್ವಿಕ ನೈತಿಕ ಶಿಕ್ಷಣದಲ್ಲಿ ಎಂದಾಗ ಹಿಂದೂ ಮಕ್ಕಳಿಗೆ  ನಮ್ಮ ದೇಶದಲ್ಲಿ ಎಂತಹ ಶಿಕ್ಷಣ  ಸಿಗುತ್ತಿದೆ? ಪ್ರತಿಯೊಬ್ಬರಲ್ಲಿಯೂ

ವಿಶೇಷ ಜ್ಞಾನವಿದೆ. ಗುರುತಿಸುವ ಗುರುವಿಲ್ಲದೆ ಗುರಿತಪ್ಪಿ ನಡೆದಿರೋದು ದುರಂತ. 

"ಕೃಷ್ಣಂವಂದೆ ಜಗದ್ಗುರುಂ" ಎಂದರು ಭಗವದ್ಗೀತೆಯ  ಯೋಗವನ್ನು  ಅಲ್ಲಗೆಳೆದರು. ಅಂದರೆ ಪರಮಸತ್ಯ ಧರ್ಮ ದಿಂದ ಮಾತ್ರ ಯೋಗಿಯಾಗಲು ಸಾಧ್ಯ. ಜ್ಞಾನಯೋಗಿ,ರಾಜಯೋಗಿ,ಭಕ್ತಿಯೋಗಿ,ಕರ್ಮಯೋಗಿ ಎಲ್ಲಾ  ಪರಮಾತ್ಮನೇ ‌ ಆದಾಗ ಬೇರೆ ಹೇಗಾದರು,?

ಶಿವನೇ ಶ್ರೇಷ್ಠ ವೆಂದವರು ಜೊತೆಗಿದ್ದ ಶಕ್ತಿಯನ್ನು ಮರೆತರು.

ಒಟ್ಟಿನಲ್ಲಿ ಭೂಮಿ  ಮೇಲಿದ್ದು ತಿಳಿಯಬೇಕಾದ ಸದ್ವಿಚಾರ ಬಿಟ್ಟು  ದುಷ್ಟರ ಭ್ರಷ್ಟರ ವಿಚಾರವೇ ಪ್ರಚಾರವಾದಾಗ ಬೆಳೆಯೋದು ಯಾರು?

ಮಾನವ ಏನನ್ನು ಕೇಳುವನೋ ಹೇಳುವನೋ ಮಾಡುವನೋ ನೋಡುವನೋ  ಅದೇ ಆಗಿರುವನು. ಇಲ್ಲಿ ಒಳ್ಳೆಯದಿದ್ದರೆ ಯೋಗವಾಗುತ್ತದೆ ಯೋಗ್ಯ ಜೀವನವಾಗಿರುತ್ತದೆ. ತುಂಬಾ ಕಷ್ಟವಿದೆ ಸತ್ಯ ದ ಹುಡುಕಾಟ ಕಾರಣ ಇದು ಒಳಗೇ ಅಡಗಿದೆ..ಹೊರಗಿಲ್ಲ.

"ನಿನ್ನಯ ಗುರಿಯು ಆತ್ಮದರುಶನ ನಿನ್ನೊಳಗೇ ಇದೆ ಆ ರತುನ..."

ಎಲ್ಲಾ ನಿನ್ನೊಳಗೇ ಅಡಗಿರುವಾಗ ಹೊರಗೆ ಹುಡುಕಿದರೆ ಸಿಗೋದು ಸತ್ಯವಲ್ಲ ಅಸತ್ಯ. ಆದರೂ ಜೀವನ ನಡೆಸಲು  ಪೂರ್ಣ ಸತ್ಯದಿಂದ ಕಷ್ಟ.ಅದರಲ್ಲೂ ಸಂಸಾರ ನಡೆಸಲು ಸಾಧ್ಯವೇ ಇಲ್ಲ.ಹಾಗಂತ  ಸಂಪೂರ್ಣ ಅಸತ್ಯ  ಜೀವನವಾಗಿರದು. 

ಮಾತಿಗಿಂತ ಕೃತಿಯೇ ಮೇಲೆಂದರು.ಕೃತಿಯ ಜೊತೆಗೆ ಪ್ರಕೃತಿ ಇದ್ದರೆ ಇತಿಮಿತಿಯಿರುತ್ತದೆ.ವಿಕೃತಿಯಿದ್ದರೆ  ಬಡತನ ಅತಿಯಾಗುತ್ತದೆ. ಪ್ರಕೃತಿ  ಉಚಿತವಾಗಿಯೇ ಎಲ್ಲವನ್ನೂ ಕೊಟ್ಟರೂ  ಅದನ್ನು ವಿಕೃತಿ ಮಾನವ ತನ್ನ ವಶಕ್ಕೆ ಬಳಸಿ ಸಂಸ್ಕೃತಿ ಮರೆತು ಹಣ ಮಾಡಿದರೆ  ಅದೇ ಮುಂದೆ ಮಾರಕವಾಗುತ್ತದೆ. ಜನನ ಮರಣದ ನಡುವಿನ ಜೀವನದ ರಹಸ್ಯವರಿತರೆ ತೃಪ್ತಿ ಸಿಗುವುದು.

ದೇವರು ಕೊಟ್ಟರೂ ಪೂಜಾರಿ ಬಿಡೋದಿಲ್ಲವೆಂದರೆ  ಏನರ್ಥ?

ಭ್ರಷ್ಟಾಚಾರ ವೆಂದು ತಿಳಿದವರೂ ಭ್ರಷ್ಟರ ಹಣಕ್ಕಾಗಿ ಸತ್ಯ ಧರ್ಮ ಮರೆತರೆ  ಬೇಲಿಯೇ ಎದ್ದು ಹೊಲಮೇಯ್ದಂತೆ.

ವಿನಾಶಕಾಲೇ ವಿಪರೀತ ಬುದ್ದಿ. ಕಲಿಯುವ ಕಾಲ ಕಲಿಗಾಲ.

ಉತ್ತಮವಾದದ್ದನ್ನು ಕಷ್ಟಪಟ್ಟು ಕಲಿತಾಗಲೇ ಕಾಲ ಉತ್ತಮವಾಗಿರೋದು. ಅನಾವಶ್ಯಕ ವಿಷಯದೊಳಗೇ ವಿಷವಿದ್ದರೆ  ಅಮೃತಕ್ಕೆ ಸ್ಥಾನವಿರದು.ಒಟ್ಟಿನಲ್ಲಿ ಎಲ್ಲರೂ ಅಮೃತ ಪುತ್ರರೆ ಆಗಿದ್ದರೂ  ಅಮೃತದಂತಹ ವಿಚಾರಗಳ ಶಿಕ್ಷಣ ಕೊಡದೆ ಆಳಿದವರೆ ಶ್ರೀಮಂತರಾದರು. ವಿಷ ಯಾವತ್ತೂ  ವಿಷವೇ. ಅತಿಯಾದ ಅಮೃತವೂ ವಿಷವಾಗಬಹುದು.ಅದಕ್ಕಾಗಿ  ಎರಡರಲ್ಲಿ ಅಡಗಿರುವ ತತ್ವ ಒಂದೇ ಎಲ್ಲಾ ಭೂಮಿ ಪುತ್ರರು. ಸುಜ್ಞಾನದಿಂದ ಮಾತ್ರ ಭೂ ಋಣ ತೀರಿಸಬಹುದು. ಅಜ್ಞಾನದ  ಹಣದಿಂದ ಸಾಲವೇ ಬೆಳೆಯೋದು. 

- ಅರುಣ ಉದಯಭಾಸ್ಕರ್


Saturday, February 10, 2024

Can we surrender to god?

ಭಗವಂತನಿಗೆ ಶರಣಾಗಲು ಸಾಧ್ಯವಿದೆಯೆ?



ಪುರಾಣಗಳಲ್ಲಿ ಕೆಲವು ಸೂಕ್ಷ್ಮ ಸತ್ಯ ಗಮನಿಸಿದರೆ ಎಲ್ಲಿಯವರೆಗೆ ಭಕ್ತರು ನೀನೇ ಸರಿ ಎಂದು ಭಗವಂತನಿಗೆ ಶರಣಾಗುವುದಿಲ್ಲವೋ ಅಲ್ಲಿಯವರೆಗೆ  ಭಗವಂತ ಹತ್ತಿರ ಬರದೆ ದೂರವಿರುವನು. ನಮ್ಮ ಹೋರಾಟ ಹೊರಗಿನ ವ್ಯಕ್ತಿಯೊಂದಿಗಿದ್ದಷ್ಟೂ ಒಳಗಿರುವ ಶಕ್ತಿಯ ಪರಿಚಯವಾಗದು. ಹಾಗಾಗಿ ನಾವು ಹೊರಗಿನ ವ್ಯಕ್ತಿ ಯನ್ನು  ಆಶ್ರಯಿಸಿಕೊಂಡೇ ಇರುತ್ತೇವೆ. ಎಲ್ಲರ ಮೂಲಕ ಕೆಲಸ ಮಾಡಿಸೋದು ಬುದ್ದಿ ಕಲಿಸೋದು ಜ್ಞಾನ ಕೊಡೋದು ಎಲ್ಲಾ ಪರಮಾತ್ಮನೇ ಆದರೂ  ಎಲ್ಲರ ಮನಸ್ಸು ದೇವರಂತಿರದು. ಅಂದರೆ ನಿಸ್ವಾರ್ಥ ನಿರಹಂಕಾರ. ಪ್ರತಿಫಲಾಪೇಕ್ಷೆ ಇಲ್ಲದೆ ಯಾವ ವ್ಯಕ್ತಿಯೂ ಸಹಕಾರ ಸಹಾಯ ಮಾಡೋದಿಲ್ಲವಾದ್ದರಿಂದ  ಒಬ್ಬರು ಇನ್ನೊಬ್ಬರ ಗುಲಾಮರೆ. ಗುಲಾಮಗಿರಿ ಹೆಚ್ಚಾದಾಗಲೇ ಮೇಲಿರುವ ಆ ಭಗವಂತನಿಗೆ ಶರಣಾಗೋದು. 

ದ್ರೌಪದಿಯ ವಸ್ತ್ರ ಅಪಹರಣ, ಕುಚೇಲನಿಗೆ ಕೃಷ್ಣನ ಕೃಪೆ, ಕುಬೇರನ  ಪರೀಕ್ಷೆ, ದಾಸ ಸಂತ ಶರಣರ ಅನುಭವ, ಕನಕನ ಭಕ್ತಿ, ಗಜೇಂದ್ರಮೋಕ್ಷ‌ ಇದರಲ್ಲಿ  ಹೊರಗಿನ ವ್ಯಕ್ತಿಯನ್ನು ನಂಬದೆ ಒಳಗಿನ ಶಕ್ತಿಯನ್ನೇ  ಆಶ್ರಯಿಸಿದ್ದರು. ಇದರರ್ಥ ನಮ್ಮ ಆತ್ಮಜಾಗೃತವಾಗಿದ್ದಷ್ಟೂ ನಾವು ಹೊರಗಿರುವ ವ್ಯಕ್ತಿಗಳ ಹಿಂದೆ  ಹೆಚ್ಚು ಬೀಳೋದಿಲ್ಲ.

ಹಾಗೆಯೇ ನಮ್ಮ ದೇಶದ ಸಮಸ್ಯೆಗೆ  ದೇಶದವರಲ್ಲಿಯೇ ಪರಿಹಾರ ಕಂಡುಕೊಂಡರೆ  ಸಮಸ್ಯೆಯಿಂದ ಮುಕ್ತಿ. ವಿದೇಶದೊಂದಿಗೆ‌  ಒಪ್ಪಂದ ಮಾಡಿಕೊಂಡರೆ  ಕಷ್ಟವಿದೆ.  ಒಳಗಿನ ಸಮಸ್ಯೆಗೆ ಪರಿಹಾರ ಒಳಗಿನ‌ಜ್ಞಾನದಿಂದಲೇ ಪಡೆದಾಗ ಉತ್ತಮ ಶಾಂತಿ ತೃಪ್ತಿ.

ಹೊರಗೆ ಕಂಡುಕೊಳ್ಳಲು  ಹೊರಗೆ ನಡೆದಷ್ಟೂ ಮುಗಿಯದ ಕಥೆ. ಪುರಾಣ ಕಾಲದ ಸತ್ಯಕ್ಕೆ ಪುರಾಣವೇ ಸಾಕ್ಷಿ. ಹಿಂದಿನ  ಧರ್ಮ ವನರಿತರೆ ಹಿಂದೂ ಧರ್ಮ ಸುರಕ್ಷಿತ.

ಇದನ್ನರಿಯದೆ ಮುಂದೆ ನಡೆದಷ್ಟೂ ಹಿಂದೆ ಬರೋದು ಕಷ್ಟ.

ರಾಜಕೀಯ ಪಕ್ಷಗಳಲ್ಲಿ ನಡೆದಿರುವ ಪಕ್ಷಾಂತರದಿಂದ   ಜಾತ್ಯಾಂತರವಾಗಲಿ,ಧರ್ಮಾಂತರವಾಗಲಿ  ಮತಾಂತರವಾಗಲಿ ದೇಶಾಂತರವಾಗಲಿ  ತಡೆಯಲಾಗದು ಇದರಿಂದ ಇನ್ನಷ್ಟು ಅಂತರಗಳೇ ಹೆಚ್ಚಾಗುತ್ತಾ  ಒಗ್ಗಟ್ಟು ಮರೆಯಾಗಿ ಬಿಕ್ಕಿಟ್ಟಿನ ಸಮಸ್ಯೆಗಳಿಗೆ ಅವಕಾಶ ಕೊಡುತ್ತದೆನ್ನುವ  ಕಾರಣಕ್ಕಾಗಿ ಮಾಡು ಇಲ್ಲ ಮಡಿ ಎಂದು ತಮ್ಮ ಧರ್ಮ ದೇಶವನ್ನು  ಬಿಡದೆ  ಯಾವ ರಾಜಕೀಯಕ್ಕೆ ಒಳಗಾಗದೆ ಸ್ವತಂತ್ರವಾಗಿ ನಮ್ಮ ಮಹಾತ್ಮರುಗಳು  ದೇವರ ಭಕ್ತರಾಗಿದ್ದೂ ದೇಶಭಕ್ತಿಯೆಡೆಗೆ ನಡೆದರು.ಈಗ ಅಸಂಖ್ಯಾತ ದೇವರಿದ್ದರೂ ಒಂದು ದೇಶವನ್ನು  ಒಗ್ಗಟ್ಟಿನಿಂದ  ಸರಿಪಡಿಸಲಾಗದಿರೋದೆ ದುರಂತ. ಇದಕ್ಕೆ ಕಾರಣವೇ ನಮ್ಮೊಳಗಿರುವ ಸ್ವಾರ್ಥ ಅಹಂಕಾರದ ರಾಜಕೀಯ ಪ್ರಜ್ಞೆ. ಇದರಲ್ಲಿ ಭಗವಂತನಿಗೆ ಶರಣಾಗಲು ಸಾಧ್ಯವಿದೆಯೆ? ನಾನಿರುವಾಗ ಭಗವಂತ ಕಾಣೋದಿಲ್ಲ. ನಾನು ಹೋದಾಗ  ಭಗವಂತನೊಬ್ಬನೆ.ಹಾಗೆ ದೇಶದ ಒಂದು ಸಣ್ಣ ಬಿಂದುವಾಗಿರುವ ನನ್ನಲ್ಲಿ ದೇಶಭಕ್ತಿ ಇದ್ದರೆ ದೇಶ ಕಾಣುತ್ತದೆ. ಭಕ್ತಿಯೇ ಇಲ್ಲದೆ ದೇಶವನ್ನು  ನಡೆಸಲು ಹೋದರೆ ನಾನೇ  ವಿನಾಶಕ್ಕೆ ಕಾರಣವಾಗಬಹುದು ಇದನ್ನು ಪ್ರತಿಯೊಬ್ಬರೂ  ಅರ್ಥ ಮಾಡಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ತಿಳಿದು ಧರ್ಮ ದೆಡೆಗೆ ನಡೆದರೆ ಉತ್ತಮ ಬದಲಾವಣೆ ಸಾಧ್ಯವಿದೆ. ಬದಲಾವಣೆ ಜಗದ ನಿಯಮ.ಆ ಜಗತ್ತನ್ನು ಬದಲಾಯಿಸುವ ಮೊದಲು ಒಳಗಿರುವ ಜಗತ್ತನ್ನು ಅರ್ಥ ಮಾಡಿಕೊಂಡರೆ  ಉತ್ತಮ ಫಲ.

- ಅರುಣ ಉದಯಭಾಸ್ಕರ್